ಕಾಪು ಮೀನು ಮಾರುಕಟ್ಟೆ ಬಂದ್
Team Udayavani, Sep 9, 2018, 6:00 AM IST
ಕಾಪು: ಬೆಳಪುವಿನಲ್ಲಿ ತೆರೆದಿರುವ ಮೀನು ಮಾರಾಟದ ಅಂಗಡಿ ವಿರುದ್ಧ ಕಾಪು ಮಹಿಳಾ ಮೀನು ಮಾರಾಟಗಾರರು ಮಾರುಕಟ್ಟೆ ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.
ಕಾಪು ಮೀನು ಮಾರುಕಟ್ಟೆಯಲ್ಲಿ ಸುಮಾರು 70 ಮಂದಿ ಮಹಿಳಾ ಮೀನುಗಾರರಿದ್ದಾರೆ. ಇವರೊಂದಿಗೆ ಇದ್ದ ಸುಮಾ ಎಂಬವರು ಕೆಲ ದಿನಗಳ ಹಿಂದೆ ಬೆಳಪುವಿನಲ್ಲಿ ಪ್ರತ್ಯೇಕವಾಗಿ ಮೀನು ಮಾರಾಟ ಅಂಗಡಿಯನ್ನು ತೆರೆದಿದ್ದು, ಇದರಿಂದ ತೊಂದರೆ ಯಾಗುತ್ತಿದೆ ಎಂದು ಮಹಿಳಾ ಮೀನು ಮಾರಾಟಗಾರರು ದೂರಿದ್ದಾರೆ.
ಸಂಘಕ್ಕೆ ಮನವಿ
ಬೆಳಪು ಗ್ರಾಮದಲ್ಲಿ ಹಸಿ ಮೀನು ಮಾರಾಟ ಅಂಗಡಿ ಪ್ರಾರಂಭಿಸಿರುವುದರಿಂದ 4 ದಿನ ಗಳಿಂದ ವ್ಯಾಪಾರ ಕುಂಠಿತವಾಗಿದೆ. ಬೆಳಪು, ಪಣಿಯೂರು, ಮಲ್ಲಾರು, ಮಜೂರಿನಿಂದ ಬರುವ ಗ್ರಾಹಕರು ಬೆಳಪುವಿನಲ್ಲೇ ಮೀನು ಖರೀದಿಸುತ್ತಿದ್ದು, ಕಾಪುವಿನಿಂದ ಮನೆ ಮನೆ ಮೀನು ಮಾರಾಟಗಾರರಿಗೂ ಇದರಿಂದ ತೊಂದರೆಯಾಗುತ್ತಿದೆ. ಇದನ್ನು ಬಗೆಹರಿಸಿ ಕೊಡುವಂತೆ ಕಾಪುವಿನ ಮಹಿಳಾ ಮೀನುಗಾರರು ಉಡುಪಿ ತಾ| ಮಹಿಳಾ ಹಸಿ ಮೀನು ಮಾರಾಟಗಾರರ ಸಂಘಕ್ಕೆ ಮನವಿ ಸಲ್ಲಿಸಿದ್ದಾರೆ.
ಶನಿವಾರ ದಿನವಿಡೀ ಪ್ರತಿಭಟನೆ ನಡೆಸಿದ ಮಹಿಳೆಯರು ಬೆಳಪುಗೆ ತೆರಳಿ ಸುಮಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಅಂಗಡಿ ಮುಚ್ಚಿ ಪಾರಂಪರಿಕ ಮಾದರಿಯಲ್ಲಿ ಮೀನು ಮಾರಾಟಕ್ಕೆ ಸಹಕರಿಸಲು ಮನವಿ ಮಾಡಿದ್ದಾರೆ.
ಸ್ಥಳಾವಕಾಶದ ಕೊರತೆ
ಬೆಳಪುವಿನಲ್ಲಿ ಗ್ರಾಮ ಪಂಚಾಯತ್ ಅನುಮತಿ ಮೇರೆಗೆ ಅಂಗಡಿ ತೆರೆಯಲಾಗಿದೆ. ಕಾಪು ಮಾರುಕಟ್ಟೆಯಲ್ಲಿ ಕುಳಿತು ಕೊಳ್ಳಲು, ಮೀನು ಮಾರಾಟ ಮಾಡಲು ಸ್ಥಳಾವಕಾಶದ ಕೊರತೆಯಿದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಮಾರಾಟಕ್ಕೆ ಉದ್ದೇಶಿಸಿದ್ದೇನೆ. ಇದಕ್ಕೆ ನಮ್ಮದೇ ಸಮುದಾಯದ ಮಹಿಳೆಯರು ವಿರೋಧಿಸುವುದು ಬೇಸರ ತಂದಿದೆ.
– ಸುಮಾ,ಬೆಳಪುವಿನ ಮೀನು ಮಾರಾಟ ಮಹಿಳೆ
ಒಟ್ಟಾಗಿ ತೀರ್ಮಾನ
ಕಾಪುವಿನಲ್ಲಿ ನಾವೆಲ್ಲರೂ ಒಟ್ಟಾಗಿ ಮೀನು ಮಾರಾಟ ನಡೆಸುತ್ತಿದ್ದೇವೆ. ಈಗ ನಮ್ಮೊಂದಿಗೆ ಇದ್ದವರು ಬೇರೊಂದು ಪ್ರದೇಶದಲ್ಲಿ ಅಂಗಡಿ ತೆರೆದಿರುವುದು ಸಮಂಜಸವಲ್ಲ. ಮುಂದೆ ಎಲ್ಲರೂ ಇದೇ ರೀತಿ ಮಾಡಿದರೆ ನಮ್ಮ ಪಾಡೇನು ಎಂಬ ಚಿಂತೆ ಇದೆ. ಈ ಬಗ್ಗೆ ಅವರ ಬಳಿಯೂ ಮಾತುಕತೆ ನಡೆಸಿದ್ದೇವೆ. ಒಟ್ಟಾಗಿ ತೀರ್ಮಾನ ತೆಗೆದುಕೊಳ್ಳುತ್ತೇವೆ.
– ಶಾಂತಾ, ಕಾಪು ಮೀನು
ಮಾರಾಟಗಾರ ಮಹಿಳಾ ಮುಖಂಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ