“ದೃಷ್ಟಿದೋಷ ಸಮಸ್ಯೆಯಿಂದ ಪಾರಾಗಲು ಆಕ್ಯುಪೇಶನಲ್ ತೆರಪಿ ಅಗತ್ಯ’
Team Udayavani, Sep 8, 2018, 7:00 AM IST
ಉಡುಪಿ: ಆಕ್ಯುಪೇಶನಲ್ ತೆರಪಿಯೆನ್ನುವುದು ದೃಷ್ಟಿದೋಷ ಸಮಸ್ಯೆಯಿಂದ ಪಾರಾಗಲು ಅಗತ್ಯ ವಾಗಿದೆ. ಬೇರೆಯವರಿಗೆ ತೊಂದರೆ ನೀಡದೆ ಸ್ವಂತ್ರವಾಗಿ ಬದುಕಬೇಕಾದರೆ ಈ ತೆರಪಿಯ ಆವಶ್ಯಕತೆ ಇದೆ ಎಂದು ಕೆಎಂಸಿ ಮಣಿಪಾಲದ ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ| ಸುಲತಾ ಭಂಡಾರಿ ಹೇಳಿದರು.
ಮಾಹೆಯ ಆಕ್ಯುಪೇಶನಲ್ ತೆರಪಿ ವಿಭಾಗ, ಎಸ್ಓಎಎಚ್ಎಸ್ ವಿಭಾಗ ಆಯೋಜಿಸಿದ್ದ ದೃಷ್ಟಿದೋಷ ನಿವಾರಣೆಗೆ ಆಕ್ಯುಪೇಶನಲ್ ತೆರಪಿ ಕುರಿತ ಎರಡು ದಿನಗಳ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ಈ ಸಮಸ್ಯೆ ನಿವಾರಣೆಗೆ ನೇತ್ರತಜ್ಞರ, ಮತ್ತು ತಂತ್ರಜ್ಞರ ಕಾರ್ಯಗಳ ಕುರಿತು ವಿವರಿಸಿದರು.
ಡಾ| ಅರುಣ್ ಜಿ.ಮಯ್ಯಸ್ವಾಗತಿಸಿ, ಇದು ವಯಸ್ಸಾದಂತೆ ಎಲ್ಲರಲ್ಲಿಯೂ ಕಾಣುವ ಸಾಮಾನ್ಯ ಸಮಸ್ಯೆಗಳೇ, ಆದರೆ ಅನಾರೋಗ್ಯಕಾರಿ ಜೀವನ ಶೈಲಿಯಿಂದ ಇದರ ಸಮಸ್ಯೆಗಳು ಇನ್ನೂ ಹೆಚ್ಚು ಕಾಡುತ್ತದೆ ಎಂದರು.
ಬೋಸ್ಟನ್ ಯುಎಸ್ಎಯ ಎಮ್ಜಿಎಚ್ ಇನ್ಸಿಟಿಟ್ಯೂಟ್ನ ಸಹಾಯಕ ಪ್ರಾಧ್ಯಾಪಕ ಕಿಂಬರ್ಲಿ ಆನ್ ಶಾಸ್ಕೋಯಿಸ್, ಆಕ್ಯೂಪೇಶನಲ್ ತೆರಪಿ ಕುರಿತು ಮತ್ತು ನಿರ್ವಹಿಸುವ ಕುರಿತು ವಿವರಿಸಿದರು.
ಆಕ್ಯುಪೇಶನಲ್ ತೆರಪಿ ವಿಭಾಗ ಮುಖ್ಯಸ್ಥೆ ಡಾ| ಸೆಬಿಸ್ತಿನಾ ಅನಿಟಾ ಡಿ’ಸೋಜಾ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಹಲವು ಆಕ್ಯುಪೇಶನಲ್ ತೆರಪಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು