ವಿಶ್ವದ ಅತೀ ದೊಡ್ಡ ವಯೋಲಿನ್‌ ವಾದಕ ಕುಟುಂಬ


Team Udayavani, Jun 15, 2017, 2:49 PM IST

REPORT-7.jpg

ಮಂಗಳೂರು: ಈ ಎನ್‌ಆರ್‌ಐ ಕುಟುಂಬದ ಹನ್ನೊಂದು ಮಂದಿಯೂ ವಯೋಲಿನ್‌ ವಾದನದಲ್ಲಿ ಪಳಗಿದವರು. ಅಷ್ಟೇ ಅಲ್ಲ ಇದು ವಿಶ್ವದ ಅತೀ ದೊಡ್ಡ ವಯೋಲಿನ್‌ ವಾದಕ ಕುಟುಂಬವೂ ಹೌದು. ಅಷ್ಟಕ್ಕೂ ಇವರು ಮಂಗಳೂರು ಮೂಲದವರು ಎಂಬುದು ವಿಶೇಷ.

ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲೆಸಿ ರುವ ಮೂಲತಃ ಮಂಗಳೂರಿನ ಕುಲಶೇಖರದವರಾದ ಹೃದ್ರೋಗ ತಜ್ಞ ಡಾ| ಜೆರಾರ್ಡ್‌ ಅಬ್ರಿಯೊ ಅವರ ಕುಟುಂಬ ವಯೋಲಿನ್‌ ವಾದನದಲ್ಲಿ ತೊಡಗಿಸಿಕೊಂಡವರು. ಜೆರಾಲ್ಡ್‌ ಅವರ ಪತ್ನಿ ನಿಕೋಲ್‌ ವಯೋಲಿನ್‌ ವಾದಕಿಯಾಗಿದ್ದರೆ, ಒಂಬತ್ತು ಮಕ್ಕಳು ಕೂಡ ವಯೋಲಿನ್‌ ವಾದನ ಕಲಿತು ನುಡಿಸುತ್ತಿದ್ದಾರೆ. ಮಂಗಳೂರಿನ ಸಿಟಿ ಸೆಂಟರ್‌ ಮಾಲ್‌ನ ಹಾಮ್ಸ್‌ ಮಾರ್ಟ್‌ ಮಳಿಗೆಯಲ್ಲಿ ಬುಧವಾರ ಈ ಮಕ್ಕಳು ವಯೋಲಿನ್‌ ನುಡಿಸಿದರು.

ಪಾಶ್ಚಾತ್ಯ ಶಾಸ್ತ್ರೀಯ ಶೈಲಿಗನುಗುಣ ವಾಗಿ ಮಕ್ಕಳು ವಯೋಲಿನ್‌ ತಂತಿಗಳ ಮೂಲಕ ಸಂಗೀತ ನುಡಿಸಿದರು. ಅಬ್ರಿಯೋ ಅವರ ಪ್ರಥಮ ಪುತ್ರ, 18ರ ಹರೆಯದ ಮೈಕಲ್‌, 17ರ ಹರೆಯದ ಡೇನಿಯಲ್‌, 15ರ ಹರೆಯದ ಕ್ರಿಸ್ತೀನಾ, 13ರ ಹರೆಯದ ಮರಿಯಾ, 11ರ ಹರೆಯದ ಜೇನ್‌, 9ರ ಹರೆಯದ ರಾಚೆಲ್‌, ಏಳರ ಹರೆಯದ ಜಾನ್‌, 5ರ ಹರೆಯದ ಲೂಕ್‌ ವಾಯ್ಲಿನ್‌ ಬಾರಿಸುತ್ತಾರೆ. ಇನ್ನು 3ರ ಹರೆಯದ ಜೋಸೆಫ್‌ ಕೂಡ ಇದೇ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಕಳೆದ ಮೂರು ತಿಂಗಳಿನಿಂದ ವಯೋಲಿನ್‌ ಕಲಿಕೆ ಆರಂಭಿಸಿದ್ದಾರೆ.

ತಾಯಿಯೇ ಸಂಗೀತ ಗುರು!
ಮಕ್ಕಳಿಗೆ ತಾಯಿ ನಿಕೋಲ್‌ ಅವರೇ ಸಂಗೀತ ಗುರು. ಮೂರು ವರ್ಷ ತುಂಬುತ್ತಲೇ ಮಕ್ಕಳಿಗೆ ನಿಕೋಲ್‌ ವಯೋಲಿನ್‌ ಬಾರಿಸುವ ತರಬೇತಿ ಆರಂಭಿಸಿದ್ದಾರೆ. ಏಳನೇ ತರಗತಿಯ ಬಳಿಕ ಸಂಗೀತ ತರಗತಿಯ ಮೂಲಕ ತರಬೇತಿ ಕೊಡಿಸಲಾಗುತ್ತದೆ. ಮಕ್ಕಳು ಪಿಯಾನೊ ಕೂಡ ಬಾರಿಸುತ್ತಾರೆ ಎನ್ನುತ್ತಾರೆ ಡಾ| ಜೆರಾರ್ಡ್‌. ನಿಕೋಲ್‌ ಅಬ್ರಿಯೋ ಅವರ ಸಂಬಂಧಿ ಫ್ರಾಕ್‌ ಲೋಬೋ ಅವರು ಕಳೆದ 60 ವರ್ಷಗಳಿಂದ ವಯೋಲಿನ್‌ವಾದಕರಾಗಿ ಖ್ಯಾತರಾಗಿದ್ದಾರೆ. ಆರಂಭದಲ್ಲಿ ಅವರಿಂದಲೇ ನಿಕೋಲ್‌ ವಯೋಲಿನ್‌ ವಾದನ ಕಲಿತಿದ್ದರಲ್ಲದೇ, ನಿಕೋಲ್‌ ಅವರ ತಂದೆ ಜೆರಾಲ್ಡ್‌ ಲೋಬೋ ಸಂಗೀತಗಾರರಾಗಿದ್ದರಿಂದ ಕಲಿಕೆ ಸುಲಭವಾಯಿತು ಎನ್ನುತ್ತಾರೆ.

ಇಂದು ಬಜ್ಜೋಡಿ ವೃದ್ಧಾಶ್ರಮದಲ್ಲಿ ಸಂಗೀತ
ಡಾ| ಜೆರಾರ್ಡ್‌ ಅವರ ಕುಟುಂಬಿಕರು ಮಂಗಳೂರಿನಲ್ಲೇ ನೆಲೆಸಿರುವು ದರಿಂದ ಎರಡು ವರ್ಷಗಳಿಗೊಮ್ಮೆ ಪತ್ನಿ ಹಾಗೂ ಮಕ್ಕಳೊಂದಿಗೆ ಮಂಗಳೂರಿಗೆ ಆಗಮಿಸುತ್ತಾರೆ. ಹೀಗೆ ಬರುವಾಗ ನಗರದ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಭೇಟಿ ನೀಡಿ ಸಂಗೀತ ಕಛೇರಿ ಏರ್ಪಡಿಸುತ್ತಾರೆ.
ಡಾ| ಜೆರಾರ್ಡ್‌ ಅಬ್ರಿಯೊ ಅವರ ಮಕ್ಕಳಿಂದ ನಂತೂರು ಸಮೀಪದ ಬಜೊjàಡಿಯ ಲಿಟಲ್‌ ಸಿಸ್ಟರ್ಸ್‌ ಆಫ್ ದಿ ಪುವರ್‌- ವೃದ್ಧಾಶ್ರಮದಲ್ಲಿ ಜೂ. 15ರಂದು ಸಂಜೆ 3.30ಕ್ಕೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.