ತೆಂಗು ಕೃಷಿ ಲಾಭಕರವಾಗುವತ್ತ ಇರಲಿ ಪ್ರಯತ್ನ


Team Udayavani, Sep 1, 2018, 2:10 AM IST

coconut-600.jpg

ಪಡುಬಿದ್ರಿ: ಇಂದು ವಿಶ್ವ ತೆಂಗು ದಿನ ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ, ಸಾವಯವ ಪದ್ಧತಿಯನ್ನು ಅನುಸರಿಸಿಕೊಂಡು ಉತ್ತಮ ಬೆಳೆ ತೆಗೆಯುವ ಅವಕಾಶಗಳಿವೆ. ಇದನ್ನು ಅರಿತು ಕೃಷಿಕರು ಕಾರ್ಯವೆಸಗಬೇಕಾಗಿದ್ದು, ಸರಕಾರ ಕೂಡ ಅಗತ್ಯ ಬೆಂಬಲ ಬೆಲೆ 5 ರೂ. ನೀಡಿ, ರೈತರ ಹಿತ ಕಾಪಾಡಬೇಕೆಂಬ ಬೇಡಿಕೆ ಇದೆ.  ದ.ಕ., ಉಡುಪಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ತೆಂಗುಬೆಳೆ ಈಗ ಪ್ರಮುಖ ಬೆಳೆಗಳಲ್ಲಿ ಒಂದಾಗಿದ್ದು, ವರಮಾನದ ಮೂಲವಾಗಿದೆ. ಆದರೆ ಸೂಕ್ತ ಮಾಹಿತಿ ಕೊರತೆಯಿಂದ ತೆಂಗಿನ ಕೃಷಿಯನ್ನು ಲಾಭಕರವನ್ನಾಗಿ ಮಾಡುವಲ್ಲಿ ಕೃಷಿಕ ಇನ್ನೂ ಎಡವುತ್ತಲೇ ಇದ್ದಾನೆ.

ತೆಂಗಿನ ಬೆಳೆಗೆ ಅತಂತ್ರ ಸ್ಥಿತಿ
ಜಿಲ್ಲೆಯಲ್ಲಿ ಮೂರ್ತೆದಾರಿಕೆಯು ಬಹಳಷ್ಟು ಬಲಯುತವಾಗಿದ್ದಾಗ ಕಾಯಿಲೆ ಬಂದಾಗಲೂ ತೆಂಗಿನ ಕೊಂಬನ್ನು ಸೀಳಿ ಬಿಡುತ್ತಿದ್ದರು. ಆಗ ಇಳುವರಿಯೂ ಹೆಚ್ಚಾಗುತ್ತಿತ್ತು. ಹಾಗಾಗಿ ತೆಂಗಿನ ಮರದ ರಕ್ಷಣೆಗೂ ಮೂರ್ತೆದಾರಿಕೆ ಒಂದು ಉಪಕ್ರಮವಾಗಿತ್ತು. ಈಗ ಮೂರ್ತೆದಾರಿಕೆಯೂ ಜಿಲ್ಲೆಯಲ್ಲಿ ಕ್ಷೀಣಿಸಿದೆ. ಹಾಗಾಗಿ ಈಗ ತೆಂಗಿನ ಬೆಳೆ ಅತಂತ್ರ ಸ್ಥಿತಿಯಲ್ಲಿದೆ ಎನ್ನುತ್ತಾರೆ. ಮೂರ್ತೆದಾರಿಕೆ ಕುಟುಂಬದಿಂದ ಬಂದಿರುವ ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ ಹೇಳುತ್ತಾರೆ.

ಅವೈಜ್ಞಾನಿಕ ಪದ್ಧತಿ
ತೆಂಗು ಕೃಷಿಕರಾದ ಬಂಟಕಲ್ಲು ರಾಮೃಕಷ್ಣ ಶರ್ಮರು ಹೇಳುವಂತೆ ತೆಂಗಿನ ಗಿಡದಿಂದ ಗಿಡಕ್ಕೆ 27 ಅಡಿ ದೂರವಿರಬೇಕು. ಈ ಗಿಡಗಳ ನಡುವೆ ಸಣ್ಣ ಗಿಡಗಳನ್ನು ಮತ್ತೆ ನೆಡುತ್ತಾರೆ. ಇದು ತಪ್ಪು. ಇದರಿಂದ ಇಳುವರಿ ಶೇ.10ಕ್ಕೆ ಬರುತ್ತದೆ. ತೆಂಗಿನ ಗಿಡ ನಿಧಾನವಾಗಿ ಬೆಳೆಯುತ್ತದೆ. ಕ್ರಮಬದ್ಧವಾಗಿ ತೆಂಗಿನ ಕೃಷಿ ಮಾಡಿದಲ್ಲಿ ಸುಮಾರು 10ವರ್ಷಗಳ ಕಾಲ ನಾವು ಫಲವನ್ನು ಕೈಯಿಂದಲೇ ಕೊಯ್ಯಬಹುದಾಗಿದೆ. ಅವೈಜ್ಞಾನಿಕ ಬೇಸಾಯ ಕ್ರಮದಿಂದ ತೆಂಗಿನ ಇಳುವರಿ ನಮ್ಮ ಜಿಲ್ಲೆಯಲ್ಲಿ ಸಹಜವಾಗಿಯೇ ಕಡಿಮೆಯಾಗಿದೆ.

ಬೀಜಕ್ಕೆ ತಾಯಿಮರದ ಆಯ್ಕೆ ಸರಿಯಾಗಿರಲಿ
ಜಿಲ್ಲೆಯ ಮಣ್ಣಿನಲ್ಲಿ ಸಾವಯವ ಅಂಶಗಳು ಕಡಿಮೆಯಿದ್ದು ಮಣ್ಣಿನ ಫ‌ಲವತ್ತತೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗೆಯೇ ತಾಯಿ ಮರದಿಂದ ಬೀಜದ ಆಯ್ಕೆ ಮಾಡಿಕೊಳ್ಳುವುದೂ ಅತ್ಯಂತ ಪ್ರಶಸ್ತವಾಗಿರಬೇಕು. ಇದರಿಂದಾಗಿ ಶೆ.50ರಷ್ಟು ಇಳುವರಿ ಹೆಚ್ಚಾಗುತ್ತದೆ ಎನ್ನುತ್ತಾರೆ ಶರ್ಮಾ ಅವರು. ಅವರ ಅಭಿಪ್ರಾಯದಂತೆ ತೆಂಗಿನ ಮರದ ಕೊಳೆ ರೋಗದಿಂದ ಅಷ್ಟೇನೂ ಸಮಸ್ಯೆಯಿಲ್ಲ. ಸುಳಿ ಕೊಳೆ ರೋಗದಿಂದ ಮಳೆಗಾಲದಲ್ಲಿ ಶೇ. 4 – 5ರಷ್ಟು ಮರಗಳು ಸಾಯುತ್ತವೆ. ಕಪ್ಪು ಹುಳ ಬಾಧೆ, ಬಳಿ ನೊಣ, ಕೆಂಪು ಮೂತಿ ಹುಳ ಅಲ್ಪ ಮಟ್ಟಿಗೆ ತೆಂಗಿನ ಕೃಷಿಯನ್ನು ಬಾಧಿಸುತ್ತವೆ. ಫಲವತ್ತತೆಯನ್ನು ಹೆಚ್ಚಿಸಿ ವೈಜ್ಞಾನಿಕವಾಗಿ ತೆಂಗಿನ ಬೆಳೆ ಬೆಳೆದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ. ಮಣ್ಣಿನ ಫಲವತ್ತತೆಗೆ ಎರೆಹುಳುಗಳೂ ಸಾಮಾನ್ಯವಾಗಿಯೇ ಕಾರಣವಾಗುತ್ತವೆ. ತೆಂಗಿನ ಸೋಗೆ, ದಂಡುಗಳನ್ನೂ ತೆಂಗಿನ ಬುಡಕ್ಕೆ ಹಾಕಿದಾಗಲೂ ಫಲವತ್ತತೆ ಹೆಚ್ಚುತ್ತದೆ. ತೆಂಗಿನ ತೋಟದಲ್ಲಿ ಕಳೆಗಳೂ ಹೆಚ್ಚು ಹೆಚ್ಚು ಬೆಳೆದಾಗ ಅವುಗಳೂ ಮಣ್ಣಿನ ಫಲವತ್ತತೆಗೆ ಪರೋಕ್ಷ ಕಾರಣವೆನಿಸುತ್ತದೆ. ಕಳೆಯ ಬೇರುಗಳು, ಎಲೆಗಳು ಕೊಳೆತು ಗೊಬ್ಬರವಾದಾಗ ತೆಂಗಿನ ಇಳುವರಿಯೂ ಅಧಿಕವಾಗಬಲ್ಲದು ಎನ್ನುತ್ತಾರೆ.

— ಆರಾಮ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.