ಮಳೆ, ಸಿಡಿಲಿನಿಂದ ಹಾನಿ: 24 ಗಂಟೆಯೊಳಗೆ ಪರಿಹಾರ
Team Udayavani, Jul 18, 2017, 2:50 AM IST
ತತ್ಕ್ಷಣ ಸ್ಪಂದಿಸಿ ಕಾರ್ಯತತ್ಪರತೆ ಮೆರೆದ ಕಾರ್ಕಳ ತಾಲೂಕಾಡಳಿತ
ಕಾರ್ಕಳ: ತಾಲೂಕಿನಲ್ಲಿ ರವಿವಾರ ಮಳೆ ಹಾಗೂ ಸಿಡಿಲಿಂದ ಅಲ್ಲಲ್ಲಿ ಸಂಭವಿಸಿದ ಹಾನಿಗೆ ಕಾರ್ಕಳ ತಾಲೂಕಾಡಳಿತ ತತ್ಕ್ಷಣ ಸ್ಪಂದಿಸಿದ್ದು ಹಾನಿ ಸಂಭವಿಸಿದ 24 ಗಂಟೆಯೊಳಗೆ ಪರಿಹಾರ ಒದಗಿಸಿ ಕಾರ್ಯತತ್ಪರತೆ ಮೆರೆದಿದೆ. ತಾಲೂಕಿನ ಬೆಳಂಜೆ ಗ್ರಾಮದಲ್ಲಿ ಸುಮಾರು 12 ಮನೆಗಳಿಗೆ ಒಟ್ಟು 6 ಲಕ್ಷ ರೂ ಹಾನಿ ಉಂಟಾಗಿದ್ದು ಎಲ್ಲಾ ಮನೆಗಳಿಗೂ ತಾಲೂಕಾಡಳಿತ ಪರಿಹಾರ ಒದಗಿಸಿದೆ. ಬೇಳಂಜೆ ಗ್ರಾಮದ ತಮ್ಮಯ್ಯ ನಾಯ್ಕ, ನಾಗು ನಾಯ್ಕ, ಕೃಷ್ಣ , ಗುಲಾಬಿ, ಗೀತಾ, ಶಾರದಾ ಬಾಯಿ, ಸಮತಿ ಶೆಡ್ತಿ, ವನಜ ಬಾಯಿ, ಪುರುಷ ನಾಯ್ಕ, ಪುಟ್ಟ ನಾಯ್ಕ, ಗಂಗೆ, ಮಲ್ಲು ನಾಯ್ಕ ಅವರ ಮನೆಗಳಿಗೆ ಸಿಡಿಲು ಬಡಿದು ಮನೆಗೆ ಹಾನಿ ಉಂಟಾಗಿತ್ತು. ಹಾಗೂ ಜಾರ್ಕಳ ಗ್ರಾಮದ ಮನೆಯೊಂದರಲ್ಲಿ ಸಿಡಿಲು ಬಡಿದು ದನವೊಂದು ಮೃತಪಟ್ಟಿತ್ತು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಾರ್ಕಳ ತಹಶೀಲ್ದಾರ್ ಟಿ.ಜಿ.ಗುರುಪ್ರಸಾದ್ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಒದಗಿಸಿದ್ದಾರೆ.
ಮಳೆ ಹಾನಿಯ ಪರಿಹಾರವನ್ನು ತಾಲೂಕಾಡಳಿದ ವತಿಯಿಂದ ಶೀಘ್ರವೇ ಒದಗಿಸಲಾಗಿದೆ.ಎಲ್ಲಿ ಹಾನಿ ಸಂಭವಿಸಿದರೂ ತತ್ಕ್ಷಣ ನಮ್ಮ ಗಮನಕ್ಕೆ ತನ್ನಿ ಶೀಘ್ರವೇ ಪರಿಹಾರ ಒದಗಿಸಲು ತಾಲೂಕಾಡಳಿತ ಬದ್ಧವಾಗಿದೆ.
– ಟಿ.ಜಿ.ಗುರುಪ್ರಸಾದ್, ಕಾರ್ಕಳ ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ