ನಾಲ್ಕು ವರ್ಷಗಳ ಬಳಿಕ ಕುದಿ ಕಂಬಳ


Team Udayavani, Sep 7, 2018, 10:22 AM IST

kambala.jpg

ಕಾರ್ಕಳ: ಕಂಬಳಕ್ಕೆ ಕೋಣಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಮಿಯ್ನಾರು ಕಂಬಳ ಕ್ರೀಡಾಂಗಣದಲ್ಲಿ ಕುದಿ ಕಂಬಳ (ಕೋಣಗಳಿಗೆ ಓಟದ ಅಭ್ಯಾಸ) ಪ್ರಾರಂಭಗೊಂಡಿದೆ. ನಾಲ್ಕು ವರ್ಷಗಳ ಅನಂತರ ಇದು ನಡೆಯುತ್ತಿದೆ.
2014ರಿಂದ ಕಂಬಳಕ್ಕೆ ಎದುರಾಗಿದ್ದ ಕಾನೂನಿನ ಅಡೆತಡೆಯಿಂದಾಗಿ ಕರಾವಳಿಯ ಕಂಬಳ ನೀರಸವಾಗಿ ನಡೆದಿತ್ತು. ಕುದಿ ಕಂಬಳ ಕೂಡ ಹುರುಪು ಕಳೆದುಕೊಂಡಿತ್ತು. ಈ ಬಾರಿ ಕಂಬಳಪ್ರಿಯರು ಹೊಸ ಹುರುಪಿನಲ್ಲಿ ಕಂಬಳ ಗದ್ದೆಗೆ ಇಳಿಯಲಿದ್ದಾರೆ.  

ಸರಕಾರದ ಸುತ್ತೋಲೆ ಪ್ರಕಾರ ಕಂಬಳ
2018-19ನೇ ಸಾಲಿನ ಕಂಬಳಕ್ಕೆ ರಾಜ್ಯ ಸರಕಾರ ನಿರ್ದಿಷ್ಟ 12 ನಿಯಮಗಳನ್ನು ರೂಪಿಸಿ ಕಳೆದ 
ಮಾರ್ಚ್‌ನಲ್ಲಿ ಸುತ್ತೋಲೆ ಹೊರಡಿಸಿದೆ. ಆ ಪ್ರಕಾರ ಕಂಬಳ ನಡೆಯಲಿದ್ದು, ಕುದಿ ಕಂಬಳವೂ ಸುತ್ತೋಲೆಯ ಪ್ರಕಾರ ನಡೆಯುತ್ತಿದೆ. 

ತರಬೇತಿ ಶಿಬಿರದ ಚಿಂತನೆ
ಕಾನೂನಿನ ತೊಡಕಿನಿಂದಾಗಿ ನಾಲ್ಕು ವರ್ಷಗಳಿಂದ ತರಬೇತಿ ಶಿಬಿರ ನಡೆದಿಲ್ಲ. ಈ ಬಾರಿ 10-15 ದಿನಗಳ ತರಬೇತಿ ಶಿಬಿರ ನಡೆಸಲು ಅಕಾಡೆಮಿ ಚಿಂತನೆ ನಡೆಸಿದೆ. ಅಕ್ಟೋಬರ್ ನಲ್ಲಿ ತರಬೇತಿ ನಡೆಯಲಿದೆ. ಕೋಣಗಳ ಓಟ, ಕಂಬಳ ನಿರ್ವಹಣೆ, ಕೋಣಗಳ ಸಾಕಾಣಿಕೆ, ಓಟಗಾರರಿಗೆ ತರಬೇತಿ ನೀಡಲಾಗುತ್ತದೆ.

ಮಿಯ್ನಾರಿನಲ್ಲಿ  ಸುಸಜ್ಜಿತ ವ್ಯವಸ್ಥೆ
ಮಿಯ್ನಾರು ಕಂಬಳ ಗದ್ದೆಯಲ್ಲಿ ಮಳೆಗಾಲದಲ್ಲಿಯೂ ತರಬೇತಿಗೆ ಬೇಕಾದ ಪೂರ್ಣ ಸೌಕರ್ಯವಿದೆ. ಹೀಗಾಗಿ ಅವಿಭಜಿತ ದ.ಕ. ಜಿಲ್ಲೆಯ ಕೋಣಗಳನ್ನು ಕುದಿ ಕಂಬಳಕ್ಕಾಗಿ ಮಿಯ್ನಾರಿಗೆ ತರಲಾಗುತ್ತಿದೆ. ಕಂಬಳ ಪ್ರಿಯರು ಸಾಕಷ್ಟು ಸಂಖ್ಯೆಯಲ್ಲಿ ಕುದಿ ಕಂಬಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.

ಕೋಣಗಳಿಗೆ ಅಭ್ಯಾಸ
ಕೋಣಗಳಿಗೆ ಅಭ್ಯಾಸ ಮಾಡುವ ನಿಟ್ಟಿನಲ್ಲಿ ಕುದಿ ಕಂಬಳ ನಡೆಸಲಾಗುತ್ತಿದೆ. ಆಗಸ್ಟ್‌ 15ರ (ತುಳು ತಿಂಗಳ ಸೋಣ) ಅನಂತರ ಪ್ರಾರಂಭವಾಗಿದೆ. ಉತ್ತಮವಾಗಿ ಓಡುವ ಕೋಣಗಳಿಗೆ ಅದಕ್ಕೆ ಹೊಂದಿಕೊಳ್ಳುವ ಜತೆಗಳ ಆಯ್ಕೆಯೂ ಮಾಡಲಾಗುತ್ತದೆ. 
ಸೀತಾರಾಮ ಶೆಟ್ಟಿ  ಬಂಟ್ವಾಳ, ಕೋಣಗಳ ಮಾಲಕ

 ತರಬೇತಿ ಶಿಬಿರ 
ಸದ್ಯ ಕೋಣಗಳಿಗೆ ಅಭ್ಯಾಸಕ್ಕಾಗಿ ಮಿಯ್ನಾರಿನಲ್ಲಿ ಕುದಿಕಂಬಳ ಕಂಬಳ ನಡೆಸಲಾಗುತ್ತಿದೆ. ಕಂಬಳ ಸಂರಕ್ಷಣೆಯ ನಿಟ್ಟಿನಲ್ಲಿ ಅಕಾಡೆಮಿ ಯಿಂದ ಈ ಬಾರಿ ತರಬೇತಿ ಶಿಬಿರ ನಡೆಸಲು ಚಿಂತನೆ ನಡೆಸಲಾಗಿದೆ. ತರಬೇತಿ ಪಡೆದ ಹಲವರು ಇಂದು ಯಶಸ್ವಿ ಓಟಗಾರರಾಗಿದ್ದಾರೆ.
ಗುಣಪಾಲ ಕಡಂಬ, ಕಂಬಳ ತಜ್ಞರು.

ಸುತ್ತೋಲೆ ಪ್ರಕಾರ ಕಂಬಳ
2018-19ನೇ ಸಾಲಿನಲ್ಲಿ ಕಂಬಳ ನಡೆಸಲು ಸಮಸ್ಯೆ ಎದು ರಾಗದು. ಹೀಗಾಗಿ ಕುದಿ ಕಂಬಳ ನಡೆಸಲಾಗುತ್ತಿದೆ. ಸರಕಾರ ಹೊರಡಿಸಿದ ಸುತ್ತೋಲೆ ಪ್ರಕಾರ ಕಂಬಳ ನಡೆಯಲಿದೆ. ಸೆ. 23ರಂದು ಈ ಕುರಿತ ಸಭೆ ನಡೆಯಲಿದೆ.
–  ಪಿ.ಆರ್‌. ಶೆಟ್ಟಿ, ಕಂಬಳ ಸಮಿತಿ ಅಧ್ಯಕ್ಷರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

Udupi; ಮಸ್ಟರಿಂಗ್‌ ಕೇಂದ್ರದಲ್ಲಿ ಸಕಲ ತಯಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.