ಜನರನ್ನು ಎಚ್ಚರಿಸುತ್ತಿರುವ ಆಲದ ಮರದ ಬ್ಯಾನರ್
Team Udayavani, Sep 10, 2018, 1:10 AM IST
ಕಟಪಾಡಿ: ‘ನನ್ನನ್ನು ಈಗಾಗಲೇ ಅರ್ಧ ಕೊಂದಿದ್ದಾರೆ. ನನಗೆ ನಿಮ್ಮಿಂದ ಸಮಸ್ಯೆಯಾಗಿದೆ. ನನ್ನಿಂದ ಖಂಡಿತ ನಿಮಗೆ ಸಮಸ್ಯೆ ಆಗುತ್ತದೆ’ ಎಂಬ ಅಪಾಯದ ಮುನ್ಸೂಚನೆ ಬೀರುವ ಬ್ಯಾನರೊಂದು ಕುರ್ಕಾಲು ಸುಭಾಷ್ ನಗರದ ಆಲದ ಮರವೊಂದರ ಬುಡದಲ್ಲಿ ಕಟ್ಟಲಾಗಿದೆ.
ರಸ್ತೆಯ ವಿಸ್ತರೀಕರಣದ ಸಂದರ್ಭ ಆಲದ ಮರದ ಬುಡದಲ್ಲಿ ಸುಮಾರು ಏಳು ಆಡಿಗಳಷ್ಟು ಆಳ ಮಾಡಿ ಮಣ್ಣು ತೆಗೆಯಲಾಗಿದೆದ್ದು, ರಸ್ತೆಗೆ ಸಮತಟ್ಟಿಗೆ ಬಳಸಲಾಗಿದೆ. ಅಲ್ಲದೇ ಒಂದು ಪಾರ್ಶ್ವದಲ್ಲಿ ಮರ ಕಡಿಯಲಾಗಿದೆ. ಇದರಿಂದ ಬೃಹತ್ ಆಲದ ಮರ ಸಮತೋಲನ ಕಳೆದುಕೊಂಡಿದ್ದು ಅಪಾಯ ಆಹ್ವಾನಿಸುತ್ತಿದೆ. ಅಲ್ಲದೇ ವಿದ್ಯುತ್ ತಂತಿಗಳು ಸಹ ಇದರ ಪಕ್ಕದಲ್ಲಿಯೇ ಹಾದು ಹೋಗಿ ಸಮಸ್ಯೆ ಸೃಷ್ಟಿಸಿದೆ. ಮರ ತೆರವು ಬಗ್ಗೆ 2017ರಲ್ಲಿಯೇ ಕುರ್ಕಾಲು ಗ್ರಾಮ ಪಂಚಾಯತ್ಗೆ ಮನವಿ ನೀಡಲಾಗಿದ್ದು, ಆದರೂ ಸೂಕ್ತ ಕ್ರಮಕೈಗೊಂಡಿಲ್ಲ.
ಆಲದ ಮರ ಆಧಾರ ತಪ್ಪಿದಲ್ಲಿ ತೊಂದರೆ ಶತಸಿದ್ಧ. ಇಲಾಖೆ ಗಮನ ಹರಿಸಿ ಗಂಭೀರ ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಆಲದ ಮರವನ್ನು ಅರ್ಧ ಕಡಿದು ಬಿಟ್ಟಿದ್ದಾರೆ. ಹಲವಾರು ಬಸ್ಸು, ವಾಹನ, ಜನ ಸಂಚಾರ ಇರುವ ರಸ್ತೆ ಇದಾಗಿದ್ದು, ಅಪಾಯ ಕಟ್ಟಿಟ್ಟ ಬುತ್ತಿ. ಹೈಟೆನ್ಷನ್ ವಿದ್ಯುತ್ ತಂತಿಯೂ ಇಲ್ಲಿದ್ದು ಅಪಾಯ ಹೆಚ್ಚಿದೆ ಎಂದು ನಾಗರಿಕರು ದೂರಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್