ಕಾಲು ಬಲಹೀನ ಬಾಲೆಗೆ ಲಕ್ಷ ರೂ. ನೆರವು
Team Udayavani, Sep 13, 2018, 4:35 AM IST
ಕಟಪಾಡಿ: ಬಡವರು, ನೊಂದವರ ಸೇವೆಯ ಮೂಲಕ ದೇವರನ್ನು ಕಾಣುವ ಕೆಲಸ ಫ್ರೆಂಡ್ಸ್ ಸರ್ಕಲ್ ಪಳ್ಳಿಗುಡ್ಡೆ ಯುವಕರ ತಂಡದಿಂದ ನಡೆದಿದೆ. ಸರ್ವರಲ್ಲಿಯೂ ರಾಷ್ಟ್ರಧ್ವಜದಡಿ ಸಹಬಾಳ್ವೆ ನಡೆಸುವ ಪರಿಕಲ್ಪನೆಯು ಬರಬೇಕಿದ್ದು, ಮಾತೃಭಕ್ತಿ, ದೇವ ಭಕ್ತಿ, ದೇಶ ಭಕ್ತಿ ಮನಮಾಡಲಿ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು.
ಬುಧವಾರ ವಿನೋಬಾ ನಗರದಲ್ಲಿ ಫ್ರೆಂಡ್ಸ್ ಸರ್ಕಲ್ ಪಳ್ಳಿಗುಡ್ಡೆ ಯುವಕರ ತಂಡವು ಹುಟ್ಟಿನಿಂದಲೇ ತನ್ನೆರಡೂ ಕಾಲುಗಳ ಬಲ ಕಳೆದುಕೊಂಡಿರುವ ಪೊಸಾರು ಎಂಬಲ್ಲಿನ ಕಸ್ವಿ ಎಂಬ 4 ವರ್ಷದ ಬಾಲೆಯ ಶಸ್ತ್ರ ಚಿಕಿತ್ಸೆಯ ವೆಚ್ಚ ಭರಿಸಲು ಕೃಷ್ಣಾಷ್ಟಮಿಯ ಸಂದರ್ಭ ವೇಷ ಧರಿಸಿ ಸಂಗ್ರಹಗೊಂಡ ಹಣದಲ್ಲಿ ಒಂದು ಲಕ್ಷ ರೂಪಾಯಿಯನ್ನು ಪೋಷಕರಿಗೆ ಹಸ್ತಾಂತರಿಸಿ ತಮ್ಮ ಆಶೀರ್ವಚನದಲ್ಲಿ ಮಾತನಾಡಿದರು.
ಅಂಬಾಡಿ ಸಿಎಸ್ಐ ಚರ್ಚ್ನ ಧರ್ಮಗುರು ವಂ|ಎಡ್ವಿನ್ ಜೋಸೆಫ್ ಮಾತನಾಡಿ, ನೊಂದ ಮನಸ್ಸಿನ ನೋವಿಗೆ ಸ್ಪಂದಿಸುವ ಮೂಲಕ ದೇವರು ಪ್ರೀತಿಸುವ ಚಟುವಟಿಕೆಯು ಯುವತಂಡದಿಂದ ನಡೆದಿದ್ದು, ಬಾಲೆಯ ಬದುಕು ಹಸನಾಗಲಿ ಎಂದರು. ಕಟಪಾಡಿ ಜುಮ್ಮಾ ಮಸೀದಿಯ ಧರ್ಮಗುರು ಯೂಸುಫ್ ಜುವಾರಿ ಮಾತನಾಡಿ, ದಾರಿ ತಪ್ಪಿದವರನ್ನು ಸರಿದಾರಿಗೆ ಕೊಂಡೊಯ್ಯುವುದೇ ಧರ್ಮಗಳ ಮೂಲ. ಕಷ್ಟಕಾಲದಲ್ಲಿ ಸಹಾಯ ಮಾಡುವ ಮಾನವೀಯತೆ ಇಲ್ಲಿ ಮೌಲ್ಯ ಪಡೆದುಕೊಂಡಿದೆ ಎಂದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾತನಾಡಿ, ಅಮೂಲ್ಯವಾದ ದೇಶದ ಯುವ ಸಂಪತ್ತು ದುರ್ವ್ಯಸನ ಮುಕ್ತರಾಗಬೇಕು. ಜನಸಾಮಾನ್ಯರ ಸಂಕಷ್ಟದಲ್ಲಿ ಆಸರೆಯಾಗುವುದು ಶ್ರೇಷ್ಠ ಸೇವೆಯಾಗಿದೆ. ಇಂತಹ ಸಂಸ್ಥೆಯು ಉನ್ನತಿಗೇರಬಲ್ಲುದು ಎಂದರು.
ಈ ಸಂದರ್ಭ ವೈದ್ಯಕೀಯ ಶುಶ್ರೂಶೆ ಮತ್ತು ಮನೆ ರಿಪೇರಿಗೆ ಸಹಾಯಧನವನ್ನು ವಿತರಿಸಲಾಯಿತು. ವೇಷಧಾರಿ ಗೌರೀಶ್ ಪೂಜಾರಿ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಜಿಪಂ ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ರಾಜೇಶ್ ಕುಮಾರ್ ಅಂಬಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಚಂದ್ರಕಲಾ, ಸಂಸ್ಥೆಯ ಪ್ರಮುಖರಾದ ಭಾಸ್ಕರ್ ಕಾಂಚನ್, ರಮೇಶ್ ಕೋಟ್ಯಾನ್, ಸುರೇಶ್ ಮೇಸ್ತ್ರಿ, ಪ್ರಭಾಕರ್ ಕೋಟ್ಯಾನ್, ಉದಯ ಪೂಜಾರಿ, ರಾಹುಲ್ ಪೂಜಾರಿ ಉಪಸ್ಥಿತರಿದ್ದರು. ಗೀತಾಂಜಲಿ ಸುವರ್ಣ ಸ್ವಾಗತಿಸಿದರು. ಚಂದ್ರಕಲಾ ವಂದಿಸಿದರು. ರಾಜು ಸಂತೆಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ