ಬಜೆ ಅಣೆಕಟ್ಟು: ಕಡಿಮೆಯಾದ ನೀರಿನ ಇಳಿಕೆ ಪ್ರಮಾಣ ​​​​​​​


Team Udayavani, Apr 23, 2018, 6:25 AM IST

200418Astro01.jpg

ಉಡುಪಿ: ಕಳೆದ ಎರಡು ವಾರದ ಅವಧಿಯಲ್ಲಿ ಎರಡು ಬಾರಿ ಸುರಿದ ಮಳೆ ಉಡುಪಿ ನಗರ ಸಭೆಯ ನೀರಿನ ಕೊರತೆ ಆತಂಕವನ್ನು ದೂರವೇನೂ ಮಾಡಿಲ್ಲ. ಆದರೆ ಆಶಾಭಾವನೆ ಮೂಡಿಸಿದ್ದಂತೂ ಹೌದು.
 
ಮಳೆಯಿಂದಾಗಿ ಉಡುಪಿಗೆ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿಲ್ಲವಾದರೂ, ದಿನಂಪ್ರತಿ ಕುಸಿಯುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾಗಿದೆ. ಮಳೆ ಬಳಿಕ 4ಸೆ.ಮೀ.ಗೆ ಇಳಿದ ನೀರಿನ ಕುಸಿತ ಅಣೆಕಟ್ಟಿನಲ್ಲಿ ಸಾಮಾನ್ಯವಾಗಿ ದಿನಕ್ಕೆ ನೀರಿನ ಮಟ್ಟ 6 ಸೆ.ಮೀ.ನಷ್ಟು ಕಡಿಮೆಯಾಗುತ್ತಿತ್ತು. ಮಳೆ ಬಳಿಕ ಇದು 4 ಸೆ.ಮೀ.ಗೆ ಕುಸಿದಿದೆ. ಆರಂಭದ ದಿನಗಳಲ್ಲಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕುಸಿವ ಪ್ರಮಾಣ 2 ಸೆ.ಮೀ. ಇದ್ದರೆ, ಬಳಿಕ 4ರಿಂದ 6 ಸೆ.ಮೀ.ಗೆ ಏರುತ್ತದೆ. ಇದು 8 ಸೆ.ಮೀ.ವರೆಗೂ ಏರುತ್ತದೆ. ಆದರೆ ಅಕಾಲಿಕ ಮಳೆ ಮುಂದುವರಿದರೆ, ನಗರದಲ್ಲಿ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದು. 

ಮಾಣೈನಿಂದ ಡ್ರೆಜ್ಜಿಂಗ್‌
ಕಳೆದ ವರ್ಷ ಡ್ರೆಜ್ಜಿಂಗ್‌ ನಡೆಸಲಾಗಿತ್ತು. ಆದರೆ ಅದನ್ನು ಈ ಬಾರಿ ಮತ್ತಷ್ಟು ಉತ್ತಮ ರೀತಿಯಲ್ಲಿ ಮಾಡಬೇಕು ಮತ್ತು ಎಷ್ಟು ಹೆಚ್ಚು ನೀರು ಸಿಗುವಂತಹ ರೀತಿಯಲ್ಲಿ ಕೆಲಸ ಮಾಡಲಾಗುತ್ತದೋ ಅದಕ್ಕೆ ತಕ್ಕಂತೆ ಬಿಲ್‌ ಪಾವತಿ ಮಾಡಲಾಗುವುದು ಎಂದು ಈ ಬಾರಿ ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗಿದೆ. ಕಳೆದ ವರ್ಷ ಶೀರೂರಿನಿಂದ ಡ್ರೆಜ್ಜಿಂಗ್‌ ಮಾಡಲಾಗಿತ್ತು. ಈ ಬಾರಿ ಮಾಣೈನಿಂದ ಬಜೆವರೆಗೆ ಡ್ರೆಜ್ಜಿಂಗ್‌ (ಹೂಳು ತೆಗೆಯುವುದು)ನಡೆಸಲು ಮತ್ತು ಹೊಂಡಗಳಲ್ಲಿ ತುಂಬಿದ ನೀರನ್ನು ಬಜೆಗೆ ತರುವ ಕೆಲಸ ಮಾಡಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಟ್ಯಾಂಕರ್‌ ನೀರು ಆರಂಭವಾಗಿಲ್ಲ
ಟ್ಯಾಂಕರ್‌ ನೀರು ಪೂರೈಕೆಗೆ ಟೆಂಡರ್‌ ಮಾತ್ರ ಮಾಡಲಾಗಿದೆ. ನೀರು ಪೂರೈಕೆ ಆರಂಭಿಸಿಲ್ಲ. ಚುನಾವಣಾ ಕರ್ತವ್ಯಕ್ಕೆ ಆಗಮಿಸಿರುವ ನೂರು ಮಂದಿ ಸೈನಿಕರು ವಾಸ್ತವ್ಯ ಇರುವ ನಗರದ ವಾಸ್ತವ್ಯ ಗೃಹಕ್ಕೆ ನಗರಸಭೆಯ ನೀರಿನ ಪ್ರಮಾಣ ಕಡಿಮೆಯಾದರೆ ಮಾತ್ರ ತುರ್ತಾಗಿ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಖಾಸಗಿಯವರು ಮಾತ್ರ ಖಾಸಗಿ ಬಾವಿಗಳಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ.    

ಈಗ 3.95 ಮೀ. ನೀರು 
ಅಣೆಕಟ್ಟಿನಲ್ಲೀಗ 3.95 ಮೀ. ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.42 ಮೀಟರ್‌ ಮಾತ್ರ ನೀರಿತ್ತು. ಮಳೆ ಬರದೇ ಹೋದರೆ ಮೇ 15ರವರೆಗೆ ಮಾತ್ರ ಸಿಗಬಹುದು. ಹೋದವರ್ಷ ಫೆಬ್ರವರಿಯಲ್ಲಿಯೇ ಡ್ರೆಜ್ಜಿಂಗ್‌ ಮಾಡಬೇಕಾಯಿತು. ಈ ಬಾರಿಯೂ 10-12 ದಿನಗಳಲ್ಲಿ ಡ್ರೆಜ್ಜಿಂಗ್‌ ಮಾಡಬೇಕಾಗಬಹುದು. ಸ್ಥಳೀಯ ಪಂಚಾಯತ್‌ನವರು ಕಳೆದ ಬಾರಿ ಆಕ್ಷೇಪ ಮಾಡಿದ್ದರು. ನಮ್ಮ ದನಕರುಗಳಿಗೂ ನೀರು ಸಿಗುವುದಿಲ್ಲ ಎಂಬ ಆಕ್ಷೇಪ ಅವರದ್ದಾಗಿತ್ತು. ಈ ಬಾರಿ ಅಂತಹ ಆಕ್ಷೇಪ ಬರಲಿಕ್ಕಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಡ್ರೆಜ್ಜಿಂಗ್‌ಗೆ ಆಕ್ಷೇಪವಿಲ್ಲ
ಬಜೆಯಿಂದ ಪುತ್ತಿಗೆವರೆಗೆ ಡ್ರೆಜ್ಜಿಂಗ್‌ ಮಾಡಲಿ. ಡ್ರೆಜ್ಜಿಂಗ್‌ಗೆ ಆದರೆ ಡ್ರೆಜ್ಜಿಂಗ್‌ ಮಾಡಿದ ಹೂಳನ್ನು ಅಲ್ಲಿಯೇ ಹಾಕದೇ ಹೊರಗೆ ಸಾಗಿಸಬೇಕು. ಕಳೆದ ತಿಂಗಳು ಮಳೆ ಬಂದ ಪರಿಣಾಮ ಸ್ವರ್ಣ ನದಿಯಲ್ಲಿ ಸರಿಸುಮಾರು ಒಂದೂವರೆ ಅಡಿ ನೀರಿನ ಮಟ್ಟ ಹೆಚ್ಚಾಗಿದೆ. ನಗರಸಭೆಯವರು ಕಳೆದ ಬಾರಿಗಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರೆತ್ತಿದ್ದಾರೆ.
– ಕುದಿ ಶ್ರೀನಿವಾಸ ಭಟ್‌, 
ಉಡುಪಿ ಜಿಲ್ಲಾ ಕೃಷಿಕ ಸಂಘ

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.