ಮಲ್ಪೆ – ಸಿಟಿಜನ್ ಸರ್ಕಲ್ ರಸ್ತೆ: ಗುಂಡಿಮಯ
Team Udayavani, Aug 20, 2018, 6:00 AM IST
ಮಲ್ಪೆ: ಮಲ್ಪೆಯ ಮುಖ್ಯ ರಸ್ತೆಯಿಂದ ಸಿಟಿಜನ್ ಸರ್ಕಲ್ ಮೂಲಕ ಬೀಚ್ಗೆ ಸಾಗುವಾಗ ಕೊರೊನೆಟ್ ಪೆಟ್ರೋಲ್ ಬಂಕ್ ಬಳಿ ರಸ್ತೆಯ ಮಧ್ಯೆ ಬೃಹತ್ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು ಅಪಾಯಕ್ಕೆ ಅಹ್ವಾನವೀಯುತ್ತಿದೆ.
ರಸ್ತೆಯ ಡಾಮರು ಕಿತ್ತು ಹೋಗಿ ಹೊಂಡ ಬಿದ್ದಿದೆ. ಇದೀಗ ಹೊಂಡದಲ್ಲಿ ಮಳೆನೀರು ನಿಂತು ವೇಗವಾಗಿ ಬರುವ ವಾಹನ ಸವಾರರು ತಮ್ಮ ವಾಹನಗಳೊಂದಿಗೆ ಹಳ್ಳಕ್ಕೆ ಬಿದ್ದು ತೊಂದರೆ ಅನುಭವಿಸುತ್ತಿದ್ದಾರೆ.
ಮುಖ್ಯವಾಗಿ ಈ ಭಾಗದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇರದ ಕಾರಣ ಮಳೆನೀರು ರಸ್ತೆಯಲ್ಲಿ ಹರಿಯುತ್ತಿದೆ.
ದಿನದಿಂದ ದಿನಕ್ಕೆ ರಸ್ತೆಯ ಹೊಂಡ ವಿಸ್ತಾರಗೊಳ್ಳುತ್ತಾ ಬರುತ್ತಿದ್ದು, ಇದರ ಪರಿವೆ ಇಲ್ಲದೆ ಓಡಾಡುವ ಸವಾರರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ.
ರಾತ್ರಿ ವೇಳೆ ಇಲ್ಲಿನ ಹೊಂಡ ಗಮನಕ್ಕೆ ಬಾರದೆ ಈಗಾಗಲೇ ಕೆಲವು ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ಸಂಭವಿಸಿವೆ.
ದುರಸ್ತಿಪಡಿಸಬೇಕಾದ ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿಲ್ಲ. ಮಾರ್ಗ ಮಧ್ಯೆ ಈ ಗುಂಡಿಗಳನ್ನು ಆದಷ್ಟು ಬೇಗ ಸರಿಪಡಿಸಿ ಜನರನ್ನು ಮೃತ್ಯುಕೂಪದಿಂದ ಪಾರು ಮಾಡುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ