ಕಾರ್ಯ-ಕಾರ್ಯೇತರ ಆಯಾಮಗಳಲ್ಲಿ ವ್ಯಕ್ತಿತ್ವ ವಿಕಸನ


Team Udayavani, Jan 28, 2017, 3:40 AM IST

Anche-Cheeti-27-1.jpg

ಉಡುಪಿ: ಜೀವನದಲ್ಲಿ ಕಾರ್ಯ ಮತ್ತು ಕಾರ್ಯೇತರ ವಿಭಾಗಗಳನ್ನಾಗಿ ಮಾಡಿ ಕೆಲವು ಉತ್ತಮಾಂಶಗಳನ್ನು ರೂಢಿಸಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಕಮಿನ್ಸ್‌ ಇಂಡಿಯಾ ಲಿ. ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ, ಮಣಿಪಾಲ ಎಂಐಟಿ ಪ್ರಾಕ್ತನ ವಿದ್ಯಾರ್ಥಿ ಅನಂತ ಜೆ. ತಲೌಲಿಕರ್‌ ಕರೆ ನೀಡಿದರು. ಮಣಿಪಾಲ ಎಂಐಟಿ ವಜ್ರಮಹೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಕಾರ್ಯಕ್ಷೇತ್ರದಲ್ಲಿ ವ್ಯಕ್ತಿತ್ವ ವಿಕಸನ ಕ್ರಮವನ್ನು ವಿವರಿಸಿದರು. ಸ್ವಂತ ಕೆಲಸವಿರಲಿ, ನೌಕರಿಯಾಗಿರಲಿ ತಮ್ಮ ಮನಸ್ಸಿಗೆ ಒಪ್ಪುವಂತಹ ಕೆಲಸಗಳನ್ನು ಮಾಡಬೇಕು. ಕೆಲವು ದೌರ್ಬಲ್ಯಗಳಿದ್ದರೂ ಬಲ ಮತ್ತು ದೌರ್ಬಲ್ಯಗಳ ನಡುವೆ ನಿಷ್ಠೆಯಿಂದ ‘ಸತ್ಯಮೇವ ಜಯತೇ’ ಎಂಬ ನೀತಿ ವಾಕ್ಯದಂತೆ ಕೆಲಸ ಮಾಡಬೇಕು ಎಂದು ಹೇಳಿದರು.

ಯಾವುದೇ ಕೆಲಸವಾದರೂ ಸಂತೋಷಪಟ್ಟು ಕೌಶಲ ತೋರಬೇಕು. ತಮಗಾಗದ ವಿಭಿನ್ನ ಧೋರಣೆಯವರು, ವಿಭಿನ್ನ ಜಾತಿ, ಸಮುದಾಯದವರಿದ್ದರೂ ಪ್ರೀತಿಸಬೇಕು. ಉತ್ಪಾದನೆ, ಯೋಜನೆಗಳನ್ನು ಹಾಕಿಕೊಳ್ಳುವಾಗ ಅಡ್ಡಗೋಡೆಗಳನ್ನು ಕೆಡವಿ ಜಾಗತೀಕರಣದ ಮನಃಸ್ಥಿತಿಯನ್ನು ನಿರ್ಮಿಸಿಕೊಳ್ಳಬೇಕು. ಲಕ್ಷಾಂತರ ಯುವಕರಿಗೆ ಮಣಿಪಾಲದಂತಹ ಸಂಸ್ಥೆಗಳಲ್ಲಿ ಓದಲು ಅವಕಾಶ ದೊರಕುವುದಿಲ್ಲ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಹವ್ಯಾಸ, ಆರೋಗ್ಯ ಮುಖ್ಯ
ಕಾರ್ಯೇತರ ವಿಭಾಗವನ್ನು ನೋಡುವಾಗ ಸಂಗೀತವೇ ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿರಬೇಕು. ಆರೋಗ್ಯ ಬಹಳ ಮುಖ್ಯ. ಯೋಗ, ವ್ಯಾಯಾಮದ ಅಭ್ಯಾಸ ಬೆಳೆಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಯಮ ನಿಯಮವೇ ಮೊದಲಾದ ಯೋಗದ ವಿವಿಧ ಮಜಲುಗಳನ್ನು ದಾಟುತ್ತಿದ್ದಂತೆ ಆಂತರಿಕವಾಗಿ ಈಜಾಡಬೇಕು. ಸಂಸ್ಥೆ, ಸಂಬಂಧಿಕರನ್ನು ಪ್ರೀತಿಸುವ ಮೂಲಕ ಕಾಮ, ಕ್ರೋಧ, ಲೋಭವೇ ಮೊದಲಾದ ಅರಿಷಡ್ವರಿಗಳನ್ನು ನಿಯಂತ್ರಿಸಬಹುದು ಎಂದು ತಲೌಲಿಕರ್‌ ನುಡಿದರು.

ಮಣಿಪಾಲ- ವಿಸ್ತರಣೆ
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ. ಕುಲಪತಿ ಡಾ| ಎಚ್‌. ವಿನೋದ ಭಟ್‌ ಮಾತನಾಡಿ, ಆರಂಭದಲ್ಲಿ ಒಟ್ಟು 500 ವಿದ್ಯಾರ್ಥಿಗಳಿದ್ದರು. ಈಗ ವಿ.ವಿ.ಯಲ್ಲಿ 30,000 ವಿದ್ಯಾರ್ಥಿಗಳಿದ್ದಾರೆ. ದೇಶ, ವಿದೇಶಗಳಲ್ಲಿ ಕಾಂಪಸ್‌ ಇವೆ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ಕ್ಯಾಂಪಸ್‌ ಹೊಂದುವ ಯೋಜನೆ ಇದೆ. ಎಂಐಟಿಗೆ 60 ವರ್ಷಧಿವಾದರೆ ವಿ.ವಿ.ಗೆ ಮುಂದಿನ ವರ್ಷ 25 ವರ್ಷವಾಗುತ್ತಿದೆ. ವಿ.ವಿ.ಯಲ್ಲಿ 20 ಸಂಸ್ಥೆಗಳು, 71 ವಿಭಾಗ, ಕೇಂದ್ರಗಳಿವೆ. ಎಂಐಟಿ ಬೆಳೆದುಬಂದ ಬಗೆ ತಲೌಲಿಕರ್‌ ಅವರಂತಹವರಲ್ಲಿ ಪ್ರತಿಫ‌ಲಿಸುತ್ತಿದೆ ಎಂದರು.

ಜಾಗತಿಕ ಸ್ಥಾನ
ವಿವಿಧ ಸಂಸ್ಥೆಗಳು ನಡೆಸುತ್ತಿರುವ ಸಂಶೋಧನ ಸಾಧನೆಗಳು ಐದು ವರ್ಷಗಳಲ್ಲಿ ಶೇ. 300 ಹೆಚ್ಚಿದೆ. ಸಂಶೋಧನ ಅನುದಾನ 100 ಕೋ.ರೂ. ಬಂದಿದೆ. ಎಂಐಟಿಯಲ್ಲಿ ಸಂಶೋಧನೆಗಾಗಿಯೇ ಇನ್‌ಕ್ಯುಬೇಟರ್‌ ಇದ್ದು ಬಯೋಮೆಡಿಕಲ್‌ ಡಿವೈಸಸ್‌ ಮತ್ತು ಉತ್ಪಾದನ ಕ್ಷೇತ್ರಕ್ಕೆ ಸಂಬಂಧಿಸಿ ಇನ್ನೂ ಎರಡು ಇನ್‌ಕ್ಯುಬೇಟರ್‌ ಬರಲಿದೆ. 2020ರಲ್ಲಿ ಜಗತ್ತಿನ ಶ್ರೇಷ್ಠ 200 ವಿ.ವಿ.ಗಳಲ್ಲಿ ಒಂದಾಗಿ ಮಣಿಪಾಲ ವಿ.ವಿ. ಮೂಡಿಬರುವ ಎಲ್ಲ ವಿಶ್ವಾಸಗಳೂ ಇವೆ. ಇದಕ್ಕೆ ಪೂರಕವಾಗಿ ಹಲವು ಮಾನ್ಯತೆಗಳು ವಿ.ವಿ.ಗೆ ಬಂದಿವೆ. ಹಿಂದಿನಿಂದಲೂ ಲಾಭದಾಯಕ ದೃಷ್ಟಿ ಹೊಂದಿರದೆ ಸಲ್ಲಿಸಿದ ಸೇವೆಯಿಂದಾಗಿ ಈ ಎಲ್ಲ ಸಾಧನೆಗಳು ಮೂಡಿಬಂದಿವೆ ಎಂದು ಡಾ| ವಿನೋದ ಭಟ್‌ ತಿಳಿಸಿದರು.

ಅಂಚೆ ಚೀಟಿ – ಲಕೋಟೆ ಬಿಡುಗಡೆ

ವಜ್ರ ಮಹೋತ್ಸವದ ಅಂಗವಾಗಿ ಅಂಚೆ ಇಲಾಖೆ ಹೊರತಂದ ಅಂಚೆ ಚೀಟಿ, ವಿಶೇಷ ಲಕೋಟೆಯನ್ನು ದಕ್ಷಿಣ ಕರ್ನಾಟಕ ಪ್ರದೇಶದ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಬಿಡುಗಡೆಗೊಳಿಸಿದರು. ಉದ್ಯಮಿಗಳೂ ಪ್ರಾಕ್ತನ ವಿದ್ಯಾರ್ಥಿಗಳೂ ಆದ ಸಚಿನ್‌ ಮೆನನ್‌, ಥಾಮಸ್‌ ಚೆರುಕರ ಅವರನ್ನು ಅಭಿನಂದಿಸಲಾಯಿತು. ಎಂಐಟಿ ನಿರ್ದೇಶಕ ಡಾ| ಜಿ.ಕೆ. ಪ್ರಭು ಸ್ವಾಗತಿಸಿ, ಜಂಟಿ ನಿರ್ದೇಶಕ ಡಾ| ಬಿ.ಎಚ್‌.ವಿ. ಪೈ ವಂದಿಸಿದರು. ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಡಾ| ರಮೇಶ್‌ ಸಿ. ಅತಿಥಿಗಳನ್ನು ಪರಿಚಯಿಸಿದರು. ಪ್ರಾಧ್ಯಾಪಕರಾದ ಅಗಸ್ಟಿನ್‌ ಬರ್ಬೋಜ, ಡಾ| ಸುಮಾ ಎ. ರಾವ್‌ ಕಾರ್ಯಕ್ರಮ ನಿರ್ವಹಿಸಿಧಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ದರ್ಶನ್‌ ನಾಂದೇಕರ್‌ ಉಪಸ್ಥಿತರಿದ್ದರು.

‘ಆ ಚಲ್‌ ಕೇ ತುಜೇ ಮೈ ಲೇಕೆ ಚಲೂಂ…’
ಅನಂತ್‌ ತಲೌಲಿಕರ್‌ ಅವರು ಆರಂಭ ಮತ್ತು ಕೊನೆಯಲ್ಲಿ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳನ್ನೂ ಹಿರಿಯರನ್ನೂ ರಂಜಿಸಿದರು. ಕಿಶೋರ್‌ ಬೆನಕುಮಾರ್‌ ಅವರು ‘ದೂರ್‌ ಗಗನ್‌ ಕೀ ಚಾಹೋ ಮೇ’ ಚಲನಚಿತ್ರಕ್ಕೆ ದಶಕಗಳ ಹಿಂದೆ ಹಾಡಿ ಜನಪ್ರಿಯಗೊಂಡ ‘ಆ ಚಲ್‌ ಕೇ ತುಜೇ ಮೈ ಲೇಕೆ ಚಲೂಂ ಏಕ್‌ ಐಸೆ ಗಗನ್‌ ಕೇ ತಲೇ…’ ಹಾಡನ್ನು ತಲೌಲಿಕರ್‌ ಸುಶ್ರಾವ್ಯವಾಗಿ ಹಾಡಿದರು. ಆರಂಭದಲ್ಲಿ ತಾವು ವಿದ್ಯಾರ್ಥಿ ದೆಸೆಯಲ್ಲಿರುವಾಗ ಹಾಡುತ್ತಿದ್ದ ಇಂಗ್ಲಿಷ್‌ ಹಾಡನ್ನು ಆರಂಭದಲ್ಲಿ ಹಾಡಿದರು. ಸಂಗೀತದಂತಹ ಹವ್ಯಾಸಗಳು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯ ಎಂದೂ ಅವರು ಪ್ರತಿಪಾದಿಸಿದರು. 1984ರಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಕಲಿಯುತ್ತಿದ್ದ ಸಮಯದ ಕೆಲವು ಘಟನೆಗಳನ್ನು, ಎಚ್‌ಕೆವಿ ರಾವ್‌ ಅವರಂತಹ ಶಿಕ್ಷಕರನ್ನು ತಲೌಲಿಕರ್‌ ನೆನಪಿಸಿಕೊಂಡರು. ಮೂಲತಃ ಗೋವಾದವನಾದ ತಾನು, ಮುಂಬಯಿಯಲ್ಲಿ ನೆಲೆಸಿ ಮಧ್ಯಮ ವರ್ಗದಿಂದ ಬಂದರೂ ಎಂಐಟಿಯ ಪ್ರೇರಣೆಯಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಅವರು ತಿಳಿಸಿದರು.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.