ಪರ್ಕಳ ಬಸ್ ನಿಲ್ದಾಣದ ಗೋಳು
Team Udayavani, Jul 9, 2017, 3:45 AM IST
ಉಡುಪಿ: ಪರ್ಕಳ ಬಸ್ ನಿಲ್ದಾಣ ಸೂಕ್ತ ವ್ಯವಸ್ಥೆಯಿಲ್ಲದೆ ನರಳುತ್ತಿದೆ. ಇಲ್ಲಿ ಮಳೆ ಬಂದಾಗಲಂತೂ ಆಚೀಚೆ ಓಡಾಡುವುದೇ ದುಸ್ತರ.
ಮೊದಲೇ ಅಗಲ ಕಿರಿದಾದ ರಸ್ತೆಯ ಆಚೀಚಿಗಿನ ಚರಂಡಿಯಲ್ಲಿ ಹೂಳು ತುಂಬಿ ನೀರು ಹರಿದು ಹೋಗಲು ಸ್ಥಳವಿಲ್ಲ. ಅಂದರೆ ಚರಂಡಿಯೇ ಮಾಯವಾಗಿದೆ. ಮಳೆಗಾಲ ಮುನ್ನ ರಸ್ತೆಯನ್ನು ದುರಸ್ತಿ ಮಾಡಿದ್ದರೂ ಹಿಂದೆ ಇದ್ದದ್ದಕಿಂತ ದೊಡ್ಡ ದೊಡ್ಡ ಹೊಂಡಗಳು ಕಾಣುತ್ತಿವೆ.
ಮಳೆ ಬಂದಾಗ ಹೊಂಡಗಳಲ್ಲಿ ನೀರು ತುಂಬಿ ವಾಹನ ಸಂಚರಿಸುವುದು ಕಷ್ಟ. ಮಳೆ ಇಲ್ಲದಾಗಲೂ ಆಚೀಚೆ ನಡೆಯುವವರು ಕೊಡೆ ಹಿಡಿದುಕೊಂಡೇ ಹೋಗಬೇಕು. ಏಕೆಂದರೆ ಸಂಚರಿಸುವ ವಾಹನಗಳು ಚಿಮ್ಮಿಸುವ ಕೊಳಚೆ ನೀರಿನಿಂದ ರಕ್ಷಣೆ ಪಡೆಯಲು, ಕೊಡೆಯನ್ನು ಅಡ್ಡ ಹಿಡಿದು. ಪರ್ಕಳದಲ್ಲಿ ಸಂಘಸಂಸ್ಥೆಗಳು ಜಾಸ್ತಿ. ಹೀಗಾಗಿ ಕೆಸರಿಡೊಂಜಿ ದಿನ, ನೇಜಿ ದಿನ ಇತ್ಯಾದಿಗಳನ್ನು ನಡೆಸಲು ಇದುವೇ ಸೂಕ್ತ ಸ್ಥಳ ಎಂಬ ವ್ಯಂಗ್ಯ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ