ಬೈಕ್ಕೆ ರಿಕ್ಷಾ ಢಿಕ್ಕಿ: ಖ್ಯಾತ ಕಬಡ್ಡಿ ಆಟಗಾರ ಸಾವು
Team Udayavani, Jun 3, 2018, 6:00 AM IST
ಪಡುಬಿದ್ರಿ: ತೆಂಕ ಗ್ರಾಮದ ಅಮೀನ್ ಮೂಲ ಸ್ಥಾನದ ಬಳಿ ಪಡುವಣ ಮೀನುಗಾರಿಕಾ ರಸ್ತೆಯಲ್ಲಿ ಜೂ. 1ರಂದು ಮಧ್ಯರಾತ್ರಿ ರಿಕ್ಷಾವೊಂದು ಬೈಕ್ಗೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರ, ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಎರ್ಮಾಳು ಬಡಾ ಗ್ರಾಮದ ಭಾರತ್ ನಗರ ನಿವಾಸಿ ಸುಜಿತ್ ಆರ್. ಮೆಂಡನ್ (21) ಸಾವನ್ನಪ್ಪಿದ್ದಾರೆ.
ಉಚ್ಚಿಲದಿಂದ ಪಡುಬಿದ್ರಿ ಕಡೆಗೆ ಬರು ತ್ತಿದ್ದ ರಿಕ್ಷಾ ಚಾಲಕನ ಅಜಾಗರೂ ಕ ತೆಯ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಢಿಕ್ಕಿ ಪರಿಣಾಮ ರಸ್ತೆ ಗುರುಳಿದ ಸುಜಿತ್ ತಲೆಯು ಪಕ್ಕದಲ್ಲಿದ್ದ ಕಲ್ಲಿಗೆ ಬಡಿದಿದೆ. ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.
ಶ್ರೇಷ್ಠ ಅಮೆಚೂರ್ ಕಬಡ್ಡಿ ಆಟಗಾರ
ಸುಜಿತ್ ಅವರು ಬಡಾ ಗ್ರಾಮದ ರಾಮಾಂಜನೇಯ ನ್ಪೋರ್ಟ್ಸ್ ಕ್ಲಬ್ ಮತ್ತು ಮಹಾಲಕ್ಷ್ಮೀ ತಂಡಗಳ ಸದಸ್ಯನಾಗಿದ್ದು, ಶ್ರೇಷ್ಠ ಅಮೆಚೂರ್ ಕಬಡ್ಡಿ ಆಟಗಾರರಾಗಿದ್ದರು. ಹೊರ ಜಿಲ್ಲೆಗಳ ತಂಡದ ನಾಯಕನಾಗಿಯೂ ಪ್ರತಿ ನಿಧಿಸಿದ್ದರು. ಕಬಡ್ಡಿಯಲ್ಲಿ ಹೆಸರಾಂತ ಕಾರ್ನರ್ ಆಟಗಾರನಾಗಿ ಮಿಂಚಿದ್ದ ಅವರು ಪಿಯುಸಿಯನ್ನು ಎರ್ಮಾಳು, ಅದಮಾರುಗಳಲ್ಲಿ ಮುಗಿಸಿದ್ದರು. ಆ ಸಂದ ರ್ಭ ದಲ್ಲೇ ಕಬಡ್ಡಿಯಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದರು ಹಾಗೂ ರಾಜ್ಯ ತಂಡವನ್ನೂ ಪ್ರತಿನಿಧಿಸಿ ಪಂಜಾಬ್ನಲ್ಲಿ ಆಟವಾಡಿದ್ದರು. ಸಂಜೆ ಕಾಲೇಜು ಶಿಕ್ಷಣವನ್ನೂ, ಬಿಡುವಿನ ವೇಳೆ ಮೀನುಗಾರಿಕಾ ವೃತ್ತಿಯನ್ನೂ ಮಾಡಿದ್ದ ಶ್ರಮ ಜೀವಿಯಾಗಿದ್ದರು. ಮೀನುಗಾರ ವೃತ್ತಿಯ ರಮೇಶ್ ಮೆಂಡನ್ ಯಶೋದಾ ದಂಪತಿಯ ಮೂವರು ಪುತ್ರರಲ್ಲಿ ಓರ್ವರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ