ಪೆಟ್ರೋಲ್‌ ಖಾಲಿಯಾದಾಗ ನೆರವಾಗುವ ಆಪತ್ಭಾಂಧವ ಬ್ರಹ್ಮಾವರದ ಉಮೇಶ್‌!


Team Udayavani, Oct 6, 2018, 6:40 AM IST

0510bvre1.jpg

ಬ್ರಹ್ಮಾವರ: ರಕ್ತದಾನ, ನೇತ್ರದಾನ ಇತ್ಯಾದಿಗಳನ್ನು ಕೇಳಿದ್ದೀರಿ. ಆದರೆ ಇಲ್ಲೊಬ್ಬರು ಪೆಟ್ರೋಲ್‌ ದಾನಿಯಾಗಿ ಆಪದ್ಭಾಂಧವರಾಗಿದ್ದಾರೆ. ಅವರೇ  ಬ್ರಹ್ಮಾವರ ಚಾಂತಾರಿನ ಉಮೇಶ್‌ ಪೂಜಾರಿ.

ಪೆಟ್ರೋಲ್‌ ಖಾಲಿಯಾಗಿ ಬೈಕ್‌ ಇನ್ನೇನು ತಳ್ಳಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಬಾಟಲಿಯಲ್ಲಿ ಪೆಟ್ರೋಲ್‌ ಹಿಡಿದು ಬರುತ್ತಾರೆ ಈ ಪೆಟ್ರೋಲ್‌ ಆಪದ್ಭಾಂಧವ. ಉಚಿತವಾಗಿ ಪೆಟ್ರೋಲ್‌ ನೀಡಿ ಸಹಾಯ ಮಾಡುತ್ತಾರೆ. ಇದಕ್ಕಾಗಿ ಅವರು ಸದಾ ಬೈಕ್‌ನಲ್ಲಿ ಸುಮಾರು ಅರ್ಧ ಲೀಟರ್‌ ಪೆಟ್ರೋಲ್‌ ಇಟ್ಟುಕೊಂಡಿರುತ್ತಾರೆ.  

ಏನು ಪ್ರೇರಣೆ ?
6 ವರ್ಷದ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ಫ್ಲೈ ಓವರ್‌ ಒಂದರಲ್ಲಿ ನವದಂಪತಿ ಬೈಕ್‌ ಅನ್ನು ತಳ್ಳಿಕೊಂಡೇ ಹೋಗುತ್ತಿದ್ದರು. ಇದನ್ನು ನೋಡಿದ ಅವರು ಪೆಟ್ರೋಲ್‌ ನೀಡಲಾಗದಿದ್ದೂ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದರು.  ಆ ಘಟನೆ ಬಳಿಕ ಅವರು ಇಂತಹ ಸಂದಿಗ್ಧಕ್ಕೆ ಸಿಲುಕಿದವರಿಗೆ ಉಪಕಾರವಾಗಲಿ ಎಂದು ತನ್ನ ಬೈಕ್‌ನಲ್ಲಿ ಹೆಚ್ಚುವರಿಯಾಗಿ ಬಾಟಲಿಯಲ್ಲಿ ಪೆಟ್ರೋಲ್‌ ಇಟ್ಟುಕೊಂಡೇ ಹೋಗುತ್ತಾರೆ. 
 
ನೂರಾರು ಮಂದಿಗೆ ಸಹಾಯ
ಬೆಂಗಳೂರಿನಲ್ಲಿ ಇರುವಾಗ 100ಕ್ಕೂ ಹೆಚ್ಚು ಜನರಿಗೆ, ಬಳಿಕ ಊರಿಗೆ ಬಂದ ಮೇಲೆ 300ಕ್ಕೂ ಮಿಕ್ಕಿ ಮಂದಿಗೆ ಈ ರೀತಿ ನೆರವು ನೀಡಿದ್ದಾರೆ. ಬಾವಿ ಗುತ್ತಿಗೆ ಕೆಲಸ ನಿಮಿತ್ತ ಗ್ರಾಮಾಂತರ ಭಾಗದಲ್ಲಿ ತಿರುಗಾಟ ಮಾಡುವಾಗ ಅದೆಷ್ಟೋ ಮಂದಿಗೆ ನೆರವಾಗಿದ್ದಾರೆ.

ವಿಶಿಷ್ಟ ಸೇವೆ
ಉಮೇಶ್‌ ಅವರು ಪೆಟ್ರೋಲ್‌ ಮಾತ್ರವಲ್ಲ  ರೇಷನ್‌ ಅಕ್ಕಿಯನ್ನು ಬಡವರು ಮನೆಗೆ ತೆಗೆದುಕೊಂಡು ಹೋಗಲೂ ನೆರವಾಗುತ್ತಾರೆ. ಬೈಕ್‌ನಲ್ಲೇ ಮನೆಗೆ ತಲುಪಿಸಿ ಕೊಡುತ್ತಾರೆ. ಅಲ್ಲದೆ ಸರಕಾರಿ ಸೌಲಭ್ಯಗಳು ದೊರಕಿಸಿ ಕೊಡಲು ನೆರವಾಗುತ್ತಾರೆ. ಇನ್ನು ಶಾಲಾ ಮಕ್ಕಳ ಸೈಕಲ್‌ಗೆ ಗಾಳಿ ಹಾಕಲು ಪಂಪ್‌ ಒದಗಿಸುವ ಆಲೋಚನೆಯಲ್ಲಿದ್ದಾರೆ!

ಬಹುಮುಖ ಪ್ರತಿಭೆ
ಬಹುಮುಖ ಪ್ರತಿಭೆಯ ಉಮೇಶ್‌ ಅವರು  ಕ್ರಿಕೆಟ್‌ವೀಕ್ಷಕ ವಿವರಣೆಕಾರನಾಗಿ ಕರ್ನಾಟಕದಾದ್ಯಂತ ಮಾತ್ರವಲ್ಲ ಗೋವಾ, ಮಹಾರಾಷ್ಟ್ರ, ದೂರದ ಮಲೇಷ್ಯಾಕ್ಕೂ ಹೋಗಿ ಬಂದಿದ್ದಾರೆ. ನಾಟಕದಲ್ಲಿ ಸಕ್ರಿಯ, ಬ್ರಹ್ಮಾವರದ ಹಾಸ್ಯ ಕಲಾವಿದರಾಗಿ, ಯಕ್ಷಗಾನ ಮೈಕ್‌ ಪ್ರಚಾರಕರಾಗಿಯೂ ಗುರುತಿಸಿ ಕೊಂಡಿದ್ದಾರೆ. ಕ್ರೀಡೆಯಲ್ಲೂ ಗುರುತಿಸಿ ಕೊಂಡಿದ್ದಾರೆ ನವಕಿರಣ್‌ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯಲ್ಲಿ 24 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.  

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.