ಶೀರೂರು ಮೂಲಮಠದಲ್ಲಿ ಶ್ರೀಗಳ ವೃಂದಾವನ ಪ್ರವೇಶ


Team Udayavani, Jul 20, 2018, 5:35 AM IST

vrindavana-19-7.jpg

ಉಡುಪಿ: ಐಹಿಕವನ್ನು ತ್ಯಜಿಸಿದ ಶ್ರೀ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ವೃಂದಾವನ ಪ್ರವೇಶ ಗುರುವಾರ ಸಂಜೆ ಹಿರಿಯಡಕ ಸಮೀಪದ ಶೀರೂರು ಮೂಲಮಠದಲ್ಲಿ  ಜರಗಿತು. ತೆರೆದ ಜೀಪಿನಲ್ಲಿ ಉಡುಪಿ ರಥಬೀದಿಯಿಂದ ಸಂಜೆ 6 ಗಂಟೆಗೆ ಹೊರಟ ಸ್ವಾಮೀಜಿ ಪಾರ್ಥಿವ ಶರೀರಕ್ಕೆ ದಾರಿಯುದ್ದಕ್ಕೂ ಜನರು ಕಾದು ನಿಂತು ಗೌರವ ಸಲ್ಲಿಸಿದರು. ಸುಮಾರು 7 ಗಂಟೆಗೆ ಶೀರೂರು ಮಠಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ದೇವರ ಸ್ಮರಣೆಯೊಂದಿಗೆ ಶರೀರವನ್ನು ಶಿಖೀಯಲ್ಲಿ (ಬುಟ್ಟಿ ) ಇರಿಸಿ ಮುಖ್ಯದ್ವಾರದಿಂದ ಒಳಗೆ ಕರೆದುಕೊಂಡು ಹೋಗಿ ಸ್ವರ್ಣಾ ನದಿಯಲ್ಲಿ ಸ್ನಾನ ಮಾಡಿಸಲಾಯಿತು. ಅಲ್ಲಿ ಗೋಪಿಚಂದನವನ್ನು ಹಚ್ಚಿ ಹೊಸ ಕಾವಿಶಾಟಿಯನ್ನು ಉಡಿಸಲಾಯಿತು. ದೇವರಿಗೆ ಸಮರ್ಪಿಸಿದ ತುಳಸೀ ದಳದ ಮಾಲೆಯನ್ನು ಹಾಕಿ ವೇದೋಕ್ತ ವಿಧಿವಿಧಾನಗಳೊಂದಿಗೆ ಕಲಶಾಭಿಷೇಕ ನಡೆಸಲಾಯಿತು. ವಿರಜಾ ಮಂತ್ರ (ಸನ್ಯಾಸ ತೆಗೆದುಕೊಳ್ಳುವ ವಿಶೇಷ ಮಂತ್ರ), ಪವಮಾನ ಸೂಕ್ತ ಮೊದಲಾದ ವೇದೋಕ್ತ ಮಂತ್ರಗಳನ್ನು ಪಠಿಸುತ್ತ ಸಾಲಿಗ್ರಾಮದಿಂದ ತೀರ್ಥವನ್ನೂ ಸಮರ್ಪಿಸಲಾಯಿತು. ಬಳಿಕ ವಾದ್ಯಘೋಷದೊಂದಿಗೆ ಪಾರ್ಥಿವ ಶರೀರವನ್ನು ಮಠದೊಳಗೆ ತಂದು ದೇವರಿಗೆ ಸ್ವಾಮೀಜಿಯವರಿಂದ ಪೂಜೆ ಸಲ್ಲಿಸಲಾಯಿತು.


ಧಾರ್ಮಿಕ ವಿಧಿ ವಿಧಾನ

ಶೀರೂರು ಮೂಲ ಮಠದ ಮುಖ್ಯಪ್ರಾಣ ದೇವರ ಗುಡಿಯ ಹೊರಗೆ ಇರುವ ಜಾಗದಲ್ಲಿ ವೃಂದಾವನ ನಿರ್ಮಿಸಲು ಕುಣಿಯನ್ನು ತೆಗೆದಿಡಲಾಗಿತ್ತು. ಹೊಂಡದ ಎದುರು ಸಣ್ಣ ಕಿಂಡಿಯನ್ನು ನಿರ್ಮಿಸಲಾಗಿತ್ತು. ಕಿಂಡಿಯಲ್ಲಿ ದೇವರ ವಿಗ್ರಹ, ಶಂಖ, ಘಂಟಾಮಣಿಯನ್ನು ಇರಿಸಲಾಯಿತು. ಸ್ವಾಮೀಜಿಯವರನ್ನು ಕುಣಿಯಲ್ಲಿರಿಸಿ ಅಲ್ಲಿ ಜಪಮಾಲೆ, ಕಮಂಡಲು, ಗಿಂಡಿಯನ್ನು ಇರಿಸಲಾಯಿತು.

ಬಲಬದಿ ದಂಡವನ್ನು (ಸನ್ಯಾಸ ಸ್ವೀಕರಿಸುವಾಗ ನೀಡಿದ್ದು) ಇರಿಸಲಾಯಿತು. ಈ ಹೊತ್ತಿಗೆ ಪುರುಷ ಸೂಕ್ತವೇ ಮೊದಲಾದ ಮಂತ್ರಗಳನ್ನು ಪಠಿಸಲಾಯಿತು. ತಲೆಯ ಮೇಲಿಂದ ಸಾಂಕೇತಿಕವಾಗಿ ತೆಂಗಿನಕಾಯಿ ಒಡೆಯಲಾಯಿತು. ಪಾರ್ಥಿವ ಶರೀರದ ಸುತ್ತಲೂ ಸುಮಾರು 15 ಕೆ.ಜಿ. ಹತ್ತಿಯನ್ನು ಹಾಕಿ ಅದರ ಹೊರಭಾಗ ಉಪ್ಪು, ಸಾಸಿವೆ, ಪಚ್ಚ ಕರ್ಪೂರ, ಕಾಳುಮೆಣಸುಗಳನ್ನು ತಲಾ ಸುಮಾರು 1.5 ಕ್ವಿಂಟಾಲ್‌ನಷ್ಟು ಸುರಿಯಲಾಯಿತು. ಮೇಲ್ಭಾಗ ಕಲ್ಲು ಚಪ್ಪಡಿಯನ್ನು ಹಾಸಿ ಅದರ ಮೇಲೆ ತುಳಸಿ ಗಿಡವನ್ನು ನೆಟ್ಟರು.

ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವೇ|ಮೂ| ಹೆರ್ಗ ವೇದವ್ಯಾಸ ಭಟ್‌ ಅವರ ನೇತೃತ್ವದಲ್ಲಿ ಜರಗಿದವು.

ಉತ್ತರಾಧಿಕಾರಿ ಆಯ್ಕೆ ಸೋದೆ ಶ್ರೀ ಹೆಗಲಿಗೆ
ಸೋದೆ ಮತ್ತು ಶೀರೂರು ದ್ವಂದ್ವ ಮಠಗಳ ಪರಂಪರೆ ವಿಶಿಷ್ಟವಾದುದು. ಸೋದೆ ಮಠದ ಪರಂಪರೆಯಲ್ಲಿ ಪ್ರತಿಯೊಬ್ಬ ಶಿಷ್ಯರನ್ನು ಅವರ ಮಠದ ಹಿರಿಯ ಸ್ವಾಮೀಜಿಯವರೇ ನೀಡಿದ್ದರು. ಶೀರೂರು ಮಠದ ಪ್ರತಿಯೊಬ್ಬ ಸ್ವಾಮೀಜಿಯವರನ್ನು ದ್ವಂದ್ವ ಮಠವಾದ ಸೋದೆ ಮಠಾಧೀಶರೇ ನೇಮಿಸಿದ್ದರು. ಈಗಲೂ ಶೀರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಹೊಣೆ ಸೋದೆ ಮಠಾಧೀಶರ ಹೆಗಲೇರಿದೆ.

ಶೀರೂರು ಮಠಕ್ಕೆ ಯಾವಾಗ ಉತ್ತರಾಧಿಕಾರಿಯನ್ನು ನೇಮಿಸುತ್ತೀರಿ ಎಂದು ಪತ್ರಕರ್ತರು ಸೋದೆ ಮಠಾಧೀಶರನ್ನು ಕೇಳಿದಾಗ, ‘ಜಾತಕ ಪರಿಶೀಲನೆ ಮಾಡಿ ನೇಮಿಸಬೇಕಾಗುತ್ತದೆ’ ಎಂದರು. ಈಗ ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರ ನಡೆಸುವಂತಿಲ್ಲ, ಚಾತುರ್ಮಾಸ್ಯ ವ್ರತ ಸದ್ಯವೇ ಆರಂಭವಾಗುವ ಕಾರಣ ಬಳಿಕವೂ ನೇಮಿಸಬಹುದಾಗಿದೆ ಎಂದು ತಿಳಿದುಬಂದಿದೆ. ಸದ್ಯ ಶೀರೂರು ಮಠದ ಪಟ್ಟದ ದೇವರು ಶ್ರೀಕೃಷ್ಣ ಮಠದಲ್ಲಿ ಪೂಜೆಗೊಳ್ಳುತ್ತಿರುವುದರಿಂದ ಪೂಜೆಯ ಸಮಸ್ಯೆ ಇಲ್ಲ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.