ಬಾಳಿಗಾ ಜಂಕ್ಷನ್‌: ಅಪಘಾತದ ಅಪಖ್ಯಾತಿಗೆ ಬೇಕು ಮುಕ್ತಿ…


Team Udayavani, Sep 8, 2018, 6:00 AM IST

0509udsb1.jpg

ದಿನೇದಿನೆ ಹೆಚ್ಚುತ್ತಿದ್ದು,ನಾಲ್ಕು ದಿನಗಳ ಹಿಂದೆ ಘಟಿಸಿದ ಮೂರು ಪ್ರತ್ಯೇಕ ಘಟನೆಗಳಲ್ಲಿ ಓರ್ವ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಇಂಥ ಅಪಘಾತಗಳು ಇಲ್ಲಿ ನಿರಂತರವಾಗಿ ನಡೆಯುತ್ತಿವೆ. ಆದರೂ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನ ಉದಯವಾಣಿ ನಡೆಸಿದೆ. ಪತ್ರಿಕೆಯ ವರದಿಗಾರ ಸಂತೋಷ್‌ ಬೊಳ್ಳೆಟ್ಟು ಅವರ ವಿಶ್ಲೇಷಣಾತ್ಮಕ ವರದಿ ಇದು. ಚಿತ್ರಗಳನ್ನು ಒದಗಿಸಿದವರು  ಗಣೇಶ್‌ ಕಲ್ಯಾಣಪುರ.

ನಿಟ್ಟೂರು ಜಂಕ್ಷನ್‌: ರಾಷ್ಟ್ರೀಯ ಹೆದ್ದಾರಿ 66 ಚತುಷ್ಪಥಗೊಂಡ ಬಳಿಕವೂ ಈ ಜಂಕ್ಷನ್‌ ಅಪಾಯಕಾರಿಯಾಗಿಯೇ ಇದೆ. ಈ ಭಾಗದಲ್ಲಿ ಅಂಬಲಪಾಡಿ ಜಂಕ್ಷನ್‌ನ ಅನಂತರ ಹೆಚ್ಚು ಅಪಾಯಕಾರಿ ಎಂದರೆ ಇದೇ. 

ಪೂರ್ವದಲ್ಲಿ ನಿಟ್ಟೂರು ಮತ್ತು ಪಶ್ಚಿಮದಲ್ಲಿ ಕೊಡಂಕೂರಿನ ರಸ್ತೆಗಳಿಂದ ರಾಷ್ಟ್ರೀಯ ಹೆದ್ದಾರಿಗೆ ವಾಹನಗಳು ಪ್ರವೇಶವಾಗುವ ಮತ್ತು ನಿರ್ಗಮಿಸುವ ಸ್ಥಳ ಇದು. 

ಮಂಗಳವಾರದ ಘಟನೆ
ಮಂಗಳವಾರ ಸಂಜೆ ಅಂಬಾಗಿಲು ಕಡೆಯಿಂದ ಹೆದ್ದಾರಿಯಲ್ಲಿ ಬಂದ ಬೈಕ್‌ ಹೆದ್ದಾರಿಯಿಂದ ಬಲಕ್ಕೆ ಕೊಡಂಕೂರಿನತ್ತ ತಿರುಗು ತ್ತಿದ್ದಾಗ ಕರಾವಳಿ ಬೈಪಾಸ್‌ ಕಡೆಯಿಂದ ಹೆದ್ದಾರಿಯಲ್ಲಿ ಬಂದ ಸುಮೋ ವಾಹನ ಢಿಕ್ಕಿ ಹೊಡೆ ಯಿತು. ಸುಮೋ ಭಾರೀ ವೇಗದಲ್ಲಿತ್ತು. ಇದೇ ರೀತಿಯ ಅಪಘಾತಗಳು ಇಲ್ಲಿ ನಿರಂತರ. 

ಇದಕ್ಕೆ ಮುಖ್ಯ ಕಾರಣ ಕರಾವಳಿ ಬೈಪಾಸ್‌ ಕಡೆಯಿಂದ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು. ಅತ್ತಲಿಂದ ನಿಟ್ಟೂರು ಕಡೆಗೆ ಬರುವಾಗ ಕರಾವಳಿ ಬೈಪಾಸ್‌ನಿಂದ ಸ್ವಲ್ಪ ಮುಂದಕ್ಕೆ ಹೆದ್ದಾರಿ ಏರು(ಅಪ್‌) ಇದೆ. ಇದರಿಂದಾಗಿ ಅಲ್ಲಿ ವೇಗ ಪಡೆದುಕೊಳ್ಳುವ ವಾಹನಗಳು ಜಂಕ್ಷನ್‌ ನತ್ತ ಮುನ್ನುಗ್ಗುತ್ತವೆ. ಆಗ ಜಂಕ್ಷನ್‌ನಲ್ಲಿ ಯಾವುದಾದರೂ ವಾಹನ ಸ್ವಲ್ಪವೇ ಅಜಾಗರೂಕತೆಯಿಂದ ಬಂದರೂ  ಈ ಜಂಕ್ಷನ್‌ನಲ್ಲಿ ವಾಹನದಟ್ಟಣೆ ಹೆಚ್ಚಿದೆ. ನಿತ್ಯವೂ ಹಲವು ಅಪಘಾತಗಳು ಘಟಿಸುತ್ತಿವೆ. ಪ್ರತಿ ಅಪಘಾತದಲ್ಲೂ ವ್ಯಕ್ತಿಗಳು ಸಾಯದಿರಬಹುದು, ಆದರೆ ನೂರಾರು ಮಂದಿಗೆ ಗಾಯಗಳಾಗುತ್ತಿವೆ. ದಿನೇದಿನೆ ಜನರ ಆತಂಕ ಹೆಚ್ಚುತ್ತಿದೆ.

ಸುತ್ತಲಿನ ಶಾಲೆಯ ಮಕ್ಕಳೂ ಮನೆಗೆ ಬರುವವರೆಗೂ ಪೋಷಕರಲ್ಲಿ ಅನಗತ್ಯ ಆತಂಕ. ಇಷ್ಟೆಲ್ಲಾ ಸಮಸ್ಯೆ ಇರುವಾಗ ಸ್ಥಳೀಯಾಡಳಿತವಾದ ನಗರಸಭೆ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಒಂದುವೇಳೆ ಅದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕಾದರೆ, ಅದರ ಅಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಬೇಕು. ಕೇಳದಿದ್ದರೆ ಸಂಸದರನ್ನೋ, ಶಾಸಕರ ಬೆಂಬಲ ಪಡೆದು ಬಿಸಿ ಮುಟ್ಟಿಸಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಸ್ಥಳೀಯರು ಇಲ್ಲೇನು ಸಾವಿರಾರು ಸೌಲಭ್ಯ ಕೇಳುತ್ತಿಲ್ಲ. ಒಂದು ಹೈಮಾಸ್ಟ್‌ ದೀಪ, ಒಂದಿಷ್ಟು ನಿಯಮಗಳ ಪಾಲನೆ, ಒಂದೆರಡು ಸಂಚಾರ ಪೊಲೀಸ್‌ ಸಿಬಂದಿಯ ನಿಯೋಜನೆ. ಇದನ್ನು ಹೊರತುಪಡಿಸಿ ಇನ್ನೇನು ಕೇಳುತ್ತಿದ್ದಾರೆ. ಇನ್ನಾದರೂ ನಗರಸಭೆ, ಶಾಸಕರು ಗಮನಹರಿಸಿ ಹೆಚ್ಚು ಪ್ರಾಣಹಾನಿಯಾಗುವುದನ್ನು ತಪ್ಪಿಸಬೇಕು. ಇದು ಪ್ರಾಥಮಿಕ ಕರ್ತವ್ಯವೂ ಸಹ. ಆದಷ್ಟು ಬೇಗ ಜನರ ಈ ಬೇಡಿಕೆಗಳು ಈಡೇರಲಿ.

ಇವಿಷ್ಟು  ಸಮಸ್ಯೆಗಳು ; ಪರಿಹಾರ ಬೇಕು
– ಅಂಬಾಗಿಲು ಕಡೆಯಿಂದ ಕರಾವಳಿ ಬೈಪಾಸ್‌ ಕಡೆಗೆ ಬರುವ ಬಸ್‌ಗಳನ್ನು ರಿಕ್ಷಾ ನಿಲ್ದಾಣ ಬಳಿ ಇರುವ “ಬಸ್‌ ಬೇ’ಗಿಂತ ಹಿಂದೆ ಹೆದ್ದಾರಿಯಲ್ಲೇ ನಿಲ್ಲಿಸಲಾಗುತ್ತದೆ.  ಇದಕ್ಕೆ ಕಡಿವಾಣ ಹಾಕಬೇಕು. 
– ಕೆಎಸ್‌ಆರ್‌ಟಿಸಿ ಡಿಪೋಗೆ ಬರುವ ಬಹುತೇಕ ಎಲ್ಲಾ ಬಸ್‌ಗಳು ಕೂಡ ಇದೇ ಜಂಕ್ಷನ್‌ನಲ್ಲಿ ತಿರುವು ಪಡೆದು ಕರಾವಳಿ ಜಂಕ್ಷನ್‌ ಕಡೆ ತೆರಳುತ್ತವೆ. ದಿನಕ್ಕೆ ನೂರಕ್ಕೂ ಅಧಿಕ ಬಸ್‌ಗಳು ಇಲ್ಲಿ ತಿರುವು ಪಡೆದುಕೊಳ್ಳುತ್ತವೆ. ಇಲ್ಲಿ ವೇಗಮಿತಿ ಫ‌ಲಕ ಬೇಕು.
– ಬಾಳಿಗಾ ಫಿಶ್‌ನೆಟ್‌ ಸೇರಿದಂತೆ ಹಲವು ಸಂಸ್ಥೆಗಳ ನೂರಾರು ಕಾರ್ಮಿಕರು, ಹನುಮಂತ ನಗರ ಶಾಲೆಯ ಮಕ್ಕಳು ಕೂಡ ಈ ಜಂಕ್ಷನ್‌ನ ಬಳಿಯೇ ಹೋಗುತ್ತಾರೆ. ಹಾಗಾಗಿ ವಾಹನ ಸವಾರರಿಗೆ ವೇಗ ಮಿತಿ, ಸಿಗ್ನಲ್‌, ಟ್ರಾಫಿಕ್‌ ಪೊಲೀಸ್‌ ವ್ಯವಸ್ಥೆ ಬೇಕು.
– ಜಂಕ್ಷನ್‌ಗಿಂತ ಸ್ವಲ್ಪ ಹಿಂದೆ ಮತ್ತು ಮುಂದೆ ಎರಡೂ ಬದಿಗಳಲ್ಲಿ ಲಾರಿ ಸೇರಿದಂತೆ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇಲ್ಲಿ ವಾಹನಗಳು ನಿಲ್ಲಿಸದಂತೆ ಆದೇಶಿಸುವುದು ಒಳಿತು.
– ಇಲ್ಲಿ ಸರ್ವೀಸ್‌ ರಸ್ತೆ ಇಲ್ಲ. ಯು ಟರ್ನ್ ಜಾಗದಲ್ಲಿ  ರಸ್ತೆ   ಕಿರಿದಾಗಿದೆ. 
– ರಾತ್ರಿ ಇಲ್ಲಿ ಕತ್ತಲು. ಹಾಗಾಗಿ ರಾತ್ರಿ ಹೊತ್ತು ಅಪಘಾತಗಳು ಹೆಚ್ಚಾಗಲು ಕಾರಣ. ಇಲ್ಲಿ ಹೈಮಾಸ್ಟ್‌ ದೀಪದ ಅಗತ್ಯವಿದೆ.
– ಉತ್ತರದಲ್ಲಿ ಅಂಬಾಗಿಲು, ದಕ್ಷಿಣದಲ್ಲಿ ಕರಾವಳಿ ಜಂಕ್ಷನ್‌ನಲ್ಲಿ ಮಾತ್ರ ತಿರುವು- ಜಂಕ್ಷನ್‌ ಇದೆ. ಹಾಗಾಗಿ ಈ ಜಂಕ್ಷನ್‌ಗಳ ನಡುವಿನ ಹೆದ್ದಾರಿಯಲ್ಲಿ ಕೆಲವರು ವಿರುದ್ಧ ದಿಕ್ಕಿನಿಂದ ವಾಹನ ಚಲಾಯಿಸಿಕೊಂಡು ಬರುತ್ತಾರೆ. ಅದನ್ನು ತಡೆಯಬೇಕು.

ರಿಫ್ಲೆಕ್ಟರ್‌, ಸಿಬಂದಿಗೆ ಕ್ರಮ
ಬ್ಯಾರಿಕೇಡ್‌ಗೆ ರಿಫ್ಲೆಕ್ಟರ್‌ನ್ನು ಬುಧವಾರದಿಂದ ಅಂಟಿಸಲಿದ್ದೇವೆ. ಇಲ್ಲಿ ಖಾಯಂ ಪೊಲೀಸ್‌ ಸಿಬಂದಿಯನ್ನು ನಿಯೋಜಿಸುವ ಬಗ್ಗೆಯೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುತ್ತೇವೆ.
– ಉಪನಿರೀಕ್ಷಕರು,
ಸಂಚಾರಿ ಪೊಲೀಸ್‌ ಠಾಣೆ, ಉಡುಪಿ

ಬ್ಯಾರಿಕೇಡ್‌  ಕಾಣುವುದಿಲ್ಲ
ಬ್ಯಾರಿಕೇಡ್‌ಗಳು  ಹಿಂದೆಯೂ ಇತ್ತು. ಎಷ್ಟೋ ಮಂದಿ ಬ್ಯಾರಿಕೇಡ್‌ಗೆ ಬಂದು ಢಿಕ್ಕಿ ಹೊಡೆಯುತ್ತಾರೆ. ಅವುಗಳಲ್ಲಿ  ರಿಫ್ಲೆಕ್ಟರ್‌ಗಳಿಲ್ಲ. ಜಂಕ್ಷನ್‌ನಲ್ಲಿ ಲೈಟ್‌, ಸರ್ವೀಸ್‌ ರಸ್ತೆ ಇಲ್ಲ. ಬಸ್‌ಗಳನ್ನೂ ಹೆದ್ದಾರಿಯಲ್ಲೇ ನಿಲ್ಲಿಸುತ್ತಾರೆ. ಬ್ಯಾರಿಕೇಡ್‌ಗಿಂತ ಹಿಂದೆ ಝೀಬ್ರಾ ಮಾರ್ಕ್‌  ಹಾಕಿ ಚಾಲಕರ ಗಮನ ಸೆಳೆಯುವುದು ಅಗತ್ಯ.
– ಮಹೇಶ್‌, ಪ್ರಶಾಂತ್‌
ಸ್ಥಳೀಯ ಆಟೋ ಚಾಲಕರು

ಹೈಮಾಸ್ಟ್‌ ದೀಪಕ್ಕಾಗಿ  750 ಮಂದಿ ಸಹಿ!
ಇಲ್ಲಿ ಒಂದು ಹೈಮಾಸ್ಟ್‌ ದೀಪ ಅಳವಡಿಸಬೇಕು ಎಂದು ಇಲ್ಲಿನ 750 ಮಂದಿಯಿಂದ ಸಹಿ 
ಪಡೆದು ಅದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನಗರಸಭೆ ಹಾಗೂ ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ವರ್ಷಗಳೇ ಕಳೆದವು. ಇಂದಿಗೂ ಲೈಟ್‌ ಬಂದಿಲ್ಲ.
– ಸುಜಯ ಪೂಜಾರಿ, ವಿಜೇಶ್‌ ಸ್ಥಳೀಯರು

ಪೊಲೀಸ್‌ ಸಿಬಂದಿ  ಖಾಯಂ ಇರಲಿ
ಇಲ್ಲಿ ಅಪಘಾತ ನಡೆದ ಅನಂತರ   ಪೊಲೀಸರು ಬಂದು ಹೋಗುತ್ತಾರೆ. ಅನಂತರ ಇರುವುದಿಲ್ಲ. ಪೊಲೀಸರಿದ್ದರೆ ಸ್ವಲ್ಪವಾದರೂ ಅಪಘಾತ ಕಡಿಮೆಯಾಗಬಹುದು. ಅಂಬಾಗಿಲು ಕಡೆಯಿಂದ ಬಂದು ಕೊಡಂಕೂರಿಗೆ ತಿರುವು ಪಡೆದುಕೊಳ್ಳುವಾಗಲೇ ಹೆಚ್ಚು ಅಪಘಾತಗಳು ನಡೆಯುತ್ತಿವೆ.
ಸುರೇಂದ್ರ, ವೀಣಾ
ಸ್ಥಳೀಯ ಅಂಗಡಿಯವರು

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.