ಉಡುಪಿ ನಗರ: ರಿಕ್ಷಾ ನಿಲ್ದಾಣಗಳು ಭರ್ತಿಯಾಗಿವೆ !


Team Udayavani, Oct 18, 2018, 11:08 AM IST

18-october-6.gif

ಉಡುಪಿ: ಉಡುಪಿ ಮತ್ತು ಮಣಿಪಾಲದ ಆಟೋ ರಿಕ್ಷಾ ನಿಲ್ದಾಣಗಳಲ್ಲಿ ‘ಜಾಗದ ಸಮಸ್ಯೆ’ ಉಲ್ಬಣಗೊಂಡಿದೆ. ತಮ್ಮ ರಿಕ್ಷಾ ನಿಲುಗಡೆ ಮಾಡಲು ಸ್ಥಳಾವಕಾಶ ದೊರೆಯದ ರಿಕ್ಷಾ ಚಾಲಕರು ಇತರ ರಿಕ್ಷಾ ಚಾಲಕರೊಂದಿಗೆ ಜಿದ್ದಿಗೆ ಬಿದ್ದಿದ್ದಾರೆ. ಈ ಗೊಂದಲಕ್ಕೆ ತೆರೆ ಎಳೆಯಬೇಕೆಂಬ ಜಿಲ್ಲಾಡಳಿತದ ಪ್ರಯತ್ನ ಕೂಡ ಕೈಗೂಡಿಲ್ಲ.

‘ಸ್ಥಳ ಕೊರತೆ’ ಮುಖ್ಯವಾಗಿ ಉಡುಪಿ ನಗರದಲ್ಲಿ ರಿಕ್ಷಾ ಚಾಲಕರ ಕೆಲವು ಗುಂಪುಗಳ ನಡುವೆ ಆಗಾಗ್ಗೆ ಘರ್ಷಣೆಗೆ ಕಾರಣವಾಗುತ್ತಿದೆ. ‘ಇರುವ ನಿಲ್ದಾಣಗಳಲ್ಲಿ ಜಾಗವಿಲ್ಲ. ಹಾಗಾಗಿ ಈಗ ಹೊಸದಾಗಿ ಬರುವವರಿಗೆ ಅವಕಾಶ ನೀಡುವುದು ಸಾಧ್ಯವಿಲ್ಲ’ ಎನ್ನುತ್ತದೆ ರಿಕ್ಷಾ ಚಾಲಕರ ಒಂದು ಗುಂಪು. ‘ಈಗ ಇರುವ ರಿಕ್ಷಾಗಳ ಜತೆ ಮತ್ತಷ್ಟು ರಿಕ್ಷಾಗಳು ಬಂದರೆ ನಮ್ಮ ಹೊಟ್ಟೆ ಪಾಡೇನು?’ ಎಂದು ಈ ಗುಂಪು ಪ್ರಶ್ನಿಸುತ್ತಿದೆ. ‘ನಾವು ಆಟೋರಿಕ್ಷಾವನ್ನು ಯಾವ ನಿಲ್ದಾಣದಲ್ಲಿ ಬೇಕಾದರೂ ನಿಲ್ಲಿಸಬಹುದು. ಅದಕ್ಕೆ ಆರ್‌ಟಿಒ ಕಾನೂನು ಅವಕಾಶ ಮಾಡಿಕೊಟ್ಟಿದೆ. ಈಗ ಇರುವ ಆಟೋ ಸ್ಟಾಂಡ್‌ಗಳ ಪೈಕಿ ಹಲವು ಸ್ಟಾಂಡ್‌ಗಳಲ್ಲಿ ಜಾಗ ಇದೆ. ಆದರೆ ಅವರು ನಮಗೆ ಬಿಡುತ್ತಿಲ್ಲ. ನಮ್ಮೊಂದಿಗೆ ಜಗಳಕ್ಕೆ ಬರುತ್ತಾರೆ’ ಎನ್ನುತ್ತಿದೆ ಮತ್ತೊಂದು ಗುಂಪು. 

ವಲಯ ವಿಂಗಡಣೆ ಯತ್ನ
ಮಂಗಳೂರಿನಲ್ಲಿ ವಲಯ – 1 ಮತ್ತು ವಲಯ -2 ಎಂದು ಗುರುತಿಸಿ ನಗರದೊಳಗೆ ಬಾಡಿಗೆ ಮಾಡುವ ಮತ್ತು ಗ್ರಾಮೀಣ ಭಾಗದಲ್ಲಿ ಬಾಡಿಗೆ ಮಾಡುವ ರಿಕ್ಷಾಗಳೆಂದು ವಿಂಗಡಿಸಲಾಗಿದ್ದು ಅದೇ ಮಾದರಿಯಲ್ಲಿ ಉಡುಪಿಯಲ್ಲಿಯೂ ವಲಯ 1 ಮತ್ತು 2ನ್ನು ವಿಂಗಡಿಸಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆ ಜಿಲ್ಲಾ ಸಾರಿಗೆ ಪ್ರಾಧಿಕಾರ ನಿರ್ಧರಿಸಿ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿತು. ಈಗಾಗಲೇ ಹಲವು ಸಭೆಗಳು ಕೂಡ ನಡೆದಿವೆ. ಆದರೆ ಒಮ್ಮತಕ್ಕೆ ಬರುವುದು ಅಸಾಧ್ಯವಾಗಿದೆ. ವಲಯವಾರು ವಿಂಗಡಣೆಗೆ ಕೆಲವು ರಿಕ್ಷಾ ಚಾಲಕ ಮಾಲಕರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿರುವುದರಿಂದ ಸದ್ಯ ಕಾರ್ಯಗತಗೊಂಡಿಲ್ಲ.

ನಗರಮಧ್ಯದಿಂದ 5 ಕಿ.ಮೀ ವ್ಯಾಪ್ತಿ
ಉಡುಪಿ ನಗರದ ಮಧ್ಯಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣವನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲಿನ 5 ಕಿ.ಮೀ ವ್ಯಾಪ್ತಿಯನ್ನು ‘ವಲಯ-1’ ಎಂದು ಹಾಗೂ ಅದಕ್ಕಿಂತ ಹೊರಗಿನ ಪ್ರದೇಶವನ್ನು ‘ವಲಯ-2’ ಎಂದು ಗುರುತಿಸಲು ಯೋಜಿಸಲಾಗಿದೆ. ಇದರಲ್ಲಿ ಮಣಿಪಾಲ ಕೂಡ ಸೇರುತ್ತದೆ. ಪ್ರಸ್ತುತ ಗ್ರಾಮೀಣ ಪರ್ಮಿಟ್‌ ಹೊಂದಿರುವ ಆಟೋ ರಿಕ್ಷಾಗಳಿಗೆ ನಗರ ಪ್ರವೇಶಕ್ಕೆ ಅವಕಾಶವಿಲ್ಲ. ಆದರೆ ನಗರ ಪರ್ಮಿಟ್‌ ಹೊಂದಿರುವ ಹಲವು ರಿಕ್ಷಾಗಳಿಗೂ ಅವಕಾಶ ದೊರೆಯುತ್ತಿಲ್ಲ. ವಲಯ ವಿಂಗಡಣೆ ಮಾಡಿದ ಅನಂತರ 2012ಕ್ಕಿಂತ ಹಿಂದೆ ಪರವಾನಿಗೆ ಹೊಂದಿದವರಿಗೆ ಮಾತ್ರ ವಲಯ-1(ನಗರ)ರಲ್ಲಿ ಅವಕಾಶ ಮಾಡಿಕೊಡಲಾಗುವುದು ಎನ್ನುತ್ತಾರೆ ಸಾರಿಗೆ ಇಲಾಖೆಯ ಅಧಿಕಾರಿಗಳು.

ಯಾಕಾಗಿ ಸಂಘರ್ಷ?
ನಗರದಲ್ಲಿ ಆಟೋಗಳ ಸಂಖ್ಯೆ, ನಿಲ್ದಾಣಗಳ ಸಂಖ್ಯೆ ಹೆಚ್ಚಿರುವುದು ಹೌದಾದರೂ ಈಗ ಉಂಟಾಗಿರುವ ಸಂಘರ್ಷಕ್ಕೆ ಕೆಲವು ಆಟೋ ಯೂನಿಯನ್‌ಗಳ ಪ್ರತಿಷ್ಠೆ ಕೂಡ ಒಂದು ಕಾರಣ. ಇದರಲ್ಲಿ ಒಂದಷ್ಟು ರಾಜಕೀಯ ಮೇಲಾಟಗಳು ಕೂಡ ನಡೆಯುತ್ತಿವೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗಿವೆ.

ಬಾರದಂತೆ ನಾಮಫ‌ಲಕ !
ಕಳೆದ ಒಂದು ತಿಂಗಳಿನಿಂದ ಅಮಾಯಕ ರಿಕ್ಷಾ ಚಾಲಕರ ಮೇಲೆ ದಬ್ಟಾಳಿಕೆ ನಡೆಯುತ್ತಿದೆ. ಈ ಬಗ್ಗೆ ಪ್ರಕರಣಗಳು ಕೂಡ ದಾಖಲಾಗಿವೆ. ನಗರಸಭಾ ವ್ಯಾಪ್ತಿಯ ಜಾಗವಾಗಿರುವುದರಿಂದ ಪ್ರತಿಯೊಂದು ಸ್ಟಾಂಡ್‌ನ‌ಲ್ಲಿ ಆಟೋ ಕಡಿಮೆ ಇದ್ದಾಗ ಅಲ್ಲಿ ಬೇರೆ ಆಟೋದವರಿಗೆ ದುಡಿಯಲು ಅವಕಾಶ ಕೊಡಬೇಕು. ಆದರೆ ಕೆಲವು ಸ್ಟಾಂಡ್‌ಗಳಲ್ಲಿ ‘ಮೂರು ರಿಕ್ಷಾ ಇದ್ದರೆ ಮಾತ್ರ ಸ್ಟಾಂಡ್‌ಗೆ ಬೇರೆ ರಿಕ್ಷಾ ಬರಬಹುದು’ ಎಂದು ಬರೆದಿದ್ದಾರೆ. ಹಾಗಾಗಿ ಅನೇಕ ರಿಕ್ಷಾ ಚಾಲಕರಿಗೆ ದುಡಿಯಲು ಸ್ಟಾಂಡೇ ಇಲ್ಲದಂತಾಗಿದೆ ಎನ್ನುತ್ತಾರೆ ಆಟೋ ಯೂನಿಯನ್‌ವೊಂದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಅವರು.

ಮತ್ತೊಮ್ಮೆ ಸಭೆ
ವಲಯ 1 ಮತ್ತು ವಲಯ 2 ವಿಂಗಡಣೆ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಆರಂಭದಲ್ಲಿ ಸ್ವಲ್ಪ ಗೊಂದಲಗಳು ಉಂಟಾಗಿದ್ದವು. ಅನಂತರ ಸರಿಯಾಗಿದೆ. ಉಡುಪಿಯಲ್ಲಿಯೂ ಇದೇ ರೀತಿ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಆಟೋ ರಿಕ್ಷಾ ಚಾಲಕರು, ಮಾಲಕರ ಸಭೆಗಳನ್ನು ನಡೆಸಲಾಗುತ್ತಿದೆ. ಕೆಲವು ಮಂದಿ ಮತ್ತಷ್ಟು ಕಾಲಾವಕಾಶ ಕೇಳಿದ್ದಾರೆ. ಹಾಗಾಗಿ ಇನ್ನೊಮ್ಮೆ ಸಭೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
– ಪ್ರಾದೇಶಿಕ ಸಾರಿಗೆ ಆಯುಕ್ತರು, ಉಡುಪಿ

ಅನಧಿಕೃತ ನಿಲ್ದಾಣಗಳು?
ಉಡುಪಿ, ಮಣಿಪಾಲ ನಗರದಲ್ಲಿ ಈಗ 2,390 ಆಟೋರಿಕ್ಷಾಗಳಿವೆ. ಇಲ್ಲಿ ಅಧಿಕೃತವಾಗಿ 70 ನಿಲ್ದಾಣಗಳಿವೆ. ಆದರೆ ವಾಸ್ತವದಲ್ಲಿ ಈ ಎರಡೂ ಪ್ರದೇಶದಲ್ಲಿ 100ಕ್ಕೂ ಅಧಿಕ ನಿಲ್ದಾಣಗಳಿವೆ. ಉಡುಪಿ ತಾಲೂಕಿನ ಗ್ರಾಮೀಣ ಭಾಗದಲ್ಲಿ 7,210, ಕುಂದಾಪುರ ನಗರದಲ್ಲಿ 260, ಗ್ರಾಮಾಂತರದಲ್ಲಿ 3,050, ಕಾರ್ಕಳ ನಗರದಲ್ಲಿ 21 ಹಾಗೂ ಗ್ರಾಮಾಂತರದಲ್ಲಿ 1,850 ಆಟೋಗಳು ಓಡಾಡುತ್ತಿವೆ. ಉಡುಪಿ ನಗರದಲ್ಲಿ ಹೊಸ ರಿಕ್ಷಾಗಳಿಗೆ ಕಳೆದ 3 ವರ್ಷಗಳಿಂದ ಪರವಾನಿಗೆ ನೀಡಿಲ್ಲ.

ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.