15 ಹುಲ್ಲಿನ ಬಣವೆ ಬೆಂಕಿಗಾಹುತಿ
Team Udayavani, Feb 18, 2019, 7:27 AM IST
ತುರುವೇಕೆರೆ: ತಾಲೂಕಿನ ಸಂಗಲಾಪುರ ಗ್ರಾಮದಲ್ಲಿ ಬೆಂಕಿಗೆ ಆಹುತಿಯಾದ 15 ಹುಲ್ಲಿನ ಬಣವೆಗಳ ಮಾಲಿಕರಿಗೆ ಜಿಲ್ಲಾಧಿಕಾರಿಗಳು ಅಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಬದಲು ಬಣವೆ ಪ್ರಮಾಣ ಅಂದಾಜಿಸಿ ತಲಾ ಮೂರು ಟ್ರ್ಯಾಕ್ಟರ್ ಮೇವು ಪೂರೈಸಬೇಕು ಎಂದು ಶಾಸಕ ಜಯರಾಂ ಒತ್ತಾಯಿಸಿದರು.
ಘಟನೆ ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು, ಇದೊಂದು ದುರುದ್ದೇಶಪೂರಿತ ಕೃತ್ಯ. ನಾಗರಿಕ ಸಮಾಜದಲ್ಲಿರುವ ಕೆಲ ಕೆಟ್ಟ ಮನಸ್ಸಿನವರು ಮಾಡಿರುವ ಹೀನಾಯ ಕೃತ್ಯ. ಮೂಕ ಪ್ರಾಣಿಗಳ ಮೇವನ್ನು ಸುಟ್ಟುಹಾಕಿರುವುದು ಖಂಡನೀಯ. ಕೂಡಲೇ ಜಿಲ್ಲಾಡಳಿತ ಮೇವು ಪೂರೈಕೆಗೆ ಮುಂದಾಗಬೇಕು ಎಂದು ಹೇಳಿದರು.
ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸ್ ಇಲಾಖೆ ಮುಂದಾಗಿದ್ದು, 25 ಸ್ಪೈ ಕ್ಯಾಮರಾಗಳನ್ನು ಗ್ರಾಮದ ಸುತ್ತಮುತ್ತ ಅಳವಡಿಸಲಾಗಿದೆ. ಈಗಾಗಲೇ ಇಬ್ಬರ ಬಗ್ಗೆ ಗುಮಾನಿಯಿದೆ. ಸೂಕ್ತ ಸಾಕ್ಷಿಗಳು ದೊರಕಿದ ನಂತರ ಬಂಧಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಚನ್ನಕೇಶವ ಹಾಗೂ ಭೈರವ ದೇವಸ್ಥಾನಕ್ಕೆ 5 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು. ತಹಶೀಲ್ದಾರ್ ನಯೀಮ್ ಉನ್ನೀಸಾ, ಸಿಪಿಐ ಮಹಮದ್ ಸಲೀಂ, ಪಿಎಸ್ಐ ರಾಜು, ಎಪಿಎಂಸಿ ಸದಸ್ಯ ವಿ.ಟಿ.ವೆಂಕಟರಾಮ್, ಮುನಿಯೂರು ಪಿಎಸಿಎಸ್ ಅಧ್ಯಕ್ಷ ರಾಜು, ಮುಖಂಡರಾದ ಸೋಮಣ್ಣ, ಹುಚ್ಚೇಗೌಡ, ಚಿದಾನಂದ್, ಮಿಥುನ್ಗೌಡ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ