ಒಂದೇ ಮನೆಯ ಇಬ್ಬರ ಆತ್ಮಹತ್ಯೆ


Team Udayavani, Aug 17, 2018, 10:05 AM IST

suicide-2525.jpg

ಕಾರ್ಕಳ: ಒಂದೇ ಮನೆಯಲ್ಲಿ ವಾಸವಿದ್ದ ಇಬ್ಬರು ಯುವಕರು ವಿಷಸೇವಿಸಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಲ್ಯಾ ಸಮೀಪದ ಗರಡಿನಗರದ ನಿವಾಸದಲ್ಲಿ ಆ. 15ರ ರಾತ್ರಿ ಸಂಭವಿಸಿದೆ.

ಗರಡಿಮನೆಯ ನಿವಾಸಿ ಪ್ರೀತೇಶ್‌ (24) ಹಾಗೂ ಆತನ ಆತ್ತೆಯ ಮಗ ನವೀನ್‌ ಪೂಜಾರಿ (28) ಮೃತಪಟ್ಟವರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರೀತೇಶ್‌ ಉಡುಪಿಯ ಹೊಟೇಲ್‌ನಲ್ಲಿ ರಿಸೆಪ್ಶನಿಸ್ಟ್‌ ಹಾಗೂ ನವೀನ್‌ ಪೂಜಾರಿ ಫ್ಯಾಕ್ಟರಿಯೊಂದರ ಅಕೌಂಟ್ಸ್‌ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಊಟ ಮುಗಿಸಿ ವಿಷ ಸೇವನೆ
ಒಂದೇ ಮನೆಯಲ್ಲಿರುವ ಇವರು ಸಂಬಂಧಿಗಿಂತ ಹೆಚ್ಚಾ ಗಿ ಗೆಳೆಯರಂತಿದ್ದರು. ಪ್ರತಿದಿನ ಒಟ್ಟಿಗೆ ಊಟ, ಒಂದೇ ಕೋಣೆಯಲ್ಲಿ  ನಿದ್ರೆ ಮಾಡುತ್ತಿದ್ದರು. ಜೂ. 15ರಂದು ರಾತ್ರಿಯೂ ಒಟ್ಟಿಗೆ ಊಟ ಮುಗಿಸಿ ಮಲಗಲೆಂದು ಕೋಣೆಗೆ ತೆರಳಿದ್ದು, ಸ್ವಲ್ಪ ಹೊತ್ತಿನಲ್ಲೇ  ಅಲ್ಲಿಂದ ಹೊರ ಬಂದಿದ್ದಾರೆ. ತತ್‌ಕ್ಷಣ ಕುಸಿದು ಬಿದ್ದ ಅವರನ್ನು ಮನೆಯವರು ಆಸ್ಪತ್ರೆಗೆ ಕೊಂಡೊ ಯ್ದರೂ ಜೀವ ಉಳಿಸಲಾಗಲಿಲ್ಲ. 

ಸ್ಥಳದಲ್ಲಿ ಆಲ್ಕೋಹಾಲ್‌ ಬಾಟಲ್‌  ಪತ್ತೆಯಾಗಿದೆ. ರಾತ್ರಿ ಊಟ ಮುಗಿಸಿ ಮಲಗುವ ಹೊತ್ತಿನಲ್ಲಿ ಆಲ್ಕೋಹಾಲ್‌ಗೆ ವಿಷ ಬೆರೆಸಿ ಸೇವಿಸಿರಬಹುದು. ಆದರೆ ನವೀನ್‌ ಪೂಜಾರಿ ಎಂದೂ ಆಲ್ಕೋಹಾಲ್‌ ಸೇವಿಸುತ್ತಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ: ಸ್ಟೋರ್‌ ಮ್ಯಾನೇಜರ್‌ನಿಂದ ವಂಚನೆ
ಉಡುಪಿ
: ಮಣಿಪಾಲದ ಸ್ಕೆಚರ್ ಸ್ಟೋರ್‌ನ ಮ್ಯಾನೇಜರ್‌ ಕಂಪೆನಿಯ ಸ್ವೆ„ಪ್‌ ಮೆಷಿನ್‌ ಜತೆಗೆ ಇನ್ನೊಂದು ಮೆಷಿನ್‌ ಬಳಸಿ ಗ್ರಾಹಕರು ಮತ್ತು ಕಂಪೆನಿಗೆ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

ಇಲ್ಲಿ 2018ರ ಜೂ.9ರಿಂದ 2018ರ ಜು.26ರ ವರೆಗೆ ಮ್ಯಾನೇಜರ್‌ ಆಗಿದ್ದ ಕಾರ್ತಿಕ್‌, ಗ್ರಾಹಕರಿಂದ ಮೊದಲು ಬೇರೆ ಮೆಷಿನ್‌ನಲ್ಲಿ ಸ್ವೆ„ಪ್‌ ಮಾಡಿಸುತ್ತಾನೆ. ಬಳಿಕ ಅದು ಸರಿಯಿಲ್ಲ ಎಂದು ಹೇಳಿ ಕಂಪೆನಿಯ ಮೆಷಿನ್‌ನಲ್ಲಿ  ಸ್ವೆ„ಪ್‌ ಮಾಡಿಸಿ ಬಿಲ್‌ ನೀಡುತ್ತಿದ್ದ. 

ತನ್ನ  ಮೆಷಿನ್‌ನಲ್ಲಿ ಶೇಖರಣೆಯಾದ ಗ್ರಾಹಕರ ಎಟಿಎಂ ಕಾರ್ಡ್‌, ಪಿನ್‌ ನಂಬರ್‌ ವಿವರಗಳನ್ನು ಐಸಿಕ್ಯು ಎಂಬ ಸಾಫ್ಟ್ವೇರ್‌ನಲ್ಲಿ ಡ್ನೂಡ್‌ ಎಂಬ ವ್ಯಕ್ತಿಗೆ ಕಳುಹಿಸಿ ಆನ್‌ಲೈನ್‌  ಮೂಲಕ ಹಣ ವಿದ್‌ಡ್ರಾ ಮಾಡುತ್ತಿದ್ದ. ಕಂಪೆನಿಗೂ  83,249 ರೂ. ನಷ್ಟ ಉಂಟು ಮಾಡಿ ದ್ದಾನೆ. ಕಿರಣ್‌ ಎಂಬಾತ  ಮೆಷಿನ್‌ ಅನ್ನು ಸ್ಥಳಾಂತರಿಸಿದ್ದಾನೆ ಎಂದು ಪೊಲೀಸ್‌ ದೂರು ನೀಡಲಾಗಿದೆ.

ಟಾಪ್ ನ್ಯೂಸ್

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.