ಕಟ್ಟಿಕೆರೆ : ಹೆದ್ದಾರಿ ಪಾರ್ಶ್ವದಲ್ಲಿ ಬಾಯ್ದೆರೆದ ಗುಂಡಿಗೆ ಮೋಕ್ಷ
Team Udayavani, Jul 26, 2018, 6:45 AM IST
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳ ಕಟ್ಟಿಕೆರೆ ಬಳಿ ಹೆದ್ದಾರಿಯ ಪೂರ್ವ ಪಾರ್ಶ್ವದಲ್ಲಿ ಮಳೆ ನೀರು ಮತ್ತು ವಾಹನ ಸಂಚಾರದ ಒತ್ತಡದ ಕಾರಣದಿಂದ ದೊಡ್ಡ ಗಾತ್ರದ ಗುಂಡಿಯೊಂದು ಬಾಯ್ದೆರೆದುಕೊಂಡಿದ್ದು, ಬುಧವಾರ ಗುಂಡಿಗೆ ಮೋಕ್ಷ ಕಾಣಿಸಲಾಗಿದೆ.
ಈ ಭಾಗದಲ್ಲಿ ಶಾಲೆ, ಹೂವಿನ ಮಾರಾಟದ ಕಟ್ಟೆಯು ಕಾರ್ಯಾಚರಿಸುತ್ತಿದೆ. ಹೆಚ್ಚಿನ ಜನ ಸಂಚಾರ ಈ ಭಾಗದಲ್ಲಿ ನಿತ್ಯ ಸಂಚಾರಿಗಳಾಗಿದ್ದು, ಶಾಲಾ ಮಕ್ಕಳು ಇದೇ ದಾರಿಯಾಗಿ ಸಾಗುತ್ತಿದ್ದಾರೆ. ಇದರೊಂದಿಗೆ ಹೆದ್ದಾರಿ ವಾಹನಗಳ ಸಂಚಾರ ಭರಾಟೆಯು ಇಲ್ಲಿ ಸ್ವಲ್ಪ ಹೆಚ್ಚಾಗಿದ್ದು, ಹೆದ್ದಾರಿಯಲ್ಲೂ ಈ ಭಾಗದಲ್ಲಿ ಹೊಂಡ ನಿರ್ಮಾಣಗೊಂಡಿದೆ. ಹಾಗಾಗಿ ಈ ಸ್ಥಳ ಅತ್ಯಂತ ಅಪಾಯಕಾರಿಯಾಗಿ ಕಂಡು ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ಈ ಗುಂಡಿಯು ಮೃತ್ಯು ಕೂಪವಾಗಿ ಪರಿವರ್ತನೆಯಾಗ ಬಲ್ಲುದು ಎಂದು ನಿತ್ಯ ಸಂಚಾರಿಗಳು ಭಯವನ್ನು ವ್ಯಕ್ತ ಪಡಿಸುತ್ತಿದ್ದಾರೆ ಎಂದು ಉದಯವಾಣಿಗೆ ಜು.12ರಂದು ವರದಿ ಪ್ರಕಟಿಸಿತ್ತು.
ತಡವಾಗಿಯಾದರೂ ಎಚ್ಚೆತ್ತ ಸಂಬಂಧ ಪಟ್ಟ ಇಲಾಖೆಯು ಕೊನೆಗೂ ಪಕ್ಕದ ತೋಡಿನಿಂದ ಮಣ್ಣನ್ನು ಜೆಸಿಬಿ ಮೂಲಕ ತೆಗೆದು ಈ ಹೊಂಡವನ್ನು ಮುಚ್ಚುವ ಮೂಲಕ ಸ್ಥಳೀಯರ ಆತಂಕಕ್ಕೆ ಮುಕ್ತಿ ನೀಡಿದ್ದಾರೆ.
ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿದು ಈ ಗುಂಡಿ ಬಾಯ್ದೆರೆದು ನಿಂತಿದ್ದು, ಇನ್ನು ಮುಂದುವರೆಯ ಬಹುದಾದ ಮಳೆಯ ತೀವ್ರತೆಗೆ ಹೆದ್ದಾರಿಯೂ ಇದರೊಂದಿಗೆ ಕುಸಿಯುವ ಸಾಧ್ಯತೆಯು ಹೆಚ್ಚಾಗಿತ್ತು. ಜೋರಾಗಿ ಮಳೆ ಬಂದಾಗ ಇಲ್ಲಿ ನಿಲ್ಲುವ ನೀರಿನಿಂದಾಗಿ ಈ ಗುಂಡಿಯು ಗೋಚರಕ್ಕೆ ಬರದೆ ವಾಹನ ಸವಾರರು ಅಥವಾ ಪಾದಾಚಾರಿಗಳು ಅನಾಹುತವನ್ನೆದುರಿಸಬೇಕಾದ ದುಸ್ಥಿತಿ ಹೊಂದಿತ್ತು ಎಂದು ನಾಗರೀಕರು ಕಳವಳ ವ್ಯಕ್ತ ಪಡಿಸಿದ್ದು, ಇದೀಗ ನಿರಾಳರಾಗುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?