ತುಮಕೂರು : ಡಿವೈಡರ್ಗೆ ಕಾರು ಢಿಕ್ಕಿ: ಆರ್ಟಿಓ ಇನ್ಸ್ಪೆಕ್ಟರ್ ಬಲಿ
Team Udayavani, Jul 20, 2018, 11:38 AM IST
ತುಮಕೂರು: ಶಿರಾದ ತಾವರೆಕೆರೆ ಬಳಿ ಕಾರೊಂದು ಡಿವೈಡರ್ಗೆ ಢಿಕ್ಕಿಯಾದ ಪರಿಣಾಮ ಆರ್ಟಿಓ ಇನ್ಸ್ಪೆಕ್ಟರ್ ದಾರುಣವಾಗಿ ಸ್ಥಳದಲ್ಲೇ ಸಾವನ್ನಪಪ್ಪಿ, ಚಾಲಕ ಗಂಭೀರವಾಗಿ ಗಾಯಗೊಂಡ ಅವಘಡ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಮೃತ ದುರ್ದೈವಿ ಚಿತ್ರದುರ್ಗದ ಆರ್ಟಿಓ ಅಧಿಕಾರಿ ದೇವ್ರಾಜ್(50) ಎಂದು ತಿಳಿದು ಬಂದಿದೆ. ಚಾಲಕ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾವರೆಕೆರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಕಾರು ನಿಯಂತ್ರಣ ಕಳೆದುಕೊಳ್ಳಲು ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ.