ಕೈಸೇರದ ರಾ.ಹೆ. ಕಾಮಗಾರಿ ವರದಿ
Team Udayavani, Feb 9, 2017, 3:45 AM IST
ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಜಂಟಿಯಾಗಿ ಜಿಲ್ಲಾಧಿಕಾರಿಗೆ ನೀಡಬೇಕಾದ ರಾ.ಹೆ. ಕಾಮಗಾರಿ ಪ್ರಗತಿ ವರದಿಯನ್ನು ಬುಧವಾರ ನೀಡಿಲ್ಲ.
ಫೆ. 4ರಂದು ನಡೆದ ಸಭೆಯಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರು ನಾಲ್ಕು ದಿನಗಳೊಳಗೆ ಶೇ. 90 ಕಾಮಗಾರಿ ಆಗಿದೆಯೆ ಎಂಬ ಕುರಿತು ವರದಿ ಸಲ್ಲಿಸಲು ಸೂಚಿಸಿದ್ದರು.
ತಡೆಯುವಂತಿಲ್ಲ: ಡಿಸಿ
“ಉದಯವಾಣಿ’ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ವರದಿ ಇನ್ನೂ ಕೈಸೇರಿಲ್ಲ. ಗುರುವಾರ ಬರಬಹುದು ಎಂದರು. ಟೋಲ್ ಸಂಗ್ರಹ ಕುರಿತು ಪ್ರಶ್ನಿಸಿದಾಗ, ನಾವು ಟೋಲ್ ಸಂಗ್ರಹ ತಡೆಯುವಂತಿಲ್ಲ. ಆದ ಕಾಮಗಾರಿಯ ಪ್ರಗತಿ ಆಧಾರದಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ. ಕುಂದಾಪುರದ ಕಾಮಗಾರಿ ವಿಳಂಬವಾಗಲು ಎರಡನೇ ಬಾರಿ ಪರಿಷ್ಕೃತವಾದುದು ಕಾರಣ. ಪಡುಬಿದ್ರಿಯಲ್ಲಿ ಮೊದಲು ಬೈಪಾಸ್ ಎಂದಿತ್ತು. ರಾಜ್ಯದಿಂದ ಆದ ನಿರ್ಧಾರದಂತೆ ಪ್ರಸ್ತುತ ಇರುವ ಮಾರ್ಗದಲ್ಲಿಯೇ ಮುಂದುಧಿವರಿಯುತ್ತಿದೆ. ಮಂಗಳೂರಿನಲ್ಲಿ ಟೋಲ್ ಸಂಗ್ರಹಕ್ಕೆ ಜಿಲ್ಲಾಡಳಿತ ಪೊಲೀಸ್ ರಕ್ಷಣೆ ನೀಡಿಯಾಗಿದೆ. ನಾವು ಪೊಲೀಸ್ ರಕ್ಷಣೆ ನೀಡಿದ ಬಳಿಕ ಆರಂಭವಾಗಲಿದೆ ಎಂದರು.
ಗುಂಡ್ಮಿ ಸಾಸ್ತಾನ ಮತ್ತು ಪಡುಬಿದ್ರಿಯಲ್ಲಿ ಟೋಲ್ಗೇಟ್ನಲ್ಲಿ ಬುಧವಾರ ಟೋಲ್ ಸಂಗ್ರಹವಾಗಲಿಲ್ಲ. ಆದರೆ ಸ್ಥಳೀಯ ನಾಗರಿಕ ಸಮಿತಿಯವರು ಟೋಲ್ ಸಂಗ್ರಹದ ವಿರುದ್ಧ ಗುರುವಾರ ಸಂಜೆ 5ಕ್ಕೆ ಸಾಸ್ತಾನ ಶಿವಕೃಪಾ ಸಭಾಭವನದಲ್ಲಿ ಸಭೆ ಕರೆದಿದ್ದಾರೆ. ಪಡುಬಿದ್ರಿಯಲ್ಲಿ ಬುಧವಾರ ಪ್ರಯೋಗಾರ್ಥ ಎರಡು ಮತ್ತು ಮೂರು ಚಕ್ರದ ವಾಹನಗಳನ್ನು ಕೊನೆಯ ಪಥದಲ್ಲಿ ಚಲಿಸಲು ಸೂಚಿಸಿದ್ದಾರೆ.
ತಲಪಾಡಿಯಲ್ಲಿ ಟೋಲ್ ಸಂಗ್ರಹ ಆರಂಭವಾದ ಸುದ್ದಿ ಕೇಳುತ್ತಲೇ ಪಡುಬಿದ್ರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ