ಕದಿರು ಕಟ್ಟುವ ಸಂಭ್ರಮಕ್ಕೆ ಭತ್ತದ ತೆನೆ ಕೊರತೆ
Team Udayavani, Oct 11, 2018, 6:00 AM IST
ಮಲ್ಪೆ: ಕೃಷಿ ಬದುಕಿಗೆ ಪೂರಕವಾಗಿ ಹಿಂದಿನಿಂದಲೂ ಆಚರಣೆಯಲ್ಲಿರುವ ವಿಶಿಷ್ಟ ಹಬ್ಬಗಳಲ್ಲಿ ಕದಿರು ಕಟ್ಟುವ ಹಬ್ಬವೂ ಒಂದು. ನವರಾತ್ರಿಯಲ್ಲಿ ಪ್ರಾರಂಭವಾಗುವ ಈ ಸಾಂಪ್ರದಾಯಿಕ ಹಬ್ಬಕ್ಕೆ ಅದರದ್ದೇ ಆದ ಮಹತ್ವ ಇದೆ. ಆಧುನಿಕತೆಯ ಈ ದಿನಗಳಲ್ಲಿ ಸಂಪ್ರದಾಯವನ್ನು ತಪ್ಪದೇ ಪಾಲಿಸುತ್ತಿದ್ದರೂ ಮೊದಲಿನ ಸಂಭ್ರಮ ಮಾತ್ರ ಈಗಿಲ್ಲ.
ಭತ್ತದ ತೆನೆಯ ಕೊರತೆ
ಕದಿರು ಕಟ್ಟುವ ಹಬ್ಬಕ್ಕೆ ಕರಾವಳಿಯ ಮಂದಿಗೆ ತೆನೆಯ ಸಮಸ್ಯೆ ಕಳೆದ ಕೆಲವು ವರ್ಷಗಳಿಂದ ಎದುರಾಗುತ್ತಿದ್ದರೂ, ಈ ಬಾರಿ ಆ ಸಮಸ್ಯೆಯ ಬಿಸಿ ಮತ್ತಷ್ಟು ತಟ್ಟಿದೆ. ಕರಾವಳಿಯಲ್ಲಿ ಭತ್ತದ ಕೃಷಿ ನೇಪಥ್ಯಕ್ಕೆ ಸರಿಯತೊಡಗಿದೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ಆದ್ದರಿಂದ ಕೃಷಿಕರು ತಮಗೆ ಎಷ್ಟೊ ಬೇಕೊ ಅಷ್ಟು ಮಾತ್ರ ಕೃಷಿ ಮಾಡುತ್ತಾರೆ.
ಉಳಿದಂತೆ ತೋಟವಾಗಿ ಮಾರ್ಪಡಿಸಿ ದರೆ ಇನ್ನು ಕೆಲವರು ಪಾಳು ಬಿಟ್ಟಿದ್ದಾರೆ. ಹಾಗಾಗಿ ಜನರು ಕದಿರಿಗಾಗಿ ಅಲೆದಾಡುವುದು ಸಾಮಾನ್ಯವಾಗಿದೆ. ಚೌತಿ ಹಬ್ಬದ ಜೊತೆಗೆ ಹೊಸತನ್ನು ಆಚರಿಸುವ ಮಂದಿ ಆ ವೇಳೆ ಗದ್ದೆಯಲ್ಲಿ ಭತ್ತದ ತೆನೆ ಬಲಿತಗೊಳ್ಳದ ಕಾರಣ ಈ ಭಾರಿ ಹೆಚ್ಚಿನ ಮಂದಿ ನವರಾತ್ರಿಯಲ್ಲಿ ಆಚರಿಸುತ್ತಿದ್ದೇವೆ ಎನ್ನುತ್ತಾರೆ ಅಶೋಕ್ ತೊಟ್ಟಂ ಅವರು.
ಕದ್ದುಮುಚ್ಚಿ ಕೊಯ್ಯುವುದು!
ಕೆಲವೊಂದು ಕಡೆಗಳಲ್ಲಿ ಗದ್ದೆಯ ಮಾಲಕರು ಭತ್ತದ ತೆನೆಯನ್ನು ಕೊಯ್ಯಲು ಆಕ್ಷೇಪ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಕದ್ದು ಮುಚ್ಚಿ ಕೊಯ್ದು ತಂದು ಕಟ್ಟುವ ಪರಿಸ್ಥಿತಿ ನಮ್ಮ ಕರಾವಳಿ ಭಾಗದಲ್ಲಿ ಎದುರಾಗಿದೆ. ಹಾಗಾಗಿ ಈಗೀಗ ಹೆಚ್ಚಿನ ಮಂದಿ ದೇವಸ್ಥಾನಗಳಲ್ಲಿ ನೀಡುವ ಒಂದೆರಡು ತೆನೆಯನ್ನು ತಂದು ಕಟ್ಟಿಕೊಳ್ಳುತ್ತಾರೆ.
ಒಂದು ತೆನೆ ಮಾತ್ರ
ಹಿಂದೆ ಗದ್ದೆಯೇ ಮನೆ ಮಂದಿಯ ಜೀವಾಳವಾಗಿದ್ದ ಕಾಲದಲ್ಲಿ ಮನೆ ಮಂದಿಯಲ್ಲ ಸೇರಿ ಯೆಥೇಚ್ಚ ವಾಗಿ ಕದಿರನ್ನು ತಂದು ತಮ್ಮ ಮನೆಯ ಬಾಗಿಲಿನಿಂದ ಹಿಡಿದು ಹಾರೆ, ಪಿಕ್ಕಾಸು, ಅನ್ನದ ಪಾತ್ರೆ, ಇತ್ಯಾದಿ ಸುಮಾರು 30-40 ಪರಿಕರಗಳಿಗೆ ಕದಿರನ್ನು ಕಟ್ಟುವ ಸಂಪ್ರದಾಯ ಇತ್ತು. ಇಂದು ತೆನೆಯ ಅಭಾವದಿಂದಾಗಿ ದೇವರ ಕೋಣೆಗೆ ಮಾತ್ರ ಒಂದು ಸೀಮಿತಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?