ಮಾ. 18: ಮರಳು ಸಮಸ್ಯೆಗೆ ಸಚಿವರಿಂದ ಸಭೆ
Team Udayavani, Mar 11, 2017, 11:29 AM IST
ಉಡುಪಿ: ಮರಳು ಸಮಸ್ಯೆ ಕುರಿತು ಮಾ. 18ರಂದು ಸಚಿವ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೆನ್ನೈ ಹಸುರು ಪೀಠದ ತೀರ್ಪಿನಂತೆ ಮತ್ತೆ ತಜ್ಞರಿಂದ ವರದಿ ತರಿಸಿಕೊಂಡು ಪ್ರಕ್ರಿಯೆ ನಡೆಸಬೇಕಾ ಗಿದೆ. ಇದಕ್ಕೆ ಕನಿಷ್ಠ ಒಂದು ತಿಂಗಳು ಬೇಕು. ಮೀನುಗಾರಿಕಾ ದೋಣಿಗಳು ಚಲಿಸಲು ಕಷ್ಟವಾಗುತ್ತದೆ ಎಂಬ ಸ್ಥಿತಿ
ಯಲ್ಲಿ ಮಾತ್ರ ಮರಳು ದಿಬ್ಬಗಳನ್ನು ತೆಗೆಯಬೇಕೆಂದು ಹಸಿರುಪೀಠ ತಿಳಿಸಿದೆ. ಇದುವರೆಗೆ ಮೀನುಗಾರರಿಂದ ದೋಣಿ ಚಲಿಸಲು ಕಷ್ಟವಾಗು ತ್ತದೆ ಎಂಬ ಮನವಿ ಬಂದಿಲ್ಲ ಎಂದರು.
ನಾನ್ ಸಿಆರ್ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಯುತ್ತಿದ್ದು, ಸರಕಾರಿ ಕಾಮಗಾರಿಗಳಿಗೆ ಮರಳಿನ ಕೊರತೆ ಇಲ್ಲ. ಖಾಸಗಿಯವರಿಗೂ ನೀಡಲಾಗುತ್ತಿದೆ ಎಂದರು. ಸ್ವರ್ಣಾ ನದಿಯಲ್ಲಿ ಹೂಳೆತ್ತುವ ಕಾಮಗಾರಿಗೆ 2.5 ಕೋ. ರೂ. ಪ್ರಸ್ತಾವ ಇರುವುದರಿಂದ ಇದನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದರು.
ಕುಡಿಯುವ ನೀರಿನ ಸಮಸ್ಯೆ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 80 ಲ. ರೂ. ಕುಡಿಯುವ ನೀರಿಗಾಗಿ ಬಂದಿದೆ. ಜಿ.ಪಂ. ಅಧ್ಯಕ್ಷರ ವಿವೇಚನ ನಿಧಿಗೆ 50 ಲ. ರೂ. ಬಂದಿದೆ. ಈಗಿನ್ನೂ ಕುಡಿಯುವ ಸಮಸ್ಯೆ ಉಂಟಾಗಿಲ್ಲ. ಆರೂರು, ಬೈಂದೂರು, ಕಟಪಾಡಿ ಮೊದಲಾದೆಡೆ ಮಾತ್ರ ಸ್ವಲ್ಪ ಸಮಸ್ಯೆಯಾಗಿದೆ. ಎಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಬಹುದು. ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ