ಉಡುಪಿ: ಸಂಭ್ರಮದ ವಿಟ್ಲಪಿಂಡಿ ಉತ್ಸವ ಸಂಪನ್ನ


Team Udayavani, Sep 15, 2017, 8:40 AM IST

krishna.jpg

ಉಡುಪಿ: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ಗುರುವಾರ ವೈಭವದಿಂದ ಸಂಪನ್ನಗೊಂಡಿತು.

ಗುರುವಾರ ದ್ವಾದಶಿಯಂತೆ ಮುಂಜಾವ ಶ್ರೀಕೃಷ್ಣ – ಮುಖ್ಯಪ್ರಾಣರಿಗೆ ಪರ್ಯಾಯ ಶ್ರೀಪಾದರು ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ ರಥಬೀದಿಯಲ್ಲಿ ವೈಭವದ ವಿಟ್ಲಪಿಂಡಿ ಮೆರವಣಿಗೆ ನಡೆಯಿತು. 

ಮೂರು ವಿಗ್ರಹಗಳ ಉತ್ಸವ
ಚಿನ್ನದ ರಥದಲ್ಲಿ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯೂ ಇನ್ನೊಂದು ರಥದಲ್ಲಿ ಶ್ರೀ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವ ಮೂರ್ತಿಗಳ ಉತ್ಸವ ನಡೆಯಿತು. ಉತ್ಸವದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

ನೆಟ್ಟ ಗುರ್ಜಿಗಳಲ್ಲಿ ತೂಗು ಹಾಕಿದ ಮಡಕೆಗಳನ್ನು ಗೊಲ್ಲರ ವೇಷ ಧರಿಸಿದವರು ಒಡೆಯುತ್ತ ಸಾಗಿದಂತೆ ಮೆರವಣಿಗೆಯೂ ಸಾಗಿತು. ಕೊನೆಯಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ಮಠದ ಮಧ್ವ ಸರೋವರದಲ್ಲಿ ವಿಸರ್ಜಿಸಲಾಯಿತು.

ಅಘÂì ಪ್ರದಾನ
ಬುಧವಾರ ಮಧ್ಯರಾತ್ರಿ ಶ್ರೀಕೃಷ್ಣ ಮಠ ದಲ್ಲಿ ಕೃಷ್ಣ ದೇವರ ಪೂಜೆಯ ಅನಂತರ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಶ್ರೀ ವಿದ್ಯಾ ಸಾಗರತೀರ್ಥ ಶ್ರೀಪಾದರು, ಪೇಜಾ ವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಗರ್ಭಗುಡಿಯಲ್ಲಿ  ಅಘÂì ನೀಡಿ ದರು. ಚಂದ್ರೋದಯ ಸಮಯ(12.34)ದಲ್ಲಿ ತುಳಸೀಕಟ್ಟೆಯಲ್ಲಿ ಅಘÂì ನೀಡಿದರು.

ಪ್ರಸಾದ ವಿತರಣೆ
ಉತ್ಸವ ನಡೆಯುವಾಗ ಪ್ರಸಾದ ಬಿಸಾ ಡುವ ಕ್ರಮವನ್ನು ಕೇವಲ ಸಾಂಕೇತಿಕವಾಗಿ ಹಣ್ಣುಗಳಿಗೆ ಮಾತ್ರ ಸೀಮಿತವಾಗಿಸಿ ಉತ್ಸವ ಮುಗಿದ ಬಳಿಕ ಭಕ್ತರಿಗೆ ಉಂಡೆ, ಚಕ್ಕುಲಿ ಗಳನ್ನು ವಿತರಿಸಲಾಯಿತು.

ಶ್ರೀಕೃಷ್ಣನ ಜನನ ವೇಳೆ ಭಾರೀ ಮಳೆ!
ಬುಧವಾರ ಮಧ್ಯ ರಾತ್ರಿ ಶ್ರೀಕೃಷ್ಣ ನಿಗೆ ಅಘÂì ಪ್ರದಾನವಾದ ಕೆಲವೇ ನಿಮಿಷಗಳಲ್ಲಿ ವರುಣನ ಆಗಮನವಾಯಿತು. ಗುಡುಗು ಸಹಿತ 2 ಗಂಟೆ ಮಳೆ ಸುರಿದು ಪುರಾಣವನ್ನು ನೆನಪಿಸಿತು. ಪೇಜಾವರ ಶ್ರೀಗಳ ಈ ಪಂಚಮ ಪರ್ಯಾಯದಲ್ಲಿ ನಡೆದ ಬ್ರಹ್ಮ ಕಲಶೋತ್ಸವದ ಸಂದರ್ಭದಲ್ಲಿಯೂ ಮಳೆ ಯಾಗಿರುವುದು ಇಲ್ಲಿ ಸ್ಮರಣೀಯ.

ಕವಿದ ಮೋಡ ಜಾರಿ ಹೋಗಿತ್ತು
ಗುರುವಾರ ಮಾತ್ರ ಉಡುಪಿ ಸುತ್ತಮುತ್ತ ಮೋಡ ಕವಿದ ವಾತಾವರಣವಿತ್ತು. ಆನಂತರ ಹನಿ ಹನಿ ಮಳೆಯಾಗಿತ್ತು. ಮಣಿಪಾಲದಲ್ಲಿ ಜೋರು ಮಳೆಯಾಗಿತ್ತು. ಆದರೆ ಕೃಷ್ಣ ಮಠದ ವಿಟ್ಲಪಿಂಡಿ ಸಂದರ್ಭ ಮಳೆ ಅಡ್ಡಿ ಇರದೆ ಭಕ್ತರು ಉತ್ಸವ ಕಣ್ತುಂಬಿಕೊಂಡರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭವೂ ಮಳೆ ಬಾರದ್ದರಿಂದ ಜನಜಂಗುಳಿ ಹೆಚ್ಚಿತ್ತು.

ಮೊಬೈಲ್‌ ಕೆಮರಾ, ಫೋಟೋಗ್ರಫ‌ರ್
ವಿಟ್ಲಪಿಂಡಿಯ ಮೆರವಣಿಗೆ, ರಥೋತ್ಸವದ ವಿವಿಧ ಸನ್ನಿವೇಶಗಳನ್ನು ಸೆರೆ ಹಿಡಿಯಲು ಜನಜಂಗುಳಿಯ ನಡುವೆ, ಫೋಟೋ ತೆಗೆಯಲು ಫೋಟೋಗ್ರಾಫ‌ರ್‌ಗಳು ಒಂದು ಕಡೆ ಸರ್ಕಸ್‌ ಮಾಡುತ್ತಿದ್ದರೆ ಇನ್ನೊಂದೆಡೆ ಜನರು ತಮ್ಮ ಮೊಬೈಲ್‌ ಕೆಮರಾಗಳ ಮೂಲಕ ಚಿತ್ರ ಮತ್ತು ವೀಡಿಯೋ ದೃಶ್ಯಾವಳಿಗಳನ್ನು ಸೆರೆ ಹಿಡಿಯುವುದು ಸಾಮಾನ್ಯ ದೃಶ್ಯವಾಗಿ ಕಂಡುಬಂತು.

ಬಾರಕೂರಿನಲ್ಲಿ ವಿಟ್ಲಪಿಂಡಿ
ಬ್ರಹ್ಮಾವರ:
ಬಾರಕೂರು ಮೂಡು ಕೇರಿಯ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಮೊಸರುಕುಡಿಕೆ ಉತ್ಸವ ಗುರುವಾರ ಸಂಭ್ರಮದಿಂದ ಜರುಗಿತು. 

ಸಾಲಿಗ್ರಾಮದಲ್ಲಿ 
ಕೋಟ:
ಸಾಲಿಗ್ರಾಮ ಗುರುನರಸಿಂಹ ದೇವ ಸ್ಥಾನದಲ್ಲಿ ಬುಧವಾರ ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಅಘÂì ಪ್ರದಾನ ನಡೆಯಿತು. ಗುರುವಾರ ಸಂಜೆ ನರಸಿಂಹ ದೇವಸ್ಥಾನದಿಂದ ಚೇಂಪಿ ಗೋಪಾಲಕೃಷ್ಣ ದೇವಸ್ಥಾನದವರೆಗೆ ವಿಟ್ಲ ಪಿಂಡಿ ಉತ್ಸವ ನಡೆದು ವಾಪಸು ಆಂಜನೇಯ ದೇವಸ್ಥಾನಕ್ಕೆ ಬಂದು ಅಲ್ಲಿ ಪೂಜೆ ನಡೆದ ಬಳಿಕ ನರಸಿಂಹ ದೇವಸ್ಥಾನಕ್ಕೆ ತಲುಪಿತು. ಆಡಳಿತೆ ಮೊಕ್ತೇಸರ ಅನಂತಪದ್ಮನಾಭ ಐತಾಳ್‌, ಅರ್ಚಕ ಜನಾರ್ದನ ಅಡಿಗ, ತಂತ್ರಿ ಕೃಷ್ಣ ಸೋಮಯಾಜಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. 

ಕಣ್ಣಿಗೆ ಚುಚ್ಚಿದ ಡ್ರೋಣ್‌ 
ವಿಟ್ಲಪಿಂಡಿಯಂದು ಡ್ರೋಣ್‌ ಕೆಮರಾ ಹಾರಿಸಿ ಫೋಟೋ ಕ್ಲಿಕ್ಕಿಸುವ ಭರದಲ್ಲಿ 2 ಕಡೆ ಡ್ರೋಣ್‌ ಜನರ ಮೇಲೆ ಬಿದ್ದ ಪ್ರಸಂಗ ನಡೆದಿದೆ. ರಥಬೀದಿಯಲ್ಲಿ ಕೆಳಗೆ ಬಿದ್ದ ಕಪ್ಪು ಬಣ್ಣದ ಡ್ರೋಣ್‌ನ ರೆಕ್ಕೆಗಳು ತಾಗಿ ದೊಡ್ಡಣ ಗುಡ್ಡೆಯ ಯುವಕ ರೊಬ್ಬರ ಕಣ್ಣಿಗೆ ಗಂಭೀರ ಪೆಟ್ಟಾಗಿದೆ. ಅವರ ಕತ್ತು, ಮುಖಕ್ಕೂ ತರಚಿದ ಗಾಯಗಳಾಗಿವೆ. ಮಠದ ಕೆರೆಯ ಪೂರ್ವ ಬದಿಯಲ್ಲಿ ಬಿಳಿ ಬಣ್ಣದ ಡ್ರೋಣ್‌ ಕೆಳಗೆ ಬಿದ್ದಿದೆ. ಡ್ರೋಣ್‌ ಅವಘಡದ ಕುರಿತು ಯಾರಾದರೂ ಪೊಲೀಸ್‌ ದೂರು ಕೊಟ್ಟರೆ ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.