ರಾಹುಲ್‌ ಗಾಂಧಿ ಧರ್ಮಸಂಕಟ. ಏನನ್ನುತ್ತೆ ಟ್ವಿಟರ್‌ ಲೋಕ?


Team Udayavani, Dec 2, 2017, 4:58 AM IST

Twitter-Land.jpg

ಸುನಂದಾ ವಶಿಷ್ಠ
ಒಬ್ಬ ರಾಜಕೀಯ ನಾಯಕನ ಧರ್ಮ ಯಾವುದು ಎನ್ನುವುದನ್ನು ತಿಳಿದುಕೊಳ್ಳುವ ಎಲ್ಲಾ ಹಕ್ಕು ಮತದಾರರಿಗಿದೆ.  

ಸಂಝೋಮನ
ಧರ್ಮವೆನ್ನುವುದು ಪರ್ಸನಲ್‌ ವಿಚಾರ, ಈ ವಿಷಯದಲ್ಲಿ ನಮಗೆ ಸರ್ಟಿಫಿಕೆಟ್‌ ಬೇಕಿಲ್ಲ ಎನ್ನುತ್ತಾರೆ ರಾಹುಲ್‌. ಆದರೆ ನರೇಂದ್ರ ಮೋದಿಯವರು ಮುಸ್ಲಿಂ ಕ್ಯಾಪ್‌ ಧರಿಸಲು ನಿರಾಕರಿಸಿದಾಗ ಕಾಂಗ್ರೆಸ್ಸಿಗರೇಕೆ ಅದನ್ನು ಪರ್ಸನಲ್‌ ನಂಬಿಕೆ ಎನ್ನಲಿಲ್ಲ?  

 ರಿಫ‌ತ್‌ ಜಾವೇದ್‌
ಕಾಂಗ್ರೆಸ್‌ ಮತ್ತೂಮ್ಮೆ ಬಿಜೆಪಿಯ ಖೆಡ್ಡಾದಲ್ಲಿ ಬಿದ್ದಿದೆ. ಇಲ್ಲಿಯವರೆಗೂ ಗುಜರಾತ್‌ನಲ್ಲಿನ ಅಭಿವೃದ್ಧಿಯ ಕೊರತೆಯ ಬಗ್ಗೆ ಮಾತನಾಡುತ್ತಿದ್ದ ಕಾಂಗ್ರೆಸ್‌ ನಾಯಕರೆಲ್ಲ. ಈಗ ಬಿಜೆಪಿ ಎತ್ತಿರುವ ಧರ್ಮದ ಪ್ರಶ್ನೆಗೆ ಉತ್ತರಿಸುವಲ್ಲಿ ಬ್ಯುಸಿ ಯಾಗಿದ್ದಾರೆ. ಕಾಂಗ್ರೆಸ್‌ಗೆ ಮತ್ತು ರಾಹುಲ್‌ಗೆ ಅಡ್ವೆ„ಸ್‌ ಮಾಡುತ್ತಿರುವವರು ಯಾರು?  

ಅಮಿತ್‌ ಸಿಂಗ್‌ 
ಬಿಜೆಪಿಯವರಿಗೆ ಅಭಿವೃದ್ಧಿ ರಾಜಕಾರಣದ ಬಗ್ಗೆ ಮಾತನಾಡಲು ಈಗ ಮುಖ ಉಳಿದಿಲ್ಲ. ಹೀಗಾಗಿ ಇಂಥ ಸಣ್ಣ ಕೆಲಸಕ್ಕೆ ಇಳಿದಿದೆ. 

ತೇಜಿಂದರ್‌ ಬಗ್ಗಾ
ಸೆಕ್ಯುಲರ್‌ಗಳು 20011-2017ರಲ್ಲಿ: ಅದ್ಹೇಗೆ ತಾನೆ ಈ ಮೋದಿ ಸ್ಕಲ್‌ ಕ್ಯಾಪ್‌ ಧರಿಸಲು ನಿರಾಕರಿಸ ಬಲ್ಲರು? ಸೆಕ್ಯುಲರ್‌ಗಳು 2017ರಲ್ಲಿ: ನೋಡಿ….ಧರ್ಮ ಎನ್ನುವುದು ಖಾಸಗಿ ವಿಚಾರ. ರಾಹುಲ್‌ಜೀಯನ್ನು ದಯವಿಟ್ಟೂ ಟೀಕಿಸದಿರಿ.  

 ಅಭಿಜಿತ್‌ ಮಜುಂದಾರ್‌
ರಾಹುಲ್‌ ಗಾಂಧಿ ಯಾವುದೇ ಧರ್ಮವನ್ನು ಆಚರಿಸಲಿ. ಪ್ರಶ್ನೆ ಅದಲ್ಲ, ಪ್ರಶ್ನೆಯಿರುವುದು ಒಂದು ರಾಷ್ಟ್ರವನ್ನು ಪ್ರತಿನಿಧಿಸುತ್ತೇನೆ ಎಂದು ಕನಸು ಕಾಣುತ್ತಿರುವ ನಾಯಕನೊಬ್ಬನಿಗೆ ತಾನು ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನೋ, ಸಿಖ್‌-ಬೌದ್ಧನೋ ಅಥವಾ ನಾಸ್ತಿಕನೋ ಎನ್ನುವುದನ್ನು ಹೇಳುವ ಧೈರ್ಯ ಇರಬೇಕಲ್ಲವೇ? ಧರ್ಮವನ್ನು ಹಿಡಿದುಕೊಂಡು ಪೂರ್ಣ ರಾಜಕೀಯ ಮಾಡುತ್ತಿರುವವರು ಕಣ್ಣಾಮುಚ್ಚಾಲೆ ಆಟ ಆಡುವುದೇಕೆ? 

ಅಖೀಲೇಶ್‌ ಮಿಶ್ರಾ
 ಇಲ್ಲಿ ಮುಖ್ಯ ವಿಷಯವಾಗಬೇಕಿರುವುದು ರಾಹುಲ್‌ ಗಾಂಧಿಯದ್ದು ಯಾವ ಧರ್ಮ ಎನ್ನುವುದಲ್ಲ. ತಮ್ಮ ಹೃದಯಕ್ಕೆ ಹತ್ತಿರವಿರುವ ಯಾವುದೇ ಧರ್ಮವನ್ನು ಬೇಕಾದರೂ ಅವರು ಅನುಸರಿಸಲಿ. ಆದರೆ ಈ ವಿಷಯದಲ್ಲಿ ಕಪಟತನ ಮೆರೆಯುತ್ತಿರುವುದೇಕೆ? ಜನರನ್ನು ವಂಚಿಸುವ ಉದ್ದೇಶ ಇಲ್ಲವೆಂದಾದರೆ, ಮುಚ್ಚು ಮರೆಯೇಕೆ?  

ಸುಜಯ್‌ ಕೆ
ಜಾತಿ ರಾಜಕಾರಣ ಓಕೆ, ಧರ್ಮ ರಾಜಕಾರಣ ನಾಟ್‌ ಓಕೆ? ವಾಟ್‌ ಈಸ್‌ ದಿಸ್‌ ಸರ್ಜೀ? ರಾಗಾ ವಿಷಯದಲ್ಲಿ ಬಂದಾಗ ರಾಗ(ಟೋನ್‌) ಏಕೆ ಬದಲಾಗುತ್ತಿದೆ? 

 ಅಭಿಷೇಕ್‌ ಎಂ 
ರಾಹುಲ್‌ ಗಾಂಧಿ ತಾವು ಯಾವ ದೇವರ ಆರಾಧಕರು ಎನ್ನುವುದಲ್ಲ, ತಮ್ಮ ಧರ್ಮ ಯಾವುದು ಎನ್ನುವುದನ್ನು ಸ್ಪಷ್ಟಪಡಿಸಲಿ. ಇಲ್ಲದಿದ್ದರೆ ಮತದಾರರ ಮನದಲ್ಲಿ ಈ ವಿಷಯವೇ ಕೆಲಸ ಮಾಡಲಾರಂಭಿಸುತ್ತದೆ. 

 ಸೋನಂ ಮಹಾಜನ್‌
ಡಿಯರ್‌ ರಾಹುಲ್‌ಜೀ, ನೀವು ಹಿಂದೂ ಅಲ್ಲ ಎಂದರೂ ಪರ್ವಾಗಿಲ್ಲ. ಆದರೆ ನಮ್ಮ ಮತ ಪಡೆಯುವುದಕ್ಕಾಗಿ ಹಿಂದೂಗಳಂತೆ ಬಿಂಬಿಸಿಕೊಳ್ಳಬೇಡಿ. 

 ಫ‌Åಸ್ಟ್ರೇಟೆಡ್‌ ಇಂಡಿಯನ್‌ 
ರಾಹುಲ್‌ ಬಗ್ಗೆ ಮಾತನಾಡುವಾಗ ಮಾತ್ರ “ರಾಜಕಾರಣದಲ್ಲಿ ಧರ್ಮ ಬೆರೆಸಬಾರದು’. ಬೆರೆಸಲೇಬೇಕೆಂದರೆ ಯುಪಿ-ಬಿಹಾರ ಚುನಾವಣೆಯ ಟೈಮಲ್ಲಿ ಬೆರೆಸಬೇಕು! 

 ತೂಜಾಭಯ್‌
ಬಿಜೆಪಿ ರಾಹುಲ್‌ ಬೆಳವಣಿಗೆಯ ಬಗ್ಗೆ ಎಷ್ಟು ಹೆದರಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕೇ? 

ನೀವೂ ನಮಗೆ ಟ್ವೀಟ್‌ ಮಾಡಿ @UdayavaniNews

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.