ಕನಕದಾಸ ಕವಿ ಮಾತ್ರವಲ್ಲ, ದಾರ್ಶನಿಕ: ಕಾ. ತ. ಚಿಕ್ಕಣ್ಣ


Team Udayavani, Aug 14, 2017, 7:45 AM IST

kanakadasa.jpg

ಉಡುಪಿ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕನಕದಾಸ ಕೀರ್ತನಕಾರ, ಭಕ್ತ, ದಾಸ ಎಂದಷ್ಟೇ ಪರಿಗಣಿಸಲಾಗಿದೆ. ಆದರೆ 21ನೇ ಶತಮಾನದಲ್ಲಿ ಕನಕದಾಸರು ಕವಿ, ದಾರ್ಶನಿಕರಾಗಿದ್ದಾರೆ. ಭಕ್ತಿಯನ್ನು ವ್ಯಾಪಾರ, ವ್ಯವಹಾರ, ಸ್ವಾರ್ಥದ ರೀತಿಯಲ್ಲಿ ನೋಡದೆ ಮನುಷ್ಯ ಸಂಬಂಧದ ಮೌಲ್ಯಗಳನ್ನಿಟ್ಟುಕೊಂಡು ಸಾಹಿತ್ಯ ರಚನೆ ಮಾಡಿದ್ದಾರೆ ಎಂದು ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಹೇಳಿದರು.

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಣಿಪಾಲ ವಿ.ವಿ.ಯ ಕನಕದಾಸ ಅಧ್ಯಯನ ಸಂಶೋಧನ ಪೀಠದ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ತಳ ಸಮುದಾಯಗಳ ಸಾಂಸ್ಕೃತಿಕ ಸಂಚಲನ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

“ವಿದ್ಯಾರ್ಥಿಗಳೇ ಮಾತಾಡಿ’
ಭಕ್ತಿ ಜಡತ್ವದ ಸ್ಥಿತಿಗೆ ತಲುಪಿದ‌ ಮಧ್ಯಕಾಲೀನ ಯುಗದಲ್ಲಿ ಸಂತ ಪರಂಪರೆ ಭಕ್ತಿ ಚಳವಳಿಯನ್ನು ಹುಟ್ಟು ಹಾಕಿತು. ಆಗ ಪ್ರಾರಂಭವಾದ ಭಕ್ತಿ ಚಳವಳಿ ಕನಕದಾಸ, ಪುರಂದರದಾಸರನ್ನೊಳಗೊಂಡು ಈಗಲೂ ಮುಂದುವರಿದಿದೆ ಎಂದ ಚಿಕ್ಕಣ್ಣ ಅವರು, ಕನಕ ಸಾಹಿತ್ಯವನ್ನು 15 ಭಾಷೆಗಳಿಗೆ ಅನುವಾದಿಸಿ ಕರ್ನಾಟಕ ತಣ್ತೀಪದದ ವತಿಯಿಂದ ಸಮಗ್ರ ಸಾಹಿತ್ಯವನ್ನು ಹೊರತರಲಾಗುತ್ತದೆ. ವಿದ್ಯಾರ್ಥಿಗಳು ಅವರಲ್ಲಿರುವ ಅನು ಮಾನಗಳನ್ನು ಮುಕ್ತವಾಗಿ ಕೇಳಿದಾಗ ಮಾತ್ರ ವರ್ತಮಾನದ ತಲ್ಲಣಗಳ ಬೇಗುದಿಯನ್ನು ನಿವಾರಿಸಲು ಸಾಧ್ಯ. ಅದಕ್ಕಾಗಿ ಯುವಜನತೆ ಮಾತನಾಡಬೇಕಿದೆ ಎಂದರು.

ಆಚರಣೆಗಳ ಅರ್ಥ ತಿಳಿದುಕೊಳ್ಳಿ
ಮಣಿಪಾಲ ಜನರಲ್‌ ಎಜುಕೇಶನ್‌ ಅಕಾಡೆಮಿಯ ಆಡಳಿತಾ ಧಿಕಾರಿ ಪ್ರೊ| ಶಾಂತಾರಾಮ್‌ ಮಾತನಾಡಿ, ಸಮಾಜದಲ್ಲಿರುವ ಪ್ರತಿಯೊಂದು ಜಾತಿ-ಪಂಗಡಗಳಲ್ಲಿ ಹಲವು ಪರಂಪರೆಗಳಿವೆ. ಯುವಜನತೆ ಈ ಎಲ್ಲ ಆಚರಣೆಗಳ ಅರ್ಥವನ್ನು ತಿಳಿದುಕೊಳ್ಳುವುದು ಮುಖ್ಯ. ಇಲ್ಲದಿದ್ದರೆ ಅವುಗಳ ಅಂಧಾಚರಣೆ ಮಾತ್ರವಲ್ಲ ಕಾಟಾಚಾರಕ್ಕೆ ಆಚರಣೆ ಮಾಡಿದಂತಾಗುತ್ತದೆ. ಆ ರೀತಿ ಆಗಬಾರದು ಎಂದಾದರೆ ಆಚರಣೆಗಳು, ಪರಂಪರೆಯ ಹಿನ್ನೆಲೆ ಅರ್ಥಗಳನ್ನು ತಿಳಿದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ವಿ.ವಿ.ಯ ಸಹ ಕುಲಾ ಧಿಪತಿ ಡಾ| ಎಚ್‌.ಎಸ್‌. ಬÇÉಾಳ್‌ ಮಾತನಾಡಿ, ನಮ್ಮ ಹಿಂದಿನ ಆಚರಣೆ, ಸಂಸ್ಕೃತಿ, ಕಲೆಯನ್ನು ಯುವ ಜನಾಂಗಕ್ಕೆ ತಿಳಿಸಿಕೊಟ್ಟಾಗ ಮಾತ್ರ ಅದನ್ನು ಉಳಿಸುವ ಜತೆಗೆ ಬೆಳೆಸಲು ಸಾಧ್ಯ ಎಂದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ| ಕುಸುಮಾ ಕಾಮತ್‌ ಉಪಸ್ಥಿತರಿದ್ದರು. ಸಂಶೋಧನ ಪೀಠದ ಸಂಯೋಜನಾ ಧಿಕಾರಿ ಪ್ರೊ| ವರದೇಶ ಹಿರೇಗಂಗೆ ಸ್ವಾಗತಿಸಿದರು. ಸುಪ್ರೀತಾ ಡಿ.ಎಸ್‌. ಕಾರ್ಯಕ್ರಮ ನಿರೂಪಿಸಿದರು. ಸಹ ಸಂಯೋಜನಾಧಿ ಕಾರಿ ಡಾ| ಅಶೋಕ ಆಳ್ವ  ವಂದಿಸಿದರು.

ಧರ್ಮದ ಆಭರಣಗಳಿವು
ಕೇವಲ ದೇವರನ್ನು ಇಟ್ಟುಕೊಂಡು ಪೂಜಿಸುವುದು ಧರ್ಮವಲ್ಲ. ದಯೆ, ಪ್ರೀತಿ, ಕರುಣೆ, ಅಸಹಾಯಕರಿಗೆ ನೆರವು ನೀಡುವುದು ನಿಜವಾದ ಧರ್ಮ. ಇದುವೇ ಧರ್ಮದ ಆಭರಣಗಳು. ಭಕ್ತಿ, ಧರ್ಮ, ರಾಷ್ಟ್ರೀಯತೆ ವ್ಯಕ್ತಿಗತವಾಗದೇ ಅದು ಸಾರ್ವತ್ರಿಕವಾದಾಗ ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ. ಈಗಿನ ಜನರ ಮನಃಸ್ಥಿತಿ ಹೇಗೆಂದರೆ ಕಿಟಕಿ, ಬಾಗಿಲು ಮುಚ್ಚಿ ಬೆಳಕಿಗಾಗಿ ತಡಕಾಡುತ್ತಿದ್ದೇವೆ. ಆದರೆ ಕೋಣೆಗಳನ್ನು ತೆರೆದಾಗ ಮಾತ್ರ ಹೊಸ ಆಲೋಚನೆ ಬರಲು ಸಾಧ್ಯ. ಹಾಗೆಯೇ ನಮ್ಮ ಮನಸ್ಸನ್ನು ಕೂಡ ತೆರೆದು ನೋಡಿ ಎಂದು ಚಿಕ್ಕಣ್ಣ ಹೇಳಿದರು.

ಟಾಪ್ ನ್ಯೂಸ್

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.