ಕಾಪು, ಕಟಪಾಡಿಗಳಲ್ಲಿ ಸಶಸ್ತ್ರ ಪಡೆಗಳ ಲೆಫ್ಟ್-ರೈಟ್!
Team Udayavani, Apr 19, 2018, 7:25 AM IST
ಕಾಪು/ಕಟಪಾಡಿ/ ಶಿರ್ವ: ನಿಷ್ಪಕ್ಷಪಾತ, ನಿರ್ಭೀತ ಚುನಾವಣೆ ನಡೆಸುವ ಹಿನ್ನೆಲೆ ಯಲ್ಲಿ ಸಶಸ್ತ್ರ ಪಡೆಗಳಿಂದ ಪಥ ಸಂಚಲನ ನಡೆಸಲಾಯಿತು.
ಕಟಪಾಡಿಯಲ್ಲಿ ನಡೆದ ಪಥಸಂಚಲನದಲ್ಲಿ ಸುಮಾರು 100 ಬಿಎಸ್ಎಫ್ ಯೋಧರು ಮತ್ತು 50 ಮಂದಿ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು. ಪಥಸಂಚಲನ ಪಳ್ಳಿಗುಡ್ಡೆ ಮೈದಾನದಿಂದ ಪ್ರಾರಂಭವಾಗಿ ಕಟಪಾಡಿ ಪೇಟೆ-ರಾಷ್ಟೀಯ ಹೆದ್ದಾರಿ- ಶಿರ್ವ ರಾಜ್ಯ ಹೆದ್ದಾರಿ-ಮಣಿಪುರ ಸಂಪರ್ಕ ರಸ್ತೆ ಭಾಗದಲ್ಲಿ ಸಾಗಿ ಮತ್ತೆ ಹೆದ್ದಾರಿ ಮಾರ್ಗವಾಗಿ ಸಾಗಿತ್ತು.
ಕಾಪುವಿನಲ್ಲಿ ಚುನಾವಣಾ ಸೂಕ್ಷ್ಮ ಪ್ರದೇಶಗಳಾದ ಕಟಪಾಡಿ, ಕಾಪು ಪೇಟೆ,ಉಚ್ಚಿಲ,ಪಡುಬಿದ್ರಿ,ಶಿರ್ವ,ಮುದರಂಗಡಿ, ಮೂಡುಬೆಳ್ಳೆ ಮೊದಲಾದ ಸ್ಥಳಗಳಲ್ಲಿ ಪಥಸಂಚಲನ ನಡೆಸಲಾಯಿತು.ಶಿರ್ವದ ಲ್ಲಿ ಪೆಟ್ರೋಲ್ ಬಂಕ್ನಿಂದ ಸಂತ ಮೇರಿ ಕಾಲೇಜಿನವರೆಗೆ ಪಥ ಸಂಚಲನ ನಡೆಯಿತು.
ಕಾಪು ವೃತ್ತ ನಿರೀಕ್ಷಕ ವಿ.ಎಸ್.ಹಾಲಮೂರ್ತಿ ರಾವ್, ಬಿ.ಎಸ್.ಎಫ್ ಪಡೆಯ ಇನ್ಸ್ಪೆಕ್ಟರ್ ವಿನೋದ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ಕುಮಾರ್ ಶರ್ಮಾ, ಕಾಪು ಠಾಣಾ ಎಸ್ಐ ನಿತ್ಯಾನಂದ ಗೌಡ, ಶಿರ್ವ ಠಾಣಾ ಎಸ್ಐ ಅಬ್ದುಲ್ ಖಾದರ್, ಪಡುಬಿದ್ರಿ ಎಸ್ಐ ಸತೀಶ್, ಕ್ರೆçಂ ಎಸ್ಐ ಶೇಖರ್, ಗೌರ್ ಕುಮಾರ್ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್