ರಸ್ತೆ ಹೊಂಡಗಳಲ್ಲಿ ವಾಹನ ಸವಾರರ ಪರದಾಟ
Team Udayavani, Sep 6, 2018, 6:00 AM IST
ಕಟಪಾಡಿ: ಉದ್ಯಾವರ ಗ್ರಾ. ಪಂ. ಮತ್ತು ಕೋಟೆ ಗ್ರಾ.ಪಂ.ವ್ಯಾಪ್ತಿಯ ಉದ್ಯಾವರ ಪಡುಕೆರೆ, ಮಟ್ಟು, ಕೈಪುಂಜಾಲು ಸಂಪರ್ಕದ ಸಮುದ್ರ ಬದಿಯ ರಸ್ತೆಯಲ್ಲಿ ಹೊಂಡಗಳು ತುಂಬಿದ್ದು ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆ ಮಲ್ಪೆಗೆ ಸಂಪರ್ಕ ಕಲ್ಪಿಸುವುದರಿಂದ ಈ ಭಾಗದಲ್ಲಿ ದಿನವಹಿ ಬಸ್ಗಳೊಂದಿಗೆ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರವಾಸಿಗರೂ ಇದನ್ನೇ ಬಳಸುತ್ತಾರೆ. ಆದರೆ ರಸ್ತೆ ಹದಗೆಟ್ಟಿರು ವುದು ಈ ಭಾಗದವರಿಗೆ ಇನ್ನಿಲ್ಲದ ಸಮಸ್ಯೆಯಾಗಿದೆ.
12 ವರ್ಷದ ಹಿಂದೆ ಡಾಮರು
ಸುಮಾರು 12 ವರ್ಷಗಳ ಹಿಂದೆ ಈ ರಸ್ತೆ ಡಾಮರು ಕಂಡಿತ್ತು. ಬಳಿಕ ಡಾಮರು ಕಂಡಿಲ್ಲ. ಅಧಿಕ ಭಾರದ ಸಮುದ್ರದ ತಡೆಗೋಡೆ ಕಲ್ಲು ಸಾಗಿಸುವ ವಾಹನಗಳು ಸಂಚರಿಸಿ ಸುಮಾರು 8 ಕಿ.ಮೀ.ನಷ್ಟು ಉದ್ದಕ್ಕೆ ರಸ್ತೆ ಹಾಳಾಗಿದೆ.
ಬಾಡಿಗೆ ದರಕ್ಕಿಂತ ದುಪ್ಪಟ್ಟು ದರ
ಈ ರಸ್ತೆಯಲ್ಲಿ ರಿಕ್ಷಾ ಓಡಿಸಿದರೆ ಹಾನಿ ಗೀಡಾಗುತ್ತವೆ. ಬಾಡಿಗೆ ದರಕ್ಕಿಂತ ದುಪ್ಪಟ್ಟು ದರವನ್ನು ರಿಕ್ಷಾ ರಿಪೇರಿಗೆ ವ್ಯಯಿಸಬೇಕಾಗಿದೆ.
– ನವೀನ್ಭಾಸ್ಕರ್ ರಿಕ್ಷಾ ಚಾಲಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ