ಸಾಮರಸ್ಯ ತ್ರಿಕರಣ ಪೂರ್ವಕ ಇರಲಿ


Team Udayavani, Nov 25, 2017, 7:46 AM IST

25-9.jpg

ಉಡುಪಿ: ಸಾಮಾಜಿಕ ಸಾಮರಸ್ಯದ ಕುರಿತು ಮಾತನಾಡಬೇಕಾದರೆ ಹಿಂದೂಗಳಲ್ಲಿ ನಾವೆಲ್ಲ ಒಂದು ಎಂಬ ಭಾವ ತ್ರಿಕರಣಪೂರ್ವಕವಾಗಿ ಇರಬೇಕು. ಮಂದಿರ, ಶ್ಮಶಾನ, ನೀರು ಎಲ್ಲರಿಗೂ ಒಂದೇ. ವ್ಯವಸ್ಥೆಯ ದೃಷ್ಟಿಯಿಂದ ಬೇರೆಯಿದ್ದರೂ ಯಾವುದಕ್ಕೂ ಯಾರಿಗೂ ನಿರ್ಬಂಧ ಸರಿಯಲ್ಲ. ಸಮಾನತೆ, ಸಾಮರಸ್ಯ, ಏಕತೆ ನಮ್ಮ ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಬೇಕಾದ ಆವಶ್ಯಕತೆಯಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದರು.

ಅವರು ಶುಕ್ರವಾರ ಧರ್ಮಸಂಸದ್‌ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ರಾಮಮಂದಿರ ಹೋರಾಟ ನಿರಂತರ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಿರಂತರ ನಡೆಯಲಿದೆ. ಆದರೆ ಮಾತು, ಕೃತಿಗಳು ಹೋರಾಟಕ್ಕೆ ಅಡ್ಡಿಯಾಗದಂತಹ ನಡೆ ಅಗತ್ಯ. ಸತತ ಹೋರಾಟ ಹಾಗೂ ನಿರಂತರ ಬಲಿದಾನದ ಮೂಲಕ ರಾಮಮಂದಿರ ನಿರ್ಮಾಣ ಪ್ರಯತ್ನ ಜಾರಿಯಲ್ಲಿತ್ತು. ಕರಸೇವೆ ಕೂಡ ಮಾಡಲಾಯಿತು. ಕಾಯುವಿಕೆಗೂ ಒಂದು ಮಿತಿಯಿದೆ. ಪ್ರತಿಯೊಬ್ಬ ಕಾರ್ಯಕರ್ತನ ಮನದಲ್ಲೂ ರಾಮಮಂದಿರ ನಿರ್ಮಾಣವಾಗಬೇಕು ಎಂದಿದೆ. ಮಂದಿರ ನಿರ್ಮಾಣಾಸಕ್ತರ ಮಾತು ಹಾಗೂ ಕೃತಿ ನಮ್ಮ ಮುಂದಿನ ನಿರ್ಣಯಕ್ಕೆ ಅಡ್ಡಿಯಾಗದಿರಲಿ. ನಾವೇನು ಮಾಡಬೇಕೋ ಅದು ಮಾತ್ರ ಜನರಿಗೆ ತಲುಪಲಿ, ನಾವೇನು ಮಾಡುವುದಿಲ್ಲವೋ ಅದು ಜನರಿಗೆ ತಲುಪುವಂತಾಗುವುದು ಬೇಡ ಎಂದರು.

ಸಂಯಮ ಇರಲಿ
ಭವಾನಿ ಮಾತೆಯ ಗುಡಿಯನ್ನು ಧ್ವಂಸ ಮಾಡಿದ ಅಪlಲ್‌ ಖಾನ್‌ ವಿರುದ್ಧ ಶಿವಾಜಿ ತತ್‌ಕ್ಷಣ ಸೇಡು ತೀರಿಸದೇ ಕಾಲ ಕೂಡಿ ಬಂದಾಗ ಹೋರಾಡಿ ಸರಿಯಾದ ಶಾಸ್ತಿ ಮಾಡಿದ. ನಾವಿಂದು ಮಾಡಹೊರಟಿರುವ ಕಾರ್ಯದ ಪ್ರಾಮುಖ್ಯವನ್ನು ಅರಿತು ಮುಂದಡಿಯಿಡಿ ಎಂದರು.

ಗೋಮಾತೆಯ ರಕ್ಷಣೆ ಮಾಡಿ
ಇಂದು ದೇಶದಲ್ಲಿ ಗೋಮಾತೆಯ ರಕ್ಷಣೆ ಕಷ್ಟವಾಗುತ್ತಿದೆ. ಗೋ ಸಂವರ್ಧನೆ ಕಠಿನವಾಗುತ್ತಿದೆ. ಗೋವಿನ ಮಹತ್ವದ ಕುರಿತು ವೈಜ್ಞಾನಿಕ ಸಂಶೋಧನೆಗಳಿವೆ. ಹಿಂದೂ ಪುರಾಣ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇದಕ್ಕೆ ಪ್ರತ್ಯೇಕ ಕಾನೂನು ಇಲ್ಲದಿದ್ದರೂ ಗೋ ರಕ್ಷಣೆ ಹಿಂದೂ ಸಮಾಜದ ಆದ್ಯ ಕರ್ತವ್ಯ. ಗೋವಿನ ಮಹತ್ವದ ಸಂಶೋಧನೆಗಳ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅಗತ್ಯವಿದೆ ಎಂದು ಮೋಹನ್‌ ಭಾಗವತ್‌ ತಿಳಿಸಿದರು.

ಮತಾಂತರ ತಡೆ
ಮತಾಂತರದ ಮೂಲಕ ಹಿಂದೂ ಸಮಾಜವನ್ನು ಕುಗ್ಗಿಸುವ ಯತ್ನ ಅನೇಕ ವರ್ಷಗಳಿಂದ ನಡೆಯುತ್ತಿದೆ. ಆದರೆ ನಮ್ಮವರ ಸಂಘಟಿತ ಮನಸ್ಸಿನಿಂದಾಗಿ ಅವರ ಪ್ರಯತ್ನ ಕೈಗೊಡುತ್ತಿಲ್ಲ. ಭಾರತ ಅಖಂಡ ಸ್ವರೂಪವನ್ನು ಕಾಣುತ್ತಾ ವಿಶ್ವಗುರುವಾಗುವ ದಿನಗಳನ್ನು ನೋಡಬೇಕಾದರೆ ನಮ್ಮಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು ಎಂದರು.

ಎಲ್ಲರೂ ಹಿಂದೂ ಸೋದರರೇ ಆಗಿದ್ದು ಅದಕ್ಕೆ ಪ್ರತ್ಯೇಕ ಘೋಷಣೆಯ ಅಗತ್ಯವಿಲ್ಲ. ಪ್ರೀತಿ, ವಾತ್ಸಲ್ಯ ಹಾಗೂ ಆದರಣೀಯ ಭಾವ ಹಳ್ಳಿಹಳ್ಳಿಗಳಲ್ಲಿ ಪ್ರತಿಯೊಬ್ಬರಲ್ಲೂ ಮೂಡಿ ಬರಬೇಕು ಎಂದು ಭಾಗವತ್‌ ತಿಳಿಸಿದರು. ಒಟ್ಟುಗೂಡಿಸಬೇಕು ಧರ್ಮ ಸಂಸದ್‌ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ವಿಹಿಂಪ ಸಮಗ್ರ ಹಿಂದೂ ಸಮಾಜವನ್ನು ಒಟ್ಟುಗೂಡಿಸಿದೆ. ಹಿಂದೂ ಧರ್ಮ ಸನಾತನವಾಗಿದ್ದು ಯಾವ ಕಾಲದಲ್ಲೂ ನಿರ್ಮೂಲವಾಗಲು, ನಿಸ್ತೇಜವಾಗಲು ಸಾಧ್ಯವಿಲ್ಲ. ಎದುರಿಸಿ ಅಳಿಯದೇ ಶಕ್ತಿಪೂರ್ಣವಾಗಿ ಬೆಳೆದು ನಿಂತಿರುವ ಮತ್ಯುಂಜಯ ಧರ್ಮ ಎಂದರು.

ಒಳಗಿನ ಶತ್ರು ನಾಶವಾಗಲಿ
ದೇಶದ ಗಡಿಯಲ್ಲಿಂದು ನಮ್ಮ ಶತ್ರುಗಳಿದ್ದಾರೆ. ಅಂತರಂಗದಲ್ಲೂ ದೇಶದ ಒಳಗೂ ಅನೇಕ ಮಂದಿ ಶತ್ರುಗಳಿದ್ದಾರೆ. ನಮ್ಮ ಪ್ರಾದೇಶಿಕವಾಗಿಯೂ ಕೂಡ ಹಿಂದೂ ಧರ್ಮಕ್ಕೆ ಸವಾಲುಗಳನ್ನು, ಸಮಸ್ಯೆಗಳನ್ನು ಒಡ್ಡುವಂತಹ ಅನೇಕ ಶತ್ರುಗಳಿದ್ದಾರೆ. ಇವರೆಲ್ಲರನ್ನೂ ಎದುರಿಸಬೇಕಾದರೆ ನಮ್ಮ ಈ ಸಂಘಟನೆ, ಸಮಾವೇಶ, ಏಕತೆಯ ಜತೆಗೆ ನಮ್ಮ ಪ್ರಾರ್ಥನೆ ಮತ್ತು ತಪಸ್ಸು ಗಟ್ಟಿಯಾಗಬೇಕು ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.