ಹೆಬ್ರಿ: ಹೆಚ್ಚುತ್ತಿದೆ ಸೋಲಾರ್ ಬ್ಯಾಟರಿ ಕಳವು
Team Udayavani, Jul 11, 2018, 6:00 AM IST
ಹೆಬ್ರಿ: ಹೆಬ್ರಿ ಹಾಗೂ ಚಾರ ಗ್ರಾ.ಪಂ. ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆಬದಿಯಲ್ಲಿರುವ ಸೋಲಾರ್ ದಾರಿ ದೀಪಗಳ ಕಳ್ಳತನ ಹೆಚ್ಚಾಗುತ್ತಿದೆ ಮಳೆಗಾಲದ ವೇಳೆ ಈ ಭಾಗದಲ್ಲಿ ಸಂಚರಿಸುವ ಜನರಿಗೆ ಸೋಲಾರ್ ದೀಪ ತುಂಬ ಪ್ರಯೋಜವಾಗಿತ್ತು. ಈ ಬಗ್ಗೆ ಈಗಾಗಲೇ ಪಂಚಾಯತ್ ಹಾಗೂ ಪೊಲೀಸ್ ಇಲಾಖೆಗೆ ದೂರನ್ನು ನೀಡ ಲಾಗಿದೆ. ಹುತ್ತುರ್ಕೆ ಬ್ರಹ್ಮಲಿಂಗೇಶ್ವರ ಗುಡಿಯ ಬಳಿ ಇರುವ ಸೋಲಾರ್ ದೀಪದ ಬ್ಯಾಟರಿ ಕಳ್ಳತನ ಆಗಿರುವ ಬಗ್ಗೆ ಸ್ಥಳೀಯರಾದ ಸದಾಶಿವ ಪ್ರಭು ಅವರೂ ಹೆಬ್ರಿ ಠಾಣೆಗೆ ದೂರು ನೀಡಿದ್ದಾರೆ.
ಸ್ಥಳೀಯರ ಶಂಕೆ
ಈಗಾಗಲೇ ಅಜೆಕಾರು ಸುತ್ತಮುತ್ತ ಪ್ರದೇಶದಲ್ಲಿ ಬ್ಯಾಟರಿ ಕಳ್ಳತನವಾಗುವ ಬಗ್ಗೆ ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ. ಅವರದ್ದೇ ಇನ್ನೊಂದು ತಂಡ ಈ ಭಾಗದಲ್ಲಿ ಕಳ್ಳತನ ಮಾಡುತ್ತಿ ರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ನಿಗಾ ವಹಿಸುತ್ತಿದ್ದೇವೆ
ಹೆಬ್ರಿ ಮಡಾಮಕ್ಕಿ ಮೊದಲಾದ ಪ್ರದೇಶದಲ್ಲಿ ಬ್ಯಾಟರಿ ಕಳ್ಳತನವಾಗುವ ಬಗ್ಗೆ ಮಾಹಿತಿಯಿದ್ದು ರಾತ್ರಿ ನಿಗಾ ವಹಿಸುತ್ತಿದ್ದೇವೆ. ತಡರಾತ್ರಿ ಪ್ಯಾಕ್ಟರಿಯಲ್ಲಿ ಕೆಲಸಮಾಡಿ ಹೋಗುವುದಾಗಿ ಕೆಲವರು ತಿರುಗಾಡುತ್ತಿದ್ದು ಅಂತವರು ತಮ್ಮ ಕಾರ್ಖಾನೆಯಿಂದ ಗುರುತು ಚೀಟಿ ಪಡೆದು ಕೊಳ್ಳಬೇಕು.ಆಗ ನಮ್ಮ ತನಿಖೆಗೆ ಸುಲಭವಾಗುತ್ತದೆ.
- ಮಹಾಬಲ ಶೆಟ್ಟಿ ಠಾಣಾಧಿಕಾರಿ, ಹೆಬ್ರಿ ಪೊಲೀಸ್ ಠಾಣೆ
ದೂರು ನೀಡಲಾಗಿದೆ
ಹೆಬ್ರಿ ಗ್ರಾ.ಪಂ. ವ್ಯಾಪ್ತಿಯ ಬಚ್ಚಪ್ಪು ಮೂರು ಸೈಂಟ್ಸ್ ಬಳಿ ಇತ್ತೀಚೆಗೆ ಬ್ಯಾಟರಿ ಕಳ್ಳತನವಾಗಿದ್ದು ಬ್ಯಾಟರಿ ಕಳ್ಳರ ತಂಡದಿಂದ ಈ ಕೆಲಸ ನಡೆಯುತ್ತಿದೆ. ಈ ಬಗ್ಗೆ ಹೆಬ್ರಿ ಠಾಣೆಗೆ ದೂರು ನೀಡಲಾಗಿದೆ.
- ಸುಧಾಕರ ಹೆಗ್ಡೆ ಅಧ್ಯಕ್ಷರು,ಗ್ರಾ.ಪಂ.ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ