ಶೂನ್ಯಮಾಲಿನ್ಯದಲ್ಲಿ ಗಣಪತಿ ಪೂಜೆ!


Team Udayavani, Aug 23, 2017, 8:20 AM IST

ganesh.jpg

ಗಣಪತಿ ಅನ್ನುವುದೇ ವಿಶಿಷ್ಟ ಕಲ್ಪನೆ. ಬಹುಭಾಗ ಮನುಷ್ಯಾಕೃತಿ, ಶಿರಭಾಗ ಗಜಾಕೃತಿ. ಇಂತಹುದೇ ಇನ್ನೊಂದು ರೂಪ ತೋರುವುದು ನರಸಿಂಹನಲ್ಲಿ. ಅಲ್ಲಿ ಬಹುಭಾಗ ಮನುಷ್ಯಾಕೃತಿ, ಶಿರಭಾಗ ಸಿಂಹಾಕೃತಿ. 

ವಿದ್ವಾಂಸರು, ಚಿಂತಕರು ಗಣಪತಿ ಬಹು ಚಿಂತನೆಗಳ ಸಂಕೇತವಾಗಿದ್ದಾನೆ ಎನ್ನುತ್ತಾರೆ. ದೊಡ್ಡ ತಲೆಯು ವಿಶಾಲ ದೃಷ್ಟಿಯಿಂದ ಆಲೋಚನೆ ಮಾಡು ಎನ್ನುವುದರ ಸಂಕೇತ. ಜೀವನಾನುಭವ ಇರುವವರೆಲ್ಲ ತಮ್ಮಲ್ಲಿ ಒಂದಿಷ್ಟು ಉತ್ತಮ ಮತ್ತು ಒಂದಿಷ್ಟು ಕೆಟ್ಟ ಘಟನೆ, ಅನುಭವಗಳನ್ನು ಕಂಡಿರುತ್ತಾರೆ. ಇದೆಲ್ಲವನ್ನೂ ಜೀರ್ಣಿಸಿಕೊಳ್ಳಬೇಕೆನ್ನುವುದು ದೊಡ್ಡ ಹೊಟ್ಟೆಯ ಸಂಕೇತ. ಸಣ್ಣ ಕಾಲುಗಳು ಸಹಿಷ್ಣುತೆಯ ಸಂಕೇತ. ನಾವೆಲ್ಲರೂ ಭಾರ ಹೊರಲು ತಯಾರಿರದೆ ಕೀರ್ತಿ ಹೊರಲು ಸದಾ ಸಿದ್ಧರಿರುವ ಮನಃಸ್ಥಿತಿಯವರು. ಇವರಿಗೆಲ್ಲ “ಭಾರ ಹೊರುವುದನ್ನು ಕಲಿಯಿರಿ’ ಎಂದು ಗಣಪತಿ ಹೇಳುತ್ತಾನೆ. ಒಂದರ್ಥದಲ್ಲಿ ಭಾರ+ತವನ್ನೇ ಹೊರಬೇಕಾದ ನಾವು ನಮ್ಮ ಭಾರವನ್ನಾದರೂ ಹೊರಬೇಕಲ್ಲ? ಇದು ಮನೆ ವ್ಯವಹಾರ, ಉದ್ಯೋಗ ವ್ಯವಹಾರಗಳಲ್ಲಿ ಬಹಳ ಮುಖ್ಯ. ಭಾರ ಬಂದಾಕ್ಷಣ ಇನ್ನೊಬ್ಬರ ಹೆಗಲ ಮೇಲೆ ಹೊತ್ತು ಹಾಕಿ ಕೀರ್ತಿ ಬರುತ್ತದೆನ್ನುವಾಗ ತಮ್ಮ ಹೆಗಲ ಮೇಲೆ ಹಾಕಿಕೊಂಡು ಓಡಾಡುವವರಿಗೆ ಇದು ಪಾಠ. 

ದೊಡ್ಡ ಕಿವಿಯು ಆಲಿಸುವುದನ್ನು, ಕೆಟ್ಟ ಮಾತುಗಳನ್ನು ಝಾಡಿಸಿ ಬಿಡುವುದನ್ನು ಸಂಕೇತಿಸುತ್ತದೆ. ನಾವು ಇದಕ್ಕೆ ಸದಾ ವಿರುದ್ಧವಿರುತ್ತೇವೆ. ಕೆಟ್ಟ ಮಾತುಗಳನ್ನು ಕೇಳಿಸಿಕೊಂಡು ಅದನ್ನೇ “ಜಗಿಯುತ್ತ’, ಇನ್ನೊಬ್ಬರ ಮಾತುಗಳನ್ನು ಆಲಿಸಲು ಅಸಹಿಷ್ಣುರಾಗಿರುತ್ತೇವೆ. ಯೋಗ್ಯ ಮನುಷ್ಯರೆನಿಸಬೇಕಾದರೆ ಇನ್ನೊಬ್ಬರ ಸಮಸ್ಯೆಗಳನ್ನು ಆಲಿಸುವ ಗುಣ ಇರಬೇಕು. ಸಣ್ಣ ಕಣ್ಣು ಉನ್ನತ ಮಟ್ಟದ ಏಕಾಗ್ರತೆ, ಸೂಕ್ಷ್ಮತೆಯನ್ನು ಸೂಚಿಸುತ್ತದೆ. ವಾಹನ ಇಲಿಯು ನಮ್ಮ ಕಾಮನೆಗಳನ್ನು (ಬೇಡಿಕೆಗಳು) ನಿಯಂತ್ರಿಸುವ ಸಂಕೇತವಾದರೆ ಅಗಲವಾದ ಹಣೆ ಉನ್ನತ ಮಟ್ಟದ ಚಿಂತನೆಯನ್ನು ಸೂಚಿಸುತ್ತದೆ. ಏಕದಂತವು ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಬಿಟ್ಟುಬಿಡುವ, ದೊಡ್ಡ ಸೊಂಡಿಲು ದಕ್ಷತೆ ಮತ್ತು ಸ್ವೀಕೃತಿ ಮನೋಭಾವನೆಯನ್ನು ಸೂಚಿಸುತ್ತಿದೆ. 

ಗಣಪತಿಯ ಈ ಗುಣಗಳನ್ನು ಆತನ ಆರಾಧನೆ ವೇಳೆ ಚಿಂತನೆ ನಡೆಸಿದರೆ ಪರಿಪೂರ್ಣ ಮನುಷ್ಯರಾಗುವತ್ತ ಹೆಜ್ಜೆ ಹಾಕಬಹುದು. ಇಂದು ಗಣೇಶನ ಹೆಸರಿನಲ್ಲಿ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕೂಗು ಕೇಳುತ್ತಿರುವಾಗ ಇದು ಶೂನ್ಯಮಾಲಿನ್ಯದಲ್ಲಿ ಗಣಪತಿಯ ಚಿಂತನೆ (ಪೂಜೆ) ಮಾಡಬಹುದೆಂಬ ಆಶಾವಾದ ಮೂಡುತ್ತಿದೆ. 

-  ಸ್ವಾಮಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.