ಸಾಲಿಗ್ರಾಮ ಪ.ಪಂ.: ಶಾಂತಿಯುತ ಮತದಾನ


Team Udayavani, Sep 1, 2018, 2:00 AM IST

saligrama-election-31-8.jpg

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ 16 ವಾರ್ಡ್‌ಗಳಲ್ಲಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಜನರು ಮತಕೇಂದ್ರಕ್ಕೆ ಆಗಮಿಸಿದರು. ಆದರೆ 9ರಿಂದ 1ಗಂಟೆಯ ತನಕ ಅಷ್ಟೇನು ಜನಸಂದಣಿ ಇರಲಿಲ್ಲ ಹಾಗೂ ಹಲವು ಮತಗಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನ 3 ಗಂಟೆವರೆಗೆ 62.53ರಷ್ಟು ಮತಚಲಾವಣೆಯಾಗಿತ್ತು. ಇಲ್ಲಿನ ಖಾಸಗಿ ಹಿ.ಪ್ರಾ. ಶಾಲೆ ಪಾರಂಪಳ್ಳಿ-ಪಡುಕರೆ, ಗ್ರಾಮಕರಣಿಕರ ಕಚೇರಿ ಸಾಲಿಗ್ರಾಮ, ಸ.ಹಿ.ಪ್ರಾ. ಶಾಲೆ ಚಿತ್ರಪಾಡಿ, ಗಜಾನನ ಹಿ.ಪ್ರಾ.ಶಾಲೆ ತೋಡ್ಕಟ್ಟು, ಸ.ಹಿ.ಪ್ರಾ.ಶಾಲೆ ಕೋಟ, ನ್ಯೂ ಕಾರ್ಕಡ ಶಾಲೆ, ಗ್ರಂಥಾಲಯ ಕಟ್ಟಡ ಕಾರ್ಕಡ ಕಡಿದ ಹೆದ್ದಾರಿ, ಜಿ.ಸ.ಹಿ.ಪ್ರಾ.ಶಾಲೆ ಕಾರ್ಕಡ, ಪಿ.ಜಿ.ಹಿ. ಪ್ರಾ. ಶಾಲೆ ಪಾತಳಬೆಟ್ಟು ಗುಂಡ್ಮಿ, ಸ.ಪ್ರೌಢಶಾಲೆ ಗುಂಡ್ಮಿಯ ಮತಕೇಂದ್ರಗಳಲ್ಲಿ 16 ವಾರ್ಡ್‌ಗಳ ಮತದಾನ ನಡೆಯಿತು. ರಿಟರ್ನಿಂಗ್‌ ಆಫೀಸರ್‌ಗಳಾಗಿ ಲಲಿತಾ ಬಾೖ, ಲೋಕೇಶ್‌ ಕಾರ್ಯನಿರ್ವಹಿಸಿದರು.


ಕಾರ್ಕಡ ಶಾಲೆಯ ಮತಗಟ್ಟೆಯಲ್ಲಿ106 ವರ್ಷದ ಲಚ್ಚಿ ದೇವಾಡಿಗ ಮತದಾನ ಮಾಡಿದರು.

ಮತದಾನಕ್ಕೆ ಹಿರಿಯರು-ವೃದ್ಧರಿಗೆ ಆಸಕ್ತಿ
80-90 ವರ್ಷದ ವೃದ್ಧರು, ಅನಾರೋಗ್ಯ ಪೀಡಿತರು ಕೂಡ ಮನೆಯವರ ಸಹಾಯದಿಂದ ಆಸಕ್ತಿಯಿಂದ ಮತಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿದ ದೃಶ್ಯ ಎಲ್ಲ ಕಡೆಗಳಲ್ಲಿ ಕಂಡು ಬಂತು. ಕಾರ್ತಟ್ಟು ವಾರ್ಡ್‌ನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ 90 ವರ್ಷದ ರುದ್ರಮ್ಮ ಶೆಡ್ತಿ ಆ್ಯಂಬುಲೆನ್ಸ್‌ನಲ್ಲಿ ಬಂದು ಮತಚಲಾಯಿಸಿ ಪುನಃ ಆಸ್ಪತ್ರೆಗೆ ದಾಖಲಾಗಿದ್ದು ವಿಶೇಷವಾಗಿತ್ತು.

ಶಾಂತ ವಾತಾವರಣ
ಹೆಚ್ಚಿನ ಮತಕೇಂದ್ರದಲ್ಲಿ ಎದುರಾಳಿಗಳು ಹಾಗೂ ಕಾರ್ಯಕರ್ತರು ಒಟ್ಟಾಗಿ ನಿಂತು ತಮಾಷೆಯಾಗಿ ಶಾಂತಿಯುತವಾಗಿ ಮಾತುಕತೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ಕೆಲವು ಕಡೆ ಮತದಾರರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು.

ಪೊಲೀಸ್‌ ಬಂದೋಬಸ್ತ್
ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌ ಮತಗಟ್ಟೆಗಳಿಗೆ ತೆರಳಿ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡರು. ಡಿವೈ.ಎಸ್‌.ಪಿ. ಕುಮಾರಸ್ವಾಮಿ ಮೇಲುಸ್ತುವಾರಿ ಹೊಣೆ ನಿರ್ವಹಿಸಿದರು. 15ಮಂದಿ ಮುಖ್ಯ ಪೇದೆಗಳು, ಒಂದು ಡಿ.ಆರ್‌. ವ್ಯಾನ್‌, 17ಪೇದೆ, ಓರ್ವ ಮುಖ್ಯ ಪೇದೆ ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿಯವರ ನೇತೃತ್ವದಲ್ಲಿ ಕರ್ತವ್ಯ ನಿರ್ವಹಿಸಿದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.