ಶೂನ್ಯಮಾಲಿನ್ಯದಲ್ಲಿ ಗಣಪತಿ ಪೂಜೆ!


Team Udayavani, Aug 23, 2017, 8:20 AM IST

ganesh.jpg

ಗಣಪತಿ ಅನ್ನುವುದೇ ವಿಶಿಷ್ಟ ಕಲ್ಪನೆ. ಬಹುಭಾಗ ಮನುಷ್ಯಾಕೃತಿ, ಶಿರಭಾಗ ಗಜಾಕೃತಿ. ಇಂತಹುದೇ ಇನ್ನೊಂದು ರೂಪ ತೋರುವುದು ನರಸಿಂಹನಲ್ಲಿ. ಅಲ್ಲಿ ಬಹುಭಾಗ ಮನುಷ್ಯಾಕೃತಿ, ಶಿರಭಾಗ ಸಿಂಹಾಕೃತಿ. 

ವಿದ್ವಾಂಸರು, ಚಿಂತಕರು ಗಣಪತಿ ಬಹು ಚಿಂತನೆಗಳ ಸಂಕೇತವಾಗಿದ್ದಾನೆ ಎನ್ನುತ್ತಾರೆ. ದೊಡ್ಡ ತಲೆಯು ವಿಶಾಲ ದೃಷ್ಟಿಯಿಂದ ಆಲೋಚನೆ ಮಾಡು ಎನ್ನುವುದರ ಸಂಕೇತ. ಜೀವನಾನುಭವ ಇರುವವರೆಲ್ಲ ತಮ್ಮಲ್ಲಿ ಒಂದಿಷ್ಟು ಉತ್ತಮ ಮತ್ತು ಒಂದಿಷ್ಟು ಕೆಟ್ಟ ಘಟನೆ, ಅನುಭವಗಳನ್ನು ಕಂಡಿರುತ್ತಾರೆ. ಇದೆಲ್ಲವನ್ನೂ ಜೀರ್ಣಿಸಿಕೊಳ್ಳಬೇಕೆನ್ನುವುದು ದೊಡ್ಡ ಹೊಟ್ಟೆಯ ಸಂಕೇತ. ಸಣ್ಣ ಕಾಲುಗಳು ಸಹಿಷ್ಣುತೆಯ ಸಂಕೇತ. ನಾವೆಲ್ಲರೂ ಭಾರ ಹೊರಲು ತಯಾರಿರದೆ ಕೀರ್ತಿ ಹೊರಲು ಸದಾ ಸಿದ್ಧರಿರುವ ಮನಃಸ್ಥಿತಿಯವರು. ಇವರಿಗೆಲ್ಲ “ಭಾರ ಹೊರುವುದನ್ನು ಕಲಿಯಿರಿ’ ಎಂದು ಗಣಪತಿ ಹೇಳುತ್ತಾನೆ. ಒಂದರ್ಥದಲ್ಲಿ ಭಾರ+ತವನ್ನೇ ಹೊರಬೇಕಾದ ನಾವು ನಮ್ಮ ಭಾರವನ್ನಾದರೂ ಹೊರಬೇಕಲ್ಲ? ಇದು ಮನೆ ವ್ಯವಹಾರ, ಉದ್ಯೋಗ ವ್ಯವಹಾರಗಳಲ್ಲಿ ಬಹಳ ಮುಖ್ಯ. ಭಾರ ಬಂದಾಕ್ಷಣ ಇನ್ನೊಬ್ಬರ ಹೆಗಲ ಮೇಲೆ ಹೊತ್ತು ಹಾಕಿ ಕೀರ್ತಿ ಬರುತ್ತದೆನ್ನುವಾಗ ತಮ್ಮ ಹೆಗಲ ಮೇಲೆ ಹಾಕಿಕೊಂಡು ಓಡಾಡುವವರಿಗೆ ಇದು ಪಾಠ. 

ದೊಡ್ಡ ಕಿವಿಯು ಆಲಿಸುವುದನ್ನು, ಕೆಟ್ಟ ಮಾತುಗಳನ್ನು ಝಾಡಿಸಿ ಬಿಡುವುದನ್ನು ಸಂಕೇತಿಸುತ್ತದೆ. ನಾವು ಇದಕ್ಕೆ ಸದಾ ವಿರುದ್ಧವಿರುತ್ತೇವೆ. ಕೆಟ್ಟ ಮಾತುಗಳನ್ನು ಕೇಳಿಸಿಕೊಂಡು ಅದನ್ನೇ “ಜಗಿಯುತ್ತ’, ಇನ್ನೊಬ್ಬರ ಮಾತುಗಳನ್ನು ಆಲಿಸಲು ಅಸಹಿಷ್ಣುರಾಗಿರುತ್ತೇವೆ. ಯೋಗ್ಯ ಮನುಷ್ಯರೆನಿಸಬೇಕಾದರೆ ಇನ್ನೊಬ್ಬರ ಸಮಸ್ಯೆಗಳನ್ನು ಆಲಿಸುವ ಗುಣ ಇರಬೇಕು. ಸಣ್ಣ ಕಣ್ಣು ಉನ್ನತ ಮಟ್ಟದ ಏಕಾಗ್ರತೆ, ಸೂಕ್ಷ್ಮತೆಯನ್ನು ಸೂಚಿಸುತ್ತದೆ. ವಾಹನ ಇಲಿಯು ನಮ್ಮ ಕಾಮನೆಗಳನ್ನು (ಬೇಡಿಕೆಗಳು) ನಿಯಂತ್ರಿಸುವ ಸಂಕೇತವಾದರೆ ಅಗಲವಾದ ಹಣೆ ಉನ್ನತ ಮಟ್ಟದ ಚಿಂತನೆಯನ್ನು ಸೂಚಿಸುತ್ತದೆ. ಏಕದಂತವು ಒಳ್ಳೆಯದನ್ನು ಇಟ್ಟುಕೊಂಡು ಕೆಟ್ಟದ್ದನ್ನು ಬಿಟ್ಟುಬಿಡುವ, ದೊಡ್ಡ ಸೊಂಡಿಲು ದಕ್ಷತೆ ಮತ್ತು ಸ್ವೀಕೃತಿ ಮನೋಭಾವನೆಯನ್ನು ಸೂಚಿಸುತ್ತಿದೆ. 

ಗಣಪತಿಯ ಈ ಗುಣಗಳನ್ನು ಆತನ ಆರಾಧನೆ ವೇಳೆ ಚಿಂತನೆ ನಡೆಸಿದರೆ ಪರಿಪೂರ್ಣ ಮನುಷ್ಯರಾಗುವತ್ತ ಹೆಜ್ಜೆ ಹಾಕಬಹುದು. ಇಂದು ಗಣೇಶನ ಹೆಸರಿನಲ್ಲಿ ಪರಿಸರ ಮಾಲಿನ್ಯವಾಗುತ್ತದೆ ಎಂಬ ಕೂಗು ಕೇಳುತ್ತಿರುವಾಗ ಇದು ಶೂನ್ಯಮಾಲಿನ್ಯದಲ್ಲಿ ಗಣಪತಿಯ ಚಿಂತನೆ (ಪೂಜೆ) ಮಾಡಬಹುದೆಂಬ ಆಶಾವಾದ ಮೂಡುತ್ತಿದೆ. 

-  ಸ್ವಾಮಿ

ಟಾಪ್ ನ್ಯೂಸ್

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

3-hegde

LS Polls: ಮಾಡಿದ ಕೆಲಸ ನೋಡಿ ಮತ ನೀಡಿ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.