ಈ ನದಿಯೂ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು!


Team Udayavani, Oct 28, 2017, 1:10 PM IST

27-27.jpg

ನಾವು ಮೋಡ ಸೃಷ್ಟಿಸಿ ಮಳೆ ತರಲು ಹೊರಡಬಹುದು. ಆದರೆ ಮಳೆ ತರುವುದು ಕಷ್ಟ ಎಂಬುದು ಸ್ಪಷ್ಟ. ನದಿಯೊಂದನ್ನು ಹಾಳು ಮಾಡಿದರೆ ಸೃಷ್ಟಿಸುವುದೂ ಅಸಾಧ್ಯ.

ನದಿಗಳ ಬಗೆಗಿನ ಮಾತು ಎಷ್ಟು ಹೇಳಿದರೂ ಮುಗಿಯದು. ನಾಗರಿಕತೆಯ ಜನನಕ್ಕೆ ಕಾರಣವಾದದ್ದು ಇದೇ ನದಿಗಳು. ಸಿಂಧೂ ನಾಗರಿಕತೆ ಹುಟ್ಟಿದ್ದು ಸಿಂಧೂ ನದಿಯ ತೀರದಲ್ಲಿ. ಅದಕ್ಕೆ ಬೇಕಾದಷ್ಟು ಐತಿಹಾಸಿಕ ಪುರಾವೆಗಳಿವೆ. ಅಷ್ಟೇ ಏಕೆ? ಹಲವು ನಗರಗಳು ಇಂದು ಬದುಕಿರುವುದೇ ನದಿಗಳ ತೀರದಲ್ಲಿ. ಯಮುನಾ ನದಿಯಿಲ್ಲದ ದಿಲ್ಲಿಯನ್ನು ನೆನೆಸಿಕೊಳ್ಳಿ. ಗಂಗೆ ಇಲ್ಲದ ವಾರಣಾಸಿ ನೆನಪಿಸಿಕೊಳ್ಳಿ, ಕಾವೇರಿ ಇಲ್ಲದ ಮೈಸೂರನ್ನು ಕಲ್ಪಿಸಿಕೊಳ್ಳಿ. 

ದುರಂತದ ಸಂಗತಿಯೆಂದರೆ ಅಂಥದೊಂದು ದಿನ ಹತ್ತಿರವಾಗುತ್ತಿದೆ. ಯಾವ ನದಿ ತೀರಗಳಲ್ಲಿ ನಗರಗಳು ಅರಳಿದವೋ, ಅವುಗಳೇ ಆ ನದಿಗಳನ್ನು ನುಂಗತೊಡಗಿವೆ. ಇದೊಂದು ಬಗೆಯಲ್ಲಿ ಭಸ್ಮಾಸುರನ ಕಥೆಯಂತೆಯೇ. ನಗರಗಳು ತಮ್ಮ ತಲೆಯ ಮೇಲೆಯೇ ತಮ್ಮ ಕೈಯನ್ನು ಇಟ್ಟುಕೊಂಡು ನಾಶವಾಗಲು ಅಭ್ಯಾಸ ಮಾಡುತ್ತಿವೆ ಎಂದೇ ಅನಿಸುವುದುಂಟು. ಇದು ಬರಿಯ ಅನಿಸಿಕೆಯಲ್ಲ; ಎದುರಿನ ವಾಸ್ತವ. 

ಮತ್ತೂಂದು ನದಿಯ ಕಥೆ
ಈ ನದಿಯ ಕಥೆಯನ್ನೂ ಕೇಳಿದ ಮೇಲೆ ಆಗುವ ಬೇಸರವೇ ಬೇರೆ. ಸಾಕಷ್ಟು ಹಣವಿರುವ, ವಿದ್ಯಾವಂತರಿರುವ ಅಮೆರಿಕದಲ್ಲೂ ನದಿಗಳದ್ದು ದಾರಿದ್ರ ಸ್ಥಿತಿ ಎಂದರೆ ತಪ್ಪೇನೂ ಇಲ್ಲ. “ಕುಯಹೋಗೊ’ ಎಂಬುದು ಈ ನದಿಯ ಹೆಸರು. ಇದು ಬಹಳ ಕುಪ್ರಸಿದ್ಧವಾಗಿರುವುದು ತನ್ನ ಪರಿಸರ ಮಾಲಿನ್ಯದಿಂದಾಗಿಯೇ. ಈ ನದಿಯ ದುರಾದೃಷ್ಟವೋ ಏನೋ, ಇದು ಹರಿಯುವುದು ಅತ್ಯಂತ ಕಿಷ್ಕಿಂಧೆಯಂತಿರುವ ನಗರ ಪ್ರದೇಶಗಳ ಮಧ್ಯೆಯೇ. ಹಾಗಾಗಿ ತ್ಯಾಜ್ಯಗಳಿಂದ ಹಿಡಿದು ಎಲ್ಲವನ್ನೂ ಹೊತ್ತುಕೊಂಡು ಸಾಗಬೇಕು. ಇದರೊಂದಿಗೆ ಕೈಗಾರಿಕೆಗಳ ತ್ಯಾಜ್ಯಕ್ಕಂತೂ ಕೊನೆಯೇ ಇಲ್ಲ. ನೀವು ನಂಬಲಾರಿರಿ. 1868ರಿಂದಲೇ ಇದುವರೆಗೆ ಸುಮಾರು 13 ಬಾರಿ ಬೆಂಕಿ ಹೊತ್ತಿರಬಹುದು. ಇದಕ್ಕೆ ಕಾರಣ ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿ ಎಂಬುದೂ ಸ್ಪಷ್ಟವಾಗಿದೆ. 

ಬೆಳ್ಳಂದೂರು ಕೆರೆಯ ಕಥೆಯೇ
ಈ ನದಿಯ ಕಥೆಯೂ ನಮ್ಮ ಬೆಂಗಳೂರಿನ ಬೆಳ್ಳಂದೂರು ಕೆರೆಯ ಕಥೆಯೇ. ವರ್ಷಕ್ಕೆ ಒಂದು ಬಾರಿಯೋ, ಎರಡು ಬಾರಿಯೋ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಹೊತ್ತಿಕೊಂಡು ಸುದ್ದಿಯಾಗುವುದು ಗೊತ್ತೇ ಇದೆ. ಮೊದ ಮೊದಲಿಗೆ ಆಡಳಿತಗಾರರು ಯಾವುದ್ಯಾವುದೋ ಕಾರಣ ಹೇಳಿದರೂ ಬಳಿಕ ಕೈಗಾರಿಕೆಗಳ ತ್ಯಾಜ್ಯಗಳ ವಿಲೇವಾರಿ ಪರಿಣಾಮ ಎಂಬುದು ಸ್ಪಷ್ಟವಾಯಿತು. ಇಡೀ ಕೆರೆಯಲ್ಲಿ ನೊರೆ ಬಂದು ಸೋಪಿನ ಗುಳ್ಳೆಗಳು ತುಂಬಿಕೊಂಡಂತೆ ಕಾಣುತ್ತಿದ್ದುದು ಹಳೆಯ ಮಾತು. ನೀರಿನಲ್ಲಿ ಬೆಂಕಿ ಉರಿಯದು ಎಂದೇನಾದರೂ ಮಕ್ಕಳಿಗೆ ಹೇಳಿದರೆ, ಅವರು ನಮ್ಮನ್ನೇ ಬೆಳ್ಳಂದೂರು ಕೆರೆಯ ಬಳಿ ಕರೆದುಕೊಂಡು ಹೋಗಿ ತೋರಿಸಬಹುದು. ಅಂಥ ಸ್ಥಿತಿ ಇತ್ತು. 

ಅದೇ ಸ್ಥಿತಿ ಈ ನದಿಯಲ್ಲೂ ಇತ್ತು. ವಿಪರೀತ ಕೈಗಾರಿಕೆಗಳ ತ್ಯಾಜ್ಯ ವಿಲೇವಾರಿ ಮಾಡಿದ್ದ ಕಾರಣ, ಇಲ್ಲಿ ಆಗಾಗ್ಗೆ ಬೆಂಕಿ ಹೊತ್ತಿಕೊಳ್ಳುತ್ತಿತ್ತು. ಎಷ್ಟೋ ಬಾರಿ ಇಡೀ ನದಿಯ ಭಾಗ ಕಪ್ಪು ಬಣ್ಣಕ್ಕೆ ತಿರುಗಿ ಆತಂಕ ಹುಟ್ಟಿಸುತ್ತಿತ್ತು. 1952 ರ ಸಂದರ್ಭದಲ್ಲಿ ಇಂಥದ್ದೇ ಒಂದು ಬೆಂಕಿ ಹೊತ್ತಿಕೊಂಡು ಯಾವ ಬಗೆಯ ಅವಾಂತರವನ್ನು ಸೃಷ್ಟಿಸಿತ್ತೆಂದರೆ, ಸುಮಾರು ಒಂದು ಮಿಲಿಯನ್‌ ಅಮೆರಿಕನ್‌ ಡಾಲರ್‌ಗಿಂತಲೂ ಹೆಚ್ಚು ನಷ್ಟ ಉಂಟು ಮಾಡಿತ್ತು. ಅಪಾರ ಪ್ರಮಾಣದ ದೋಣಿಗಳು, ಸೇತುವೆ, ನದಿ ತೀರದಲ್ಲಿದ್ದ ಬೃಹತ್ತಾದ ಕಟ್ಟಡವನ್ನೆಲ್ಲಾ ಆಹುತಿ ತೆಗೆದುಕೊಂಡಿತ್ತು. ವಿಶೇಷವೆಂದರೆ, ಟೈಮ್‌ ನಿಯತಕಾಲಿಕ ಈ ಅನಾಹುತವನ್ನು ಅತ್ಯಂತ ಗಂಭೀರವಾಗಿ ಪ್ರಕಟಿಸಿತ್ತು. “ಕಯುಹೋಗಾ ನದಿ ಹರಿಯುವುದಕ್ಕಿಂತ ಹೆಚ್ಚಾಗಿ ಉರಿಯುತ್ತದೆ’ ಎಂದು ಹೇಳಿತ್ತು. ಇದು ಸಮಸ್ಯೆಯ ಭೀಕರತೆಯನ್ನು ಹೇಳಿದ ಮಾದರಿ ಎನ್ನುವುದು ಸುಳ್ಳಲ್ಲ. ಮತ್ತೆ 1969ರಲ್ಲಿ ನದಿ ಹೊತ್ತಿಕೊಂಡು ಉರಿದು ಮತ್ತಷ್ಟು ನಷ್ಟವನ್ನು ಉಂಟು ಮಾಡಿತು. 

ಇದರ ಹಿನ್ನೆಲೆಯಲ್ಲೇ ಎಚ್ಚೆತ್ತ ನಾಗರಿಕರು ನದಿ ಮಾಲಿನ್ಯ ವಿರುದ್ಧ ಹೋರಾಟ ಆರಂಭಿಸಿದರು. ಈ ಹೋರಾಟದ ಪರಿಣಾಮವೋ ಎಂಬಂತೆ ಸ್ಥಳೀಯ ಸರಕಾರ ನದಿ ಸಂರಕ್ಷಣೆಗೆಂದು ಕಾಯಿದೆ ರೂಪಿಸಿತು. ಜತೆಗೆ ಗ್ರೇಟ್‌ ಲೇಕ್ಸ್‌ ಎನ್ನುವ ಕಲ್ಪನೆಯನ್ನು ತಂದಿತು. ಇದರೊಂದಿಗೆ ಪರಿಸರ ಸಂರಕ್ಷಣಾ ಘಟಕವನ್ನು ಸ್ಥಾಪಿಸಿತು. ಇವೆಲ್ಲವೂ ಬಳಿಕ ನದಿಗೆ ಸೇರುತ್ತಿರುವ ತ್ಯಾಜ್ಯಗಳು, ಕಲುಷಿತಗೊಳ್ಳುತ್ತಿರುವ ಮಾರ್ಗಗಳನ್ನೆಲ್ಲ ಗಮನಿಸತೊಡಗಿದವು. ಹತ್ತು ಹಲವು ಕ್ರಮಗಳನ್ನು ಕೈಗೊಂಡ ಮೇಲೂ ನಿಧಾನವಾಗಿ ನದಿಯ ನೀರಿನ ಗುಣಮಟ್ಟ ಸುಧಾರಿಸತೊಡಗಿತು. ಇಂಥದೊಂದು ಪ್ರಯತ್ನಕ್ಕೆ ಸಾಕಷ್ಟು ಇಂಬು ಸಿಗಲೆಂದು ಅಮೆರಿಕದ 18 ಪಾರಂಪರಿಕ ನದಿಗಳ ಸ್ಥಾನದಲ್ಲಿ ಈ ನದಿಗೂ ಸ್ಥಾನ ಕಲ್ಪಿಸಲಾಯಿತು. ಆದರೂ ಸುಧಾರಣೆ ನಿಧಾನವಾಗಿ ನಡೆಯುತ್ತಿದೆ ಎಂದು ಸಮಾಧಾನ ಪಟ್ಟುಕೊಳ್ಳಬೇಕಷ್ಟೇ. 

ಅಂದುಕೊಂಡಂತೆ ಇಂದೂ ನಡೆದಿಲ್ಲ
ಇಷ್ಟೆಲ್ಲದರ ನಡುವೆ ಬೆಳೆಯುತ್ತಿರುವ ನಗರಗಳು ಮತ್ತು ಅವುಗಳು ಸೃಷ್ಟಿಸುತ್ತಿರುವ ತ್ಯಾಜ್ಯಗಳೆಲ್ಲ ಒಂದಲ್ಲ ಒಂದು ರೂಪದಲ್ಲಿ ಮತ್ತೆ ನದಿಗೆ ಅಲ್ಪ ಪ್ರಮಾಣದಲ್ಲಾದರೂ ಸೇರುತ್ತಿವೆ. ಇದರೊಂದಿಗೆ ಒಳಚರಂಡಿಯಲ್ಲಿ ನೀರು ಉಕ್ಕಿ ಹರಿದು ಇದೇ ನದಿಗೆ ಸೇರುವ ಮೂಲಕ ಮತ್ತಷ್ಟು ಕಲುಷಿತಗೊಳಿಸುವುದನ್ನು ನಿಲ್ಲಿಸಲಿಲ್ಲ. ಇಂಥ ನೂರಾರು ಸಮಸ್ಯೆಗಳು ಎಲ್ಲ ದೇಶಗಳಲ್ಲೂ ನದಿಗಳನ್ನು ಕಲುಷಿತಗೊಳಿಸುತ್ತಿರುವುದು ಸತ್ಯ. ಈಗ ಕಯಹೋಗಾ ನದಿಯ ಜಲಾನಯನ ಪ್ರದೇಶವನ್ನು ಕಾಳಜಿ ತೋರಬೇಕಾದ 43 ಬೃಹತ್‌ ಜಲಮೂಲಗಳ ಪ್ರದೇಶವೆಂಬ ವ್ಯಾಪ್ತಿಗೆ ತರಲಾಯಿತು. ಬಳಿಕ ಹತ್ತು ಹಲವು ಕಸರತ್ತುಗಳನ್ನು ನಡೆಸಿ ನದಿಯನ್ನು ಸುಸ್ಥಿತಿಗೆ ತರಲು ಪ್ರಯತ್ನಿಸಲಾಯಿತು. ಈಗಲೂ ಆ ಪ್ರಯತ್ನಗಳು ಜಾರಿಯಲ್ಲಿವೆ. 

ನಿಜ, 40 ವರ್ಷಗಳಿಗಿಂತ ಈಗ ನೀರಿನ ಗುಣಮಟ್ಟದಲ್ಲಿ ಪರವಾಗಿಲ್ಲ ಎಂಬ ಅಭಿಪ್ರಾಯವಿದೆ. ಆದರೂ, ಹಲವು ಭಾಗಗಳಲ್ಲಿ ಗುಣಮಟ್ಟದ ಬಗ್ಗೆ ದೂರುಗಳೂ ಇವೆ. ನದಿ ಸಂರಕ್ಷಣಾ ಸಮಿತಿಯು ವಿವಿಧ ವಿಧಾನಗಳನ್ನು ಬಳಸಿ ನೀರಿನ ಗುಣಮಟ್ಟವನ್ನು ಹೆಚ್ಚಿಸಲು ಕಾರ್ಯೋನ್ಮುಖವಾಗಿವೆ. ಅಲ್ಲಿಗೆ ಪ್ರಕೃತಿದತ್ತವಾದ ಸಂಪನ್ಮೂಲವನ್ನು ಹಾಳು ಮಾಡಿಕೊಳ್ಳುವುದು ಎಷ್ಟೊಂದು ಮೂರ್ಖತನವೆಂಬುದು ಸಾಬೀತಾದಂತಾಯಿತು. ಹಾಗೆಯೇ, ಪ್ರಕೃತಿದತ್ತ ಸಂಪನ್ಮೂಲದ ಮರುಸೃಷ್ಟಿ ಸಾಧ್ಯವೇ ಇಲ್ಲವೆಂಬುದೂ ಸ್ಪಷ್ಟವಾದಂತಾಗಿದೆ. 

ನದಿಗಳನ್ನು ಉಳಿಸಿ
ಈ ಹಿನ್ನೆಲೆಯಲ್ಲೇ ದೇಶದ ವಾಟರ್‌ ಮ್ಯಾನ್‌ ರಾಜೇಂದ್ರ ಸಿಂಗ್‌ ಅವರ ಮಾತನ್ನು ನೆನಪಿಸಿಕೊಳ್ಳಬೇಕು. ನದಿಗಳ ಸಂರಕ್ಷಣೆಗೆ ಈಗಲಾದರೂ ಮುಂದಾಗೋಣ ಎಂದು ಅವರು ಕರೆ ನೀಡಿದ್ದರು. ಮುಂದಿನ ವರ್ಷಗಳಲ್ಲಿ ಜಲ ಕ್ಷಾಮ ಬಾರದಿರಬೇಕಾದರೆ ಇಂದೇ ನಾವು ನದಿಗಳನ್ನು ಸಂರಕ್ಷಿಸಬೇಕು. ಜತೆಗೆ ಈಗಿರುವ ನದಿಗಗಳ ಪರಿಸರ ಮಾಲಿನ್ಯವನ್ನು ತಡೆಯಬೇಕು. ಈಗಾಗಲೇ ಕಲುಷಿತಗೊಂಡಿರುವ ನದಿಗಳನ್ನು ಸ್ವತ್ಛಗೊಳಿಸಬೇಕು ಎಂಬುದು ಅವರ ಅಭಿಪ್ರಾಯವಾಗಿತ್ತು. ಕೇಂದ್ರ ಸರಕಾರ ಗಂಗಾ ನದಿಯ ಸ್ವತ್ಛತೆಗೆ ಹೊರಟಿರುವುದು ಹೊಸ ಸಂಗತಿಯೇನೂ ಅಲ್ಲ. ಇದೇ ಕಾರಣಕ್ಕಾಗಿಯೇ ನಾಗರಿಕರಾದ ನಾವೂ ನದಿಗಳನ್ನು ಉಳಿಸಿಕೊಳ್ಳುವತ್ತ ಕಾರ್ಯಶೀಲರಾಗಬೇಕಿದೆ.

ನಮ್ಮ ದೇಶದಲ್ಲಿ ನದಿಗಳನ್ನು ಬರೀ ಪುರಾಣದ ನೆಲೆಯಿಂದ ಆಲೋಚಿಸುವುದಿಲ್ಲ; ಬದಲಾಗಿ ಐತಿಹಾಸಿಕವಾಗಿ, ಚಾರಿತ್ರಿಕವಾಗಿ ನೋಡಲಾಗುತ್ತದೆ. ಆದರೂ ಇಷ್ಟೆಲ್ಲ ಒಳ್ಳೆಯ ಅಂಶಗಳು ನದಿಯನ್ನು ಕಲುಷಿತಗೊಳಿಸುವುದನ್ನು ತಡೆಯುವಲ್ಲಿ ಯಾವ ಪರಿಣಾಮ ಬೀರಿದೆ ಎಂದರೆ ಉತ್ತರ ಶೂನ್ಯಕ್ಕಿಂತ ಹೆಚ್ಚಿನದೇನೂ ಸಿಗದು.

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.