ನಗರ ಗತಿಯನ್ನು ನಿಯಂತ್ರಿಸುವ ಕ್ಷೇಮ


Team Udayavani, Jul 29, 2017, 7:25 AM IST

29-ANKANA-1.jpg

ವಾಹನ ನಿಲುಗಡೆ ಸಮಸ್ಯೆಯಾಗಿ ತೋರುತ್ತಿಲ್ಲ. ನಗರವೊಂದು ಬೇಕಾಬಿಟ್ಟಿ ಬೆಳೆಯದಿರದಂತೆ, ಅವ್ಯವಸ್ಥೆಯ ಗೂಡಾಗದಂತೆ ನಿಯಂತ್ರಿಸುವ ಪರಿಹಾರವಾಗಿ ಕಾಣುತ್ತದೆ. ಆ ನಿಟ್ಟಿನಲ್ಲೇ ಕಾರ್ಯ ಪ್ರವೃತ್ತವಾದರೆ ನಮ್ಮ ನಗರಗಳು ಹೊಗೆಗೂಡಾಗುವುದನ್ನು ತಪ್ಪಿಸಿದ ಪುಣ್ಯ ಬಂದೀತು. 

ಆಗಾಗ್ಗೆ ಎಷ್ಟೊಂದು ವಿಪರ್ಯಾಸವೆನಿಸುವುದುಂಟು. ಯಾಕೆಂದರೆ ಹಳ್ಳಿಯಂಥ ಕುಗ್ರಾಮದಲ್ಲಿನ ಅಸೌಲಭ್ಯಗಳನ್ನು ಕಂಡು ರೋಸಿ ಹೋಗಿ ಇಂದ್ರನ ಅಮರಾವತಿಯಂಥ ನಗರಗಳನ್ನು ಸೃಷ್ಟಿಸಲು ಹೊರಟವರು ನಾವು. ನಮಗೆ ಆಗ ಇದ್ದ ನಂಬಿಕೆಯೆಂದರೆ ಅಮರಾವತಿಯಲ್ಲಿ ಯಾವುದೇ ಕೊರತೆ ಇರದು. ಅಲ್ಲಿ ಎಲ್ಲವೂ ಪರಿಪೂರ್ಣ. ಆದ ಕಾರಣ, ಈ ಬಾಲಿಶವೆನಿಸುವ ಸಮಸ್ಯೆಗಳೆಲ್ಲ ಇರದೆಂದುಕೊಂಡಿದ್ದೆವು. ಅದಕ್ಕೇ ತಾನೇ ಮನುಷ್ಯನನ್ನು ಬದಿಗೆ ಸರಿಸುತ್ತಾ ಯಂತ್ರಗಳೊಂದಿಗೆ ವ್ಯವಹರಿಸುತ್ತಾ ನಗರವನ್ನು ನಿರ್ಮಿಸಿದ್ದು. 

ಇದರ ಪರಿಣಾಮವೇ ತಾನೇ, ಗಡಿ ಗಡಿಗೂ ಇಂದು ನಗರಗಳಲ್ಲಿ ಯಂತ್ರಗಳು ನಮ್ಮ ಸೇವಕರಂತೆ ನಿಂತಿರುವುದು? ಅದಕ್ಕೇ ತಾನೇ ಮನುಷ್ಯನನ್ನು ಕಡಿಮೆ ನಂಬುತ್ತಾ ಯಂತ್ರವನ್ನು ಹೆಚ್ಚು ಅವಲಂಬಿಸುತ್ತಾ ಹೋಗಿದ್ದು? ಮನುಷ್ಯನೊಳಗಿನ ಮನಸ್ಸು ಅವನನ್ನು ಭ್ರಷ್ಟಾಚಾರ, ಕೆಟ್ಟವನಾಗಿಸಿಬಿಡಬಹುದು. ಆದರೆ ಯಂತ್ರ ಆಗಲಿಕ್ಕೆ ಸಾಧ್ಯವೇ ಇಲ್ಲ; ಅದಕ್ಕೆ ಮನಸ್ಸಿಲ್ಲ ಎಂದುಕೊಂಡವಲ್ಲವೇ ಅಮರಾವತಿಯ ಬಾಗಿಲಿಗೆ ಬಂದು ನಿಂತಿದ್ದು. 

ಇವತ್ತು ನಾವಂದುಕೊಂಡ ಅಮರಾವತಿಗಳು, ಅದರ ಕನಸಿನಲ್ಲಿ ನಿರ್ಮಿಸಿದ ನಮ್ಮ ಅಮರಾವತಿಗಳೆಲ್ಲ ಸಮಸ್ಯೆಯ ಗೂಡೆಂದು ತೋರುತ್ತಿವೆ. ಕೆಲವೊಮ್ಮೆ ಕಂಫ‌ರ್ಟ್ಸ್ಗಳ ಸುರಂಗದಲ್ಲಿ ಕತ್ತಲಿನೆಡೆಗೆ ಸಾಗುತ್ತಿದ್ದೇವೆಯೋ ಎಂದೂ ಅನಿಸುವುದುಂಟು. ಸುರಂಗದೊಳಗೆ ಒಳ ಹೊಕ್ಕಾಗ ಕೃತಕ ದೀಪಗಳು (ನಾವೇ ಹಾಕಿದ ವಿದ್ಯುತ್‌ ದೀಪಗಳು) ದಾರಿ ತೋರಿಸುವುದುಂಟು. ಆದರೆ, ಮುಂದೆಲ್ಲೋ ಹೊರಗೆ ಸಹಜ ಬೆಳಕಿನ ಕಡೆಗೆ ಮುಟ್ಟುವುದು ಖಚಿತವೆಂಬ ನಂಬಿಕೆ ಇರುವ ಕಾರಣ ಅಥವಾ ನಂಬಿಕೆಯೊಂದಿಗೆ ಪ್ರಯಾಣ ಆರಂಭಿಸುವುದರಿಂದ ನಮಗೆ ಸುರಂಗದಲ್ಲಿ ನಡೆಯುವುದ ಕಷ್ಟವೆನಿಸದು. ಒಂದುವೇಳೆ ಹೊರ ಹೋಗುವ ದಾರಿ (ಎಕ್ಸಿಟ್‌) ಯೇ ಇಲ್ಲವೆಂದುಕೊಳ್ಳಿ ಅಥವಾ ಖಚಿತವಿಲ್ಲದೇ ಹೊರಟಿದ್ದೀರೆಂದುಕೊಂಡರೆ ಪ್ರಯಾಣಕ್ಕೆ ಉತ್ಸಾಹವೇ ಇರದು. ಕೃತಕ ಬೆಳೆಕಿನಲ್ಲಿ ಹೆಚ್ಚು ದೂರ ಸಾಗುವುದು ಕಷ್ಟ. ಹಾಗೇ ಹಾಗಿದೆ ಈಗಿನ ಸ್ಥಿತಿ.

ಈ ಹಿನ್ನೆಲೆಯಲ್ಲೇ ಹೇಳಿದ್ದು
ಇದನ್ನೇ ಹಿನ್ನೆಲೆಯನ್ನಾಗಿಟ್ಟುಕೊಂಡೇ ನಾವಿನ್ನೂ ಪಾರ್ಕಿಂಗ್‌ನಂಥ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದದ್ದು. ನಮ್ಮೆದುರಿಗೆ ಸಮಸ್ಯೆಗೆ ಪರಿಹಾರವೆಂದರೆ ಈಗಿರುವುದಕ್ಕಿಂತ ಇನ್ನಷ್ಟು ಹೆಚ್ಚು ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಎಂದೇ ಅರ್ಥ. ಯಾಕೆಂದರೆ ಅದರಲ್ಲಿ ಕೋಟಿ ಕೋಟಿ ರೂ.ಗಳ ಲೆಕ್ಕಾಚಾರಗಳಿವೆ. ಹಾಗಾಗಿ ನಮಗೆ ಅಭಿವೃದ್ಧಿ ಎಂದರೂ ಅದು ಕೋಟಿಗಳ ಲೆಕ್ಕದಲ್ಲೇ ನಡೆಯಬೇಕು; ಪುಕ್ಕಟೆ ಅಥವಾ ಕಡಿಮೆ ಖರ್ಚಿನಲ್ಲಿ ಪರಿಹಾರ ಸಿಕ್ಕಿದರೆ ಬೇಡವೆನ್ನುವ ಮನೋಸ್ಥಿತಿಯಲ್ಲಿದ್ದೇವೆ. ಇದು ನಗರೀಕರಣದ ಹಿನ್ನೆಲೆಯಲ್ಲೇ, ಅದರ ಸ್ವಭಾವದ ನೆಲೆಯಲ್ಲೇ ಹುಟ್ಟಿಕೊಂಡ ಪ್ರವೃತ್ತಿ. ನಮಗೆ ಯಾವುದೇ ಪರಿಹಾರವಿದ್ದರೂ ದುಬಾರಿಯದ್ದಾಗಿರಬೇಕು. ಆಗ ಮಾತ್ರ ಒಳ್ಳೆಯದು, ಗುಣಮಟ್ಟದ್ದು ಎಂಬ ಅಪಾರ ನಂಬಿಕೆ. 

ಹಳ್ಳಿಯಲ್ಲಿದ್ದ ಹಳೇ ವೈದ್ಯರೊಬ್ಬರು 10 ರೂ.ಗೆ ಜ್ವರಕ್ಕೆ ಔಷಧಿ ಕೊಟ್ಟರೆ ನಮಗೆ ನಂಬಿಕೆಯಿಲ್ಲ. ಏನೋ, ಅವರು ಯಾವುದೋ ಹಳೆಯ ಔಷಧ ಕೊಟ್ಟರು, ಜ್ವರ ಕಡಿಮೆಯಾಗಿಲ್ಲ ಎನ್ನುತ್ತೇವೆ. ಬಳಿಕ ನಗರದ ವೈದ್ಯರಲ್ಲಿಗೆ ಹೋದಾಗ, ಪರೀಕ್ಷೆ ಮಾಡಿ ದೊಡ್ಡ ಮಾತ್ರೆ ಕೊಟ್ಟರು ಎಂದುಕೊಳ್ಳಿ, ಖುಷಿಯಿಂದ ಜ್ವರವನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಇದು ವೈದ್ಯರ ದೋಷ ಅಲ್ಲ; ನಮ್ಮ ಮನಸ್ಥಿತಿಯ ದೋಷ. ಖರ್ಚಿನ ಲೆಕ್ಕಾಚಾರದಲ್ಲಿ ಅಭಿವೃದ್ಧಿಯನ್ನು ಅಳೆಯುವ ಗುಣ ನಮಗೆ ಬಂದುಬಿಟ್ಟಿದೆ. 

ಸುಲಭ ಪರಿಹಾರವೇನು?
ದುಬಾರಿಯ ಮನಸ್ಥಿತಿಯಲ್ಲಿದ್ದವರಿಗೆ ಸರಳ ಮತ್ತು ಸುಲಭ ಪರಿಹಾರದತ್ತ ಯೋಚನೆ ಮಾಡುವಂಥದ್ದೇ ಆಗದ ಸ್ಥಿತಿ. ಅದರೂ, ಪ್ರಸ್ತುತ ಎಲ್ಲ ಅಭಿವೃದ್ಧಿಶೀಲ ರಾಷ್ಟ್ರಗಳೂ ಇರುವ ಸೌಲಭ್ಯಗಳನ್ನು ಅನುಭವಿಸಲು ಕಲಿಯಿರಿ. ಹೊಸದೇನನ್ನೂ ಕಲ್ಪಿಸುವುದಿಲ್ಲ ಎನ್ನುತ್ತಿವೆ. ಅದಕ್ಕೇ ಪಾರ್ಕಿಂಗ್‌ ಶುಲ್ಕವನ್ನು ಹೆಚ್ಚಿಸುತ್ತಿವೆ. ಉದಾಹರಣೆಗೆ, ಇತ್ತೀಚೆಗೆ ಸಂಸ್ಥೆಯೊಂದು ನಡೆಸಿದ ಅಧ್ಯಯನ ಪ್ರಕಾರ ಅಮೆರಿಕ, ಜರ್ಮನಿ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ ನಗರಗಳಲ್ಲಿನ ವಾಹನಗಳ ಚಾಲಕರು ಪ್ರತಿ ವರ್ಷವೂ ಕೇವಲ ಪಾರ್ಕಿಂಗ್‌ ಶುಲ್ಕ ಮತ್ತು ಸುರಕ್ಷಿತ-ಸುಸಜ್ಜಿತ ಪಾರ್ಕಿಂಗ್‌ಗೆ ಬಿಲಿಯನ್‌ಗಟ್ಟಲೆ ಹಣವನ್ನು ಖರ್ಚು ಮಾಡುತ್ತಿದ್ದಾರಂತೆ. ಮೈಸೂರಿನ ದೇವರಾಜ ಅರಸ್‌ ರಸ್ತೆಯಲ್ಲಿ ಗಂಡ ಕಾರು ನಿಲ್ಲಿಸಲು ಪಾರ್ಕಿಂಗ್‌ಗೆ ಜಾಗ ಹುಡುಕುವಷ್ಟರಲ್ಲಿ ಹೆಂಡತಿ ಶಾಪಿಂಗ್‌ ಮುಗಿಸಿಕೊಂಡು ಬಂದಿರುತ್ತಾಳೆಂಬ ಪ್ರಸಂಗಗಳ ಮಧ್ಯೆ ಹಿಂದೆ ತಿಳಿಸಿದ್ದೆ. ಇದೇ ಪರಿಸ್ಥಿತಿ ಅಭಿವೃದ್ಧಿಗೊಂಡ ರಾಷ್ಟ್ರಗಳಲ್ಲೂ ಇವೆ. 

ಈ ರಾಷ್ಟ್ರಗಳಲ್ಲಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿದಂತೆ (ಸಂಖ್ಯೆಗಳಲ್ಲಿ ಹೆಚ್ಚಳ) ವಾಹನ ಚಾಲಕರಿಗೆ ಪಾರ್ಕಿಂಗ್‌ ಎನ್ನುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಗರಗಳಲ್ಲಿ ಎಲ್ಲವೂ ಅವಕಾಶವೇ ಎಂಬ ಮಾತಿದೆ. ಅಂದರೆ ಅಲ್ಲಿ ನಡೆಯುವ ಘಟನೆಗಳನ್ನೂ ತಮ್ಮ ಅವಕಾಶವನ್ನಾಗಿ ಬಳಸಿಕೊಳ್ಳುವವರು, ದುಡಿಸಿಕೊಳ್ಳುವವರು ಇದ್ದಾರೆ. ಅದರಂತೆಯೇ, ನಿರ್ದಿಷ್ಟ ನಗರಗಳಲ್ಲಿ ಪಾರ್ಕಿಂಗ್‌ ಲಭ್ಯತೆಯನ್ನು ತಿಳಿಸಿಕೊಡಲೆಂದೇ ಆ್ಯಪ್‌ಗ್ಳು ಹುಟ್ಟಿಕೊಂಡಿವೆ. ಕೆಲವು ವಾಹನಗಳ ತಯಾರಿಕಾ ಕಂಪೆನಿಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ವಾಹನಗಳ ಪಾರ್ಕಿಂಗ್‌ ಸ್ಥಳ ಲಭ್ಯತೆಯನ್ನು ತಿಳಿಸುವಂತೆ ಸೌಲಭ್ಯವನ್ನು ವಾಹನಗಳಲ್ಲಿ ಕೊಡುವತ್ತ ಮುಖ ಮಾಡಿವೆ. ಬಿಎಂಡಬ್ಲ್ಯು ಕಾರು ಕಂಪೆನಿ, ಇತ್ತೀಚೆಗೆ ಅಮೆರಿಕದಂಥ ಕಡೆ ಬಿಡುಗಡೆಗೊಳಿಸಿದ ಕಾರುಗಳಲ್ಲಿ ಪಾರ್ಕಿಂಗ್‌ ಜಾಗವನ್ನು ಹುಡುಕುವ (ಟ್ರ್ಯಾಕರ್‌) ಸೌಲಭ್ಯವನ್ನು ಕಲ್ಪಿಸಿದೆಯಂತೆ. ಅಲ್ಲಿಗೆ ಸಮಸ್ಯೆಯ ತೀವ್ರತೆ ಎಷ್ಟಿದೆ ಎಂದು ಲೆಕ್ಕ ಹಾಕೋಣ. 

ಕಳೆದುಕೊಳ್ಳುತ್ತಿರುವುದು ಕಡಿಮೆಯಲ್ಲ
ಇನ್ರಿಕ್ಸ್‌ ಸಂಸ್ಥೆ ಬ್ರಿಟನ್‌, ಜರ್ಮನಿ ಮತ್ತು ಅಮೆರಿಕದಲ್ಲಿ ಸುಮಾರು 18 ಸಾವಿರ ಚಾಲಕರ ಪ್ರತಿಕ್ರಿಯೆ ಪಡೆದು ನಡೆಸಿದ ಸಂಶೋಧನೆ ಪ್ರಕಾರ, ವರ್ಷಕ್ಕೆ ಸಾಮಾನ್ಯವಾಗಿ ಒಬ್ಬ ಚಾಲಕ ಪಾರ್ಕಿಂಗ್‌ ಜಾಗ ಹುಡುಕಲೆಂದು ಮತ್ತು ಅದಕ್ಕಾಗಿ ವ್ಯಯಿಸಿದ ಇಂಧನದ ಲೆಕ್ಕ ಸುಮಾರು 345 ಡಾಲರ್‌. ಇದೇ ಬ್ರಿಟನ್‌ನಲ್ಲಿ ಹೆಚ್ಚುವರಿ ಅವಧಿಗಾಗಿ ಪಾವತಿಸುವ ಹಣ ಸುಮಾರು 209 ಪೌಂಡ್‌ಗಳು. ಜಾಗ ಹುಡುಕುತ್ತಾ ಕಳೆದ ಸಮಯ ಮತ್ತು ಇಂಧನದ ಲೆಕ್ಕ ಸುಮಾರು 733 ಪೌಂಡ್‌ಗಳು.  ಜರ್ಮನಿಯಲ್ಲಿ ಸುಮಾರು 98 ಯುರೋಗಳನ್ನು ಹೆಚ್ಚುವರಿಯಾಗಿ ಪಾವತಿಸಿದರೆ, ದಂಡ ಪಾವತಿಸುವ ಪ್ರಮಾಣವೂ ಬಹಳಷ್ಟಿದೆ. ಸುಮಾರು 896 ಯುರೋ ಗಳನ್ನು ಸೂಕ್ತ ಜಾಗವನ್ನು ಹುಡುಕುವುದಕ್ಕಾಗಿ ವ್ಯಯ ಮಾಡುತ್ತಾರೆ. 

ಇವೆಲ್ಲವನ್ನೂ ಲೆಕ್ಕ ಹಾಕಿದ ಮೇಲೆ ನಮ್ಮ ನಗರಗಳಲ್ಲಿನ ಕಥೆಗಳನ್ನು ನೋಡೋಣ. ಬಹಳಷ್ಟು ಕಡೆ ಪಾವತಿಸಿ ವಾಹನ ನಿಲುಗಡೆ ಮಾಡುವ (ಪೇ ಪಾರ್ಕ್‌) ಸೌಲಭ್ಯಗಳಿಲ್ಲ. ಆದ ಕಾರಣ, ನಮ್ಮ ಜೇಬಿನಿಂದ ಖರ್ಚಾಗುತ್ತಿಲ್ಲ. ಈಗ ಪ್ರತಿ ಸ್ಥಳೀಯ ಸರಕಾರ ಅಥವಾ ಆಡಳಿತ ಜನರಿಗೆ ವಾಹನ ನಿಲುಗಡೆಗೆ ಸೌಲಭ್ಯ ಕಲ್ಪಿಸಬೇಕು ಎಂದು ವಾದಿಸಲಾಗುತ್ತಿದೆ. ಈ ವಾದ ಯಾವ ಹಂತಕ್ಕೆ ತಲುಪುತ್ತಿದೆಯೆಂದರೆ, ಪ್ರತಿ ನಾಗರಿಕನ‌ ಮೂಲ ಹಕ್ಕೆಂಬಂತೆ ಪ್ರತಿಪಾದಿಸಲಾಗುತ್ತಿದೆ. ನಗರದಲ್ಲಿರುವ ವಾಹನಗಳಿಗೆ ಸೂಕ್ತ ನಿಲುಗಡೆ ಸೌಲಭ್ಯ ಕಲ್ಪಿಸದಿದ್ದರೆ ಆ ಸಂಬಂಧಪಟ್ಟ ಆಡಳಿತ ನಿಷ್ಕ್ರಿಯವಾಗಿದೆ ಎಂದು ವ್ಯಾಖ್ಯಾನಿಸುತ್ತಿದ್ದೇವೆ. 

ನಮ್ಮ ಸ್ಥಳೀಯ ಆಡಳಿತದ ಪಕ್ಷಗಳೂ ಬೆಳೆಯುವ ಬಾಲದ ಅಗಾಧತೆಯನ್ನು ಗ್ರಹಿಸದೇ, ತಮ್ಮ ಚುನಾವಣೆ ಪ್ರಣಾಳಿಕೆಗಳಲ್ಲಿ ಇಂಥ ಸೌಲಭ್ಯಗಳನ್ನು ಕಲ್ಪಿಸುವ ಭರವಸೆ ನೀಡುತ್ತಿವೆ. ಅಧಿಕಾರಕ್ಕೆ ಬಂದ ಮೇಲೆ ಸಮಸ್ಯೆಯ ತೀವ್ರತೆ ಅರ್ಥವಾಗಿ ತಮ್ಮ ಅವಧಿಯಲ್ಲಿ ವಿಷಯವನ್ನು ಚರ್ಚೆಯ ಮುನ್ನೆಲೆಗೆ ತಾರದೇ ನುಣುಚಿಕೊಂಡು ಹೋಗುವ ಉದಾಹರಣೆಗಳೂ ಇವೆ.  ಆದರೆ, ಖಂಡಿತ ನಮ್ಮ ಪಕ್ಷಗಳು ಮತ್ತು ಆಳುವವರು ಗ್ರಹಿಸುವಷ್ಟು ಚಿಕ್ಕ ಸಮಸ್ಯೆಯಲ್ಲ. ನಗರದ ಎಲ್ಲ ಸಮಸ್ಯೆಗಳೂ ಹೀಗೆ, ನದಿಗಳಲ್ಲಿನ ಸುಳಿಯಂತೆಯೇ. ಚಿಕ್ಕದಾಗಿ ನಮ್ಮನ್ನು ಒಳಸೆಳೆದುಕೊಳ್ಳುವಂಥದ್ದು. ಇದೇ ಕಾರಣದಿಂದಲೇ, ನಗರಗಳ ಗತಿಯನ್ನು ನಿಯಂತ್ರಿಸುವುದೇ ಕ್ಷೇಮ ಹೊರತು ಬೇರೇನೂ ಅಲ್ಲ.

ಅರವಿಂದ ನಾವಡ

ಟಾಪ್ ನ್ಯೂಸ್

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.