ಹೆಜಮಾಡಿ, ಪಡುಬಿದ್ರಿಯಲ್ಲಿ ಮೀನು ಸುಗ್ಗಿ !
Team Udayavani, Sep 6, 2018, 9:57 AM IST
ಪಡುಬಿದ್ರಿ: ಹೆಜಮಾಡಿ, ಪಡುಬಿದ್ರಿ ಪರಿಸರದಲ್ಲಿ ಬುಧವಾರ ಮೀನುಗಳ ಸುಗ್ಗಿ. ಮೀನುಗಾರರು ಕಡಲಾಳದಿಂದ ಮೀನುಗಳನ್ನು ಹಿಡಿದು ತರುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಇದು ತದ್ವಿರುದ್ಧವಾಗಿದೆ. ಕಳೆದೆರಡು ದಿನಗಳಿಂದ ಮೀನುಗಳೇ ಗುಂಪು ಗುಂಪಾಗಿ ತೀರಕ್ಕೆ ಬಂದು ಮೀನುಗಾರರ ಬಲೆಗೆ ಬೀಳುತ್ತಿವೆ. ಬುಧವಾರವಂತೂ ಅವುಗಳ ಪ್ರಮಾಣ ದ್ವಿಗುಣವಾಗಿದೆ.
ಹೆಜಮಾಡಿಯಿಂದ ಸಸಿಹಿತ್ಲು ಕದಿಕೆ ವರೆಗೂ ಬುಧವಾರ ಸಿಲ್ವರ್ಫಿಶ್ ಬೇಟೆ ಹೇರಳವಾಗಿದೆ. ಪರಿಸರದ
ಮನೆಗಳಲ್ಲಿ 50 – 60 ಕೆಜಿ ಮೀನು ಸಂಗ್ರಹವಿದೆ. ಸ್ಥಳೀಯರಿಗೂ ಅಪಾರ ಪ್ರಮಾಣದಲ್ಲಿ ಮೀನು ಲಭ್ಯವಾಗಿದ್ದು, ಮಾರಾಟ ಮಾಡಿ 5,000 – 10,000 ರೂ. ವರೆಗೆ ಸಂಪಾದಿಸಿದ್ದಾರೆ. ಬೇಸಗೆಯಲ್ಲಿ 100 ರೂ.ಗೆ 30 ಬೊಳಿಂಜೀರ್ ಲಭ್ಯವಾಗುತ್ತಿದ್ದರೆ ಇಂದು ಕೆಜಿಗೆ 10 ರೂ.ಗಳಿಂದ 20 ರೂ.ಗಳಲ್ಲಿ ವಿಕ್ರಯವಾಗಿದೆ. ಕೆಲವು ಫಂಡ್ಗಳ ಸದಸ್ಯರಿಗೆ 2 ಲಕ್ಷದಿಂದ 10 ಲಕ್ಷ ರೂ. ವರೆಗೂ ಆದಾಯ ಲಭಿಸಿದೆ.
ಎಲ್ಲೆಲ್ಲೂ ಮೀನು !
ಹೆಜಮಾಡಿ ಪರಿಸರದಲ್ಲಿ ಜನರು ಕೊಡಪಾನ, ಬಕೆಟ್, ಪ್ಲಾಸ್ಟಿಕ್ ಚೀಲ, ಗೋಣಿಗಳಲ್ಲಿ ಮೀನುಗಳನ್ನು ಶೇಖರಿಸಿ ಮನೆಗಳಿಗೆ ಒಯ್ದಿದ್ದಾರೆ. ಇದರಿಂದಾಗಿ ಹೆಜಮಾಡಿ ಪೇಟೆಯಲ್ಲಿ ಪ್ಲಾಸ್ಟಿಕ್ ಚೀಲಗಳಿಗೂ ಬೇಡಿಕೆ ಹೆಚ್ಚಾಯಿತು. ಮಂಜುಗಡ್ಡೆ ಸ್ಥಾವರಗಳಲ್ಲಿ ಮಂಜುಗಡ್ಡೆಗೂ ಬೇಡಿಕೆ ಬಂತು.
ನಿಯಂತ್ರಣಕ್ಕೆ ಪೊಲೀಸರು
ಹೆಜಮಾಡಿ ಕಡಲ ತೀರಕ್ಕೆ ಅಪಾರ ಸಂಖ್ಯೆಯ ವಾಹನಗಳು ಬಂದುದರಿಂದ ಅಮಾವಾಸೆ ಕರಿಯ ಪ್ರದೇಶದಲ್ಲಿ ಸಂಚಾರದೊತ್ತಡವೂ ಹೆಚ್ಚಾಯಿತು. ಕರಾವಳಿ ಕಾವಲು ಪಡೆ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ತೊಡಗಿದ್ದರು.
ತೀರಕ್ಕೆ ಬರಲು ಕಾರಣ?
ಕೊಬ್ಬಿನ ಅಂಶವಿರುವ ಈ ಮೀನುಗಳು ಮರಿ ಇಡುವ ಕಾಲ ಇದಾಗಿದ್ದು ಆಳಸಮುದ್ರ ಮೀನುಗಾರಿಕಾ ದೋಣಿಗಳ ಶಬ್ದ ಮಾಲಿನ್ಯಕ್ಕೆ ಹೆದರಿ ತೀರದತ್ತ ಇವು ಧಾವಿಸಿವೆ ಎನ್ನಲಾಗುತ್ತಿದೆ. ಪರಿಸರದಲ್ಲಿ ಇಂತಹ ಘಟನೆ ಇದೇ ಪ್ರಥಮ ಎಂದು ಮೊಗವೀರ ಮುಂದಾಳು, ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ ಹೇಳಿದ್ದಾರೆ.
ದಾಖಲೆ ಮೀನುಗಳ ಬೇಟೆ
ಬುಧವಾರ ಹೆಜಮಾಡಿ, ಪಡುಬಿದ್ರಿಗಳ ಕೈರಂಪಣಿ ಮೀನುಗಾರರ ಬಲೆಗೆ ಸಿಲ್ವರ್ ಫಿಶ್ಗಳು ಮಾತ್ರ ಬಿದ್ದಿರುವುದೂ ದಾಖಲೆಯೇ ಆಗಿದೆ. ಹೆಜಮಾಡಿಯ ಕೈರಂಪಣಿ ಸದಸ್ಯರಿಗೆ ಬಲೆಯನ್ನು ಮೇಲಕ್ಕೆ ಎಳೆಯಲಾಗದೆ ಸ್ಥಳೀಯರೂ ಕೈಜೋಡಿಸಬೇಕಾಗಿ ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ