ಉಡುಪಿ ಸುವರ್ಣಗೋಪುರ: ನಾಳೆ ಕಾಮಗಾರಿ ಆರಂಭ


Team Udayavani, Nov 27, 2018, 10:14 AM IST

matt.jpg

ಉಡುಪಿ: ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಚಿನ್ನದ ತಗಡು ಹೊದೆಸುವ ಕಾರ್ಯಕ್ಕೆ ನ. 28ರಂದು ಬೆಳಗ್ಗೆ 7.30ಕ್ಕೆ ಚಾಲನೆ ನೀಡಲಾಗುವುದು. ಈ ಸಂದರ್ಭ ಉಡುಪಿಯ ಮಠಾಧೀಶರು ಮತ್ತು ಇತರ ಮಠಾಧೀಶರು, ಸಚಿವೆ ಜಯಮಾಲಾ, ಶಾಸಕ ಕೆ. ರಘುಪತಿ ಭಟ್‌, ಕರ್ನಾಟಕ ಜುವೆಲರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಟಿ.ಎ. ಶರವಣ, ಹೊಸಪೇಟೆಯ ಕೈಗಾರಿಕೋದ್ಯಮಿ ಪತ್ತಿಕೊಂಡ ಪ್ರಭಾಕರ್‌, ರಾಜ್ಯ ಜುವೆಲರ್ಸ್‌ ಅಸೋಸಿಯೇಶನ್‌ ಫೆಡರೇಶನ್‌ ಚೇರ್‌ಮನ್‌ ಜಯ ಆಚಾರ್ಯ ಮೊದಲಾದವರು ಉಪಸ್ಥಿತರಿರುವರು.

ವಿಶ್ವಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಕೈಗೊಂಡಿರುವ ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಪ್ರಮುಖ ಯೋಜನೆ ಶ್ರೀಕೃಷ್ಣ ದೇವರಿಗೆ ಸುವರ್ಣ ಗೋಪುರದ ಸಮರ್ಪಣೆಯಾಗಿದೆ. 

ಈ ಮಹತ್ತರ ಯೋಜನೆಗೆ ಒಟ್ಟು 100 ಕೆ.ಜಿ ಬಂಗಾರದ ಅಗತ್ಯವಿದೆ. ಈಗಾಗಲೇ ಭಕ್ತರಿಂದ ಸುಮಾರು 60 ಕೆ.ಜಿ.ಗಿಂತ ಹೆಚ್ಚು ಬಂಗಾರ ಸಂಗ್ರಹವಾಗಿದೆ. 11 ಕೋ.ರೂ. ನಗದಿನ ರೂಪದಲ್ಲಿ, 25 ಕೆ.ಜಿ. ಚಿನ್ನದ ರೂಪದಲ್ಲಿ ಬಂದಿದೆ. ಇನ್ನು ಸುಮಾರು 40 ಕೆ.ಜಿ. ಚಿನ್ನದ ಅಗತ್ಯವಿದ್ದು ಭಕ್ತರು ಯಥಾಶಕ್ತಿ ನೀಡಿದ ಕಾಣಿಕೆಯನ್ನು ಯೋಜನೆಗಾಗಿ ಬಳಸಲಾಗುತ್ತಿದೆ. ಸುಮಾರು 32 ಕೋ.ರೂ.ಗಳ ಯೋಜನೆ ಇದಾಗಿದ್ದು ಶ್ರೀಕೃಷ್ಣ ಮಠದ ಗರ್ಭಗುಡಿಯ ಒಟ್ಟು ವಿಸ್ತೀರ್ಣ ಸುಮಾರು 2,500 ಚದರಡಿ ಮೇಲ್ಛಾವಣಿಗೆ ಚಿನ್ನದ ತಗಡನ್ನು ಮಡಾಯಿಸಲಾಗುವುದು. ಈ ಹಿಂದೆ ತಾಮ್ರದ ತಗಡಿನ ಮೇಲೆ ಚಿನ್ನದ ತಗಡನ್ನು ಹೊದೆಸುವ ಯೋಜನೆಯಾಗಿತ್ತಾದರೂ ಪ್ರಸ್ತುತ ಬೆಳ್ಳಿಯ ತಗಡಿನ ಮೇಲೆ ಚಿನ್ನದ ತಗಡನ್ನು ಮಡಾಯಿಸಲು ಉದ್ದೇಶಿಸಲಾಗಿದೆ. ಬೆಳ್ಳಿಯ ತಗಡಿಗೆ 500 ಕೆ.ಜಿ. ಬೆಳ್ಳಿಯ ಅಗತ್ಯವಿದೆ. ಗರಿಷ್ಠ ಪ್ರಮಾಣದ ಚಿನ್ನದ ಬಳಕೆಯಾಗಬೇಕೆಂಬ ಉದ್ದೇಶದಿಂದ ಈ ಮಾರ್ಪಾಟನ್ನು ಮಾಡಲಾಗಿದೆ ಎಂದು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಸುದ್ದಿಗಾರರಿಗೆ ತಿಳಿಸಿದರು. ಚಿನ್ನದ ಗೋಪುರಕ್ಕೆ ಹೆಚ್ಚಿನ ಆಕರ್ಷಣೆಯ ಉದ್ದೇಶದಿಂದ ಕರಾವಳಿಯ ಸಂಸ್ಕೃತಿ ಎನಿಸಿದ ಹಂಚಿನ ಆಕೃತಿಯನ್ನು ರೂಪಿಸಲಾಗುವುದು ಎಂದರು.

ಗೋಪುರದ ಮೇಲೆ ಸರ್ವಮೂಲಗ್ರಂಥ
ಈ ಸುವರ್ಣ ಗೋಪುರದ ತಗಡಿನಲ್ಲಿ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ “ಸರ್ವಮೂಲ ಗ್ರಂಥಗಳನ್ನು’ ಬರೆಸಲಾಗುವುದು. ಎಲ್ಲ ಸಂಕಷ್ಟಗಳನ್ನು ಪರಿಹರಿಸಿ ಐಹಿಕ ಮತ್ತು ಪಾರತ್ರಿಕ ಆನಂದವನ್ನು ಕೊಡುವ ಈ ಗ್ರಂಥಗಳನ್ನು ಲಿಪಿಬದ್ಧಗೊಳಿಸಿರುವ ಕೀರ್ತಿ ಶ್ರೀ ಪಲಿಮಾರು ಮಠದ ಮೂಲ ಯತಿಗಳಾದ ಶ್ರೀ ಹೃಷೀಕೇಶ ತೀರ್ಥರಿಗೆ ಸಲ್ಲುತ್ತದೆ. ಈ ಮೂಲಕೃತಿಯು ಇಂದಿಗೂ ಮಠದಲ್ಲಿ ಪೂಜೆಗೊಳ್ಳುತ್ತಿದೆ. ಇದು ಶ್ರೀಮನ್ಮಧ್ವಾಚಾರ್ಯರ ಪ್ರತಿರೂಪ ಎನಿಸಿದೆ. ಇಂತಹ ಮಹತ್ವದ ಕೃತಿಯನ್ನು ಶ್ರೀಕೃಷ್ಣ ಮಠದ ಚಿನ್ನದ ಗೋಪುರದಲ್ಲಿ ಬರೆಸುವುದು ಐತಿಹಾಸಿಕ ಕಾರ್ಯವೆನಿಸಿದೆ.

ಮೇಲ್ಛಾವಣಿಯಲ್ಲಿ ಹಂಸಮಂತ್ರ
ಶ್ರೀಕೃಷ್ಣ-ಮುಖ್ಯಪ್ರಾಣರ ನಿರಂತರ ಪರಮೋಪಕಾರದ ಸ್ಮರಣೆ ಹಾಗೂ ಕೃತಜ್ಞತಾರ್ಪಣೆಗೆ ಸಂಕೇತವಾಗಿ 21,600 ಬಾರಿ ಹಂಸಮಂತ್ರವನ್ನು ಗರ್ಭಗುಡಿಯ ಮೇಲ್ಛಾವಣಿಯಲ್ಲಿ ದಾಖಲಿಸಲಾಗುವುದು. ಗರ್ಭಗುಡಿಯೊಳಗೆ ಕಂಗೊಳಿಸುವ ಶ್ರೀಕೃಷ್ಣ ಪರಬ್ರಹ್ಮನೇ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿರುವ ಸ್ವಾಮಿ. ಅವನ ಜತೆಯಲ್ಲಿ ಸಮಸ್ತ ಜೀವರ ನಿಯಾಮಕರಾಗಿರುವ ಶ್ರೀಮುಖ್ಯಪ್ರಾಣ ದೇವರು 21,600 ಬಾರಿ ಹಂಸಮಂತ್ರವನ್ನು ಜಪಿಸುತ್ತಾ ನೆಲೆಸಿರುವರು. ಈ ಶ್ವಾಸೋಚ್ಛಾಸವು ದಿನಕ್ಕೆ 21,600 ಬಾರಿ ನಡೆಯುವುದು ವೈಜ್ಞಾನಿಕ ಸತ್ಯ. ಈ ಎಲ್ಲ ಅನುಸಂಧಾನದಿಂದ ಶ್ರೀಕೃಷ್ಣನ ಗರ್ಭಗುಡಿಗೆ ಪ್ರದಕ್ಷಿಣೆ ಬರುವ ಭಕ್ತರ ಸಕಲಾನಿಷ್ಟ ನಿವೃತ್ತಿಯೊಂದಿಗೆ ಸಕಲಾಭೀಷ್ಟ ಪ್ರಾಪ್ತಿಯಾಗುವುದು ಎಂಬ ನಂಬಿಕೆ ಇದೆ. ದೇಶದ ಒಳಿತಿಗಾಗಿ ದೇಗುಲವಿದ್ದರೆ, ದೇಗುಲದ ಒಳಿತಿಗಾಗಿ ಗೋಪುರವಿರುತ್ತದೆ. ಇದು ಆಡಂಬರದ ವಸ್ತುವಾಗಿರದೆ ಆಧ್ಯಾತ್ಮಿಕ ವಿಚಾರಧಾರೆಯ ಹಿನ್ನೆಲೆ ಇದೆ ಎಂದು ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶಾಚಾರ್ಯ ಹೇಳಿದರು. 

ಕನಕ ಜಯಂತಿಯಂದು ಕನಕನ ಸ್ಮರಣೆ
ಕನಕನಿಗೆ ಒಡೆಯ ಕನಕದಾಸರು. ಕನಕವೇ ಅವರ ದಾಸರಾದ ನೆಲೆಯಲ್ಲಿ ಕನಕದಾಸರೆನಿಸಿದರು. ಈ ದಿನದಂದು ಸುವರ್ಣಗೋಪುರದ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಶ್ರೀ ವಿದ್ಯಾಧೀಶತೀರ್ಥರು ತಿಳಿಸಿದರು. 

ಕಾಮಗಾರಿ ವೀಕ್ಷಣೆಗೆ ಅವಕಾಶ
ಸುವರ್ಣ ಗೋಪುರದ ಕಾಮಗಾರಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಶ್ರೀಕೃಷ್ಣ ಮಠದ ಗೋಶಾಲೆಯ ಮುಂದೆ ಯಾಗಶಾಲೆ ಸಮೀಪ ನಡೆಸಲಾಗುವುದು. ಬಂಗಾರದ ಕೆಲಸದಲ್ಲಿ ನಿಷ್ಣಾತರಾದ ದೈವಜ್ಞ ಸಮಾಜ ಹಾಗೂ ವಿಶ್ವಕರ್ಮ ಸಮಾಜದ ಕುಶಲಕರ್ಮಿಗಳ ಸಹಕಾರದೊಂದಿಗೆ ಸುವರ್ಣ ಗೋಪುರದ ನಿರ್ಮಾಣದ ಯೋಜನೆಯನ್ನು ನಡೆಸಲಾಗುವುದು. ಇದರಲ್ಲಿ ಮರದ ಕೆಲಸ, ಬೆಳ್ಳಿ ಹಾಗೂ ಬಂಗಾರದ ಕೆಲಸವೂ ಇರುವುದರಿಂದ ಈ ಎರಡೂ ಸಮಾಜದ ಕುಶಲಕರ್ಮಿಗಳೂ ಕಾರ್ಯನಿರ್ವಹಿಸಲಿದ್ದಾರೆ. ಪ್ರಗತಿ ಅಸೋಸಿಯೇಟ್ಸ್‌ನ ಯು. ವೆಂಕಟೇಶ ಶೇಟ್‌ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಟಾಪ್ ನ್ಯೂಸ್

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.