ಶ್ರೀ ಕೃಷ್ಣಾಷ್ಟಮಿ: ವೃದ್ಧಶ್ರಮದ ನೆರವಿಗೆ “ಮಾರಿಕಾಡು’ ವೇಷ
Team Udayavani, Sep 12, 2017, 7:10 AM IST
ಉಡುಪಿ: ಉಡುಪಿಯ ನಾಡಹಬ್ಬ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಳೆದ 4 ವರ್ಷಗಳಿಂದ ವೇಷ ಹಾಕಿ ಸಂಗ್ರಹವಾದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ನೀಡುತ್ತಿದ್ದು, ಈ ಬಾರಿ ಮಾರಿಕಾಡು ಎನ್ನುವ ವೇಷ ಧರಿಸಿ, ಅದರಿಂದ ಗಳಿಸಿದ ಹಣವನ್ನು ಕೊರಂಗ್ರಪಾಡಿಯ ಕಲ್ವಾರಿ ವೃದ್ಧಾಶ್ರಮಕ್ಕೆ ನೀಡುವುದಾಗಿ ವೇಷಧಾರಿ ರಾಮಾಂಜಿ ನಮ್ಮ ಭೂಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 4 ವರ್ಷಗಳಿಂದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಹಿನ್ನೆಲೆಯ ವಸ್ತುವನ್ನಿರಿಸಿಕೊಂಡು ಕೃಷ್ಣಾಷ್ಟಮಿ ವೇಳೆ ನಾಗಾಸಾಧು, ಮಾಯಾನ್ ಸಂಸ್ಕೃತಿಯ ಬುಡಕಟ್ಟು ಜನ, ಕೇರಳದ ತೈಯಂ, ದ. ಆಫ್ರಿಕಾದ ಬುಡಕಟ್ಟು ಜನಾಂಗದ ಅಪಕಲಿಪಟು ವೇಷ ಧರಿಸಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಈ ಬಾರಿ ಶೇಕ್ಸ್ಪೀಯರ್ನ ಮ್ಯಾಕ್ಬೆತ್ ನಾಟಕದಿಂದ ಆಯ್ದ ಅದನ್ನು ಡಾ| ಚಂದ್ರಶೇಖರ್ ಕಂಬಾರರು ಕನ್ನಡಕ್ಕೆ ಮಾರಿಕಾಡು ಎನ್ನುವುದಾಗಿ ರೂಪಾಂತರಿಸಿದ್ದು, ಆ ವೇಷ ಧರಿಸಿ ವೃದ್ಧಾಶ್ರಮಕ್ಕೆ ನೆರವು ನೀಡುವ ಉದ್ದೇಶ ಹೊಂದಲಾಗಿದೆ. ಮಾರಿಕಾಡು ಎಂದರೆ ಪರಿಸರ ಸಂರಕ್ಷಣೆ ಕಾಳಜಿ, ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಎದುರಾಗುವ ಆಪತ್ತಿನ ಕುರಿತ ಸಂದೇಶವು ಇದೆ ಎಂದರು.
ನಾನು ವೇಷ ಧರಿಸಿ ಎಲ್ಲರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಈ ವೇಷವನ್ನು ವೀಕ್ಷಿಸಿದವರು, ಸ್ನೇಹಿತರು, ಹಿತೈಷಿಗಳು ನನ್ನ ಸಿಂಡಿಕೇಟ್ ಬ್ಯಾಂಕಿನ ಕುಂಜಿಬೆಟ್ಟು ಶಾಖೆಯ ಕಾತೆ ಸಂಖ್ಯೆ : 01862210042226, ಐಎಫ್ ಸಿ ಕೋಡ್ : SYNB 0000186 ಖಾತೆಗೆ ಹಣ ಜಮೆ ಮಾಡಬಹುದು ಎಂದು ರಾಮಾಂಜಿ ಮನವಿ ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ಒಳಕಾಡು, ರೋಹಿತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ