ಪಂಚರಾಜ್ಯ ಫ‌ಲಿತಾಂಶ, ಏನಂತಾರೆ ಜನ?


Team Udayavani, Dec 15, 2018, 4:57 AM IST

twitter-land.jpg

ಪ್ರತ್ಯೂಶ್‌ ದೇವ್ಲಿಕರ್‌
ಪಂಚರಾಜ್ಯ ಚುನಾವಣೆಗಳು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನುವ ಮಾತಿನಲ್ಲಿ ಸತ್ಯವಿಲ್ಲ. ಅದರಲ್ಲೂ ಮಧ್ಯಪ್ರದೇಶ, ಛತ್ತೀಸ್‌ಗಡ, ರಾಜಸ್ಥಾನಗಳಲ್ಲಿ 2019ರ ಚುನಾವಣೆ ಬಿಜೆಪಿಗೆ ಭಾರೀ ಸವಾಲು ಒಡ್ಡಲಿದೆ. 

ಮೃಣಾಲ್‌ ವಾಲಿಯಾ
ಮಣಿಪುರದಲ್ಲಿ ಸೋಲನುಭವಿಸುವ ಮೂಲಕ ಇಡೀ ಈಶಾನ್ಯದಿಂದ ಮುಕ್ತವಾಗಿದೆ ಕಾಂಗ್ರೆಸ್‌. ಲೋಕಸಭಾ ಚುನಾವಣೆಗಳಲ್ಲಿ ಈ 8 ರಾಜ್ಯಗಳು ಬಿಜೆಪಿಯತ್ತ ವಾಲಲಿವೆ. 

ರಮಣಜಿತ್‌ ಇ
ರಾಹುಲ್‌ ಗಾಂಧಿಯವರು ತಮ್ಮ ಪಕ್ಷ ಮೂರು ರಾಜ್ಯಗಳಲ್ಲಿ ಗೆದ್ದ ನಂತರ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರಕ್ಕೆ  ಬುದ್ಧಿಮಾತು ಹೇಳಿದರು. ಒಂದು ವೇಳೆ ಕಾಂಗ್ರೆಸ್‌ ಸೋತಿತ್ತೆಂದರೆ ರಾಹುಲ್‌ ಇಷ್ಟೊತ್ತಿಗಾಗಲೇ ವಿದೇಶದಲ್ಲಿ ಇರುತ್ತಿದ್ದರು. 

ಮುರಳೀಧರ್‌ ಕಣ್ಣರ್ತಿಯನ್‌
ರೈತರ ಪ್ರತಿಭಟನೆಗಳನ್ನು “ಕಾಂಗ್ರೆಸ್‌ ಮತ್ತು ಎಡಪಕ್ಷಗಳ ಪಿತೂರಿ’ ಎಂದು ಅವಮಾನಿಸಿತು ಬಿಜೆಪಿ. ಈ ಕಾರಣಕ್ಕಾಗಿಯೇ ಅನ್ನದಾತರು ಆ ಪಕ್ಷದ ಮೇಲೆ ಮುನಿಸಿಕೊಂಡದ್ದು. 

ಟ್ರಾಲ್‌ಟೇಲ್ಸ್‌
ನೋಡುತ್ತಿರಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಘೋಷಣೆಯಲ್ಲಿ “ಸಾಲಮನ್ನಾ’ ಪ್ರಮುಖ ಜಾಗ ಪಡೆಯಲಿದೆ. ಜನಪ್ರಿಯ ಕಾರ್ಯಕ್ರಮಗಳೇ ಚುನಾವಣಾ ಫ‌ಲಿತಾಂಶವನ್ನು ತೀರ್ಮಾನಿಸುವಂತಾಗುವುದು ಭಾರತದ ದುರಂತ. 

ಕಾಂಚನ್‌ ಬೂಂಬಕ್‌
ಕೇಂದ್ರ ಸರ್ಕಾರ ಸೋಲಿನ ಜವಾಬ್ದಾರಿಯನ್ನೆಲ್ಲ ರಾಜ್ಯ ನಾಯಕರ ಮೇಲೆ ಹೊರಿಸುವುದು ಬಹುದೊಡ್ಡ ತಪ್ಪು. ಬಿಜೆಪಿ ಗೆದ್ದಿದ್ದರೆ ಅದನ್ನು ಮೋದಿ ಮ್ಯಾಜಿಕ್‌ ಎಂದು ಬಿಂಬಿಸುತ್ತಿರಲಿಲ್ಲವೇ? 

ಭಾವನಾ ವಿಶಾಲ್‌
ಭಾರತದಲ್ಲಿ ರಾಜಕೀಯ ಪಕ್ಷಗಳು ಮತ್ತದರ ನಾಯಕರು ಆಡಳಿತ, ಜನಸೇವೆಗಿಂತ ಚುನಾವಣಾ ಪ್ರಚಾರ, ರ್ಯಾಲಿಗಳಲ್ಲೇ ಅಧಿಕ ಸಮಯ ಕಳೆದುಬಿಡುತ್ತಾರೆ. ಚುನಾವಣಾ ಆಯೋಗ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ. 

ಮುಕುಂದ್‌ ಶೇಖರನ್‌
ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲಾ ಪಕ್ಷಗಳಿಗೂ ಮಹತ್ವವಿರುತ್ತದೆ.  ಭಾರತದಂಥ ವೈವಿಧ್ಯಮಯ ದೇಶದಲ್ಲಿ ಒಂದೊಂದು ಪಕ್ಷ ಒಂದೊಂದು ರಾಜ್ಯದಲ್ಲಿ ಮುಖ್ಯವಾಗುತ್ತದೆ. ಒಂದು ಪಕ್ಷವನ್ನು ಆ ದೇಶದಿಂದ ಮುಕ್ತಮಾಡಿಸುವುದು ಯಾವುದೇ ನಾಯಕನಿಗಾಗಲಿ, ಪಕ್ಷಕ್ಕಾಗಲಿ ಸಾಧ್ಯವಿಲ್ಲ. 

ರಾಗೇಶ್‌ ಬಯಕ್ಕೊಡನ್‌
ಬಿಜೆಪಿ ಅಭಿವೃದ್ಧಿಯ ಮಾತನ್ನು ಬಿಟ್ಟು ಕೇವಲ ಧರ್ಮದ ಆಧಾರದಲ್ಲಿ ಜನರ ಮತಗಳನ್ನು ಸೆಳೆಯುವುದನ್ನು ಬಿಡಬೇಕು. ಅನ್ಯ ಪಕ್ಷಗಳಂತೆ ಅದೂ ಓಟ್‌ ಬ್ಯಾಂಕ್‌ ರಾಜಕೀಯಕ್ಕೆ ನಿಂತುಬಿಟ್ಟರೆ, ಅಭಿವೃದ್ಧಿ ಮಾಡುವವರು ಯಾರು? 

ತೂಜಾನೇನಾ
ಕಾಂಗ್ರೆಸ್‌ ಮತ್ತು ಬಿಜೆಪಿ ಬೆಂಬಲಿಗರ ವರ್ತನೆ ಒಂದೇ ರೀತಿಯಲ್ಲಿಯೇ ಇರುತ್ತದೆ. ಗೆದ್ದವರು ಬಿದ್ದವರನ್ನು ಹಂಗಿಸಿ ಕುಣಿದಾಡುವುದು, ಸೋತವರು ಸಂತ್ರಸ್ತರ ಪಾತ್ರ ವಹಿಸುವುದು! 

ನಾಟ್‌ಸೋಫ‌ನ್ನಿ
ಪಂಚರಾಜ್ಯ ಚುನಾವಣೆಗಳಲ್ಲೇ ಭಾರತೀಯ ಮಾಧ್ಯಮಗಳು ಈ ಪರಿ ಗದ್ದಲ ಮಾಡಿದವು. ಪ್ರಳಯವೇ ಆಗಿಹೋಗುತ್ತಿದೇನೋ ಎನ್ನುವಂತೆ ವರ್ತಿಸಿದವು. ಲೋಕಸಭಾ ಚುನಾವಣೆ ಹತ್ತಿರದಲ್ಲಿದೆ. ಟಿ.ವಿ. ಆಫ್ ಮಾಡಿದರೆ ಬದುಕುಳಿಯುತ್ತೀರಿ! 

ವಿಘ್ನೇಶ್‌ ಪ್ರೀತಮ್‌
ಪಂಚರಾಜ್ಯ ಫ‌ಲಿತಾಂಶವನ್ನು ಟೆಲಿವಿಷನ್‌ ಮಾಧ್ಯಮಗಳು ವಿಶ್ಲೇಷಿಸುವ ಪರಿ ನೋಡಿ ಹೇವರಿಕೆಯಾಗುತ್ತದೆ. ಪ್ರತಿಯೊಂದು ಸುದ್ದಿವಾಹಿನಿಯೂ ಒಂದೊಂದು ಪಕ್ಷದ ರಾಜಕೀಯ ಅಂಗವಾಗಿಬಿಟ್ಟಿದೆ ಎನ್ನುವುದು ನಿರ್ವಿವಾದ. ಇವಕ್ಕೆ ಹೋಲಿಸಿದರೆ ದೂರದರ್ಶನವೇ ಎಷ್ಟೋ ಉತ್ತಮ. 

ನೀವೂ ನಮಗೆ ಟ್ವೀಟ್‌ ಮಾಡಿ  @UdayavaniNews

ಟಾಪ್ ನ್ಯೂಸ್

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ


MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.