61 ವರ್ಷಗಳ ಹಿಂದಿನ ಪರಪ್ಪು ಸೇತುವೆಗೆ ಬೇಕಿದೆ ಮುಕ್ತಿ


Team Udayavani, Nov 6, 2018, 9:32 AM IST

parappu.jpg

ಕಾರ್ಕಳ: ಕಾರ್ಕಳ ಮುಖ್ಯ ಪೇಟೆಯಿಂದ ಪಳ್ಳಿ-ರಂಗನಪಲ್ಕೆ ಭಾಗಕ್ಕೆ ಸಂಪರ್ಕಿಸುವ ಕಿರಿದಾಗಿರುವ ಪರಪ್ಪು ಸೇತುವೆಯಲ್ಲಿ ಪ್ರತಿನಿತ್ಯವೂ ಸಂಚಾರಕ್ಕೆ ತೊಂದರೆ ಉಂಟಾಗುತಿದೆ. ಸುಮಾರು 61 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಸದ್ಯದ ಅಧಿಕ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ.

ಈ ಕಿರು ಸೇತುವೆ ನಿರ್ಮಾಣಗೊಂಡಾಗ ಅಂದಿನ ರಸ್ತೆಗೆ ಪೂರಕವಾಗಿ ನಿರ್ಮಾಣಗೊಂಡಿದೆ. ಆದರೆ ಅನಂತರ ಸೇತುವೆಯ ಎರಡೂ ಭಾಗದ ರಸ್ತೆಗಳು ಅಗಲಗೊಂಡಿವೆ. ವಾಹನ ಸಂಚಾರ ಅಧಿಕವಾಗಿದೆ. ಹೀಗಾಗಿ ಸೇತುವೆ ತೀರ ಇಕ್ಕಟ್ಟಾಗಿ ವಾಹಗಳ ಸುಗಮ ಸಂಚಾರಕ್ಕೆ ತೊಡಕು ಉಂಟಾಗುತ್ತಿದೆ. ಎರಡೂ ಕಡೆಯಿಂದ ವಾಹನಗಳು ಬಂದರೆ ಒಂದರ ಅನಂತರ ಮತ್ತೂಂದು ಸಂಚರಿಸಬೇಕಾಗುತ್ತದೆ.

ಉಡುಪಿಗೆ 6 ಕಿ.ಮೀ. ಸಮೀಪ..|
ಕಾರ್ಕಳದಿಂದ ಉಡುಪಿ ನಗರಕ್ಕೆ ಪರಪ್ಪು ಸೇತುವೆಯ ಮೂಲಕ ರಂಗನಪಲ್ಕೆ, ಪಳ್ಳಿಯಿಂದ ತೆರಳಲು ಸಾಧ್ಯವಿದೆ. ಅಲ್ಲದೇ ಬೈಲೂರು, ಹಿರಿಯಡ್ಕ ಮಾರ್ಗವಾಗಿ ಉಡುಪಿ ಸಂಚರಿಸುವುದಕ್ಕಿಂತ 6 ಕಿ.ಮೀ. ಸಂಪರ್ಕವೂ ಹತ್ತಿರವಾಗುತ್ತದೆ. ಸದ್ಯ ಬೈಲೂರು ಭಾಗದ ಮುಖ್ಯ ರಸ್ತೆ ಅಲ್ಲಲ್ಲಿ ಹೊಂಡಗುಂಡಿಗಳಿಂದ ತುಂಬಿದೆ. ಹೀಗಾಗಿ ಹಲವು ಖಾಸಗಿ ವಾಹನಗಳು ಈ ಸೇತುವೆ ಅವಲಂಬಿಸಿ ರಂಗನಪಲ್ಕೆ ಮೂಲಕ ಉಡುಪಿ ತೆರಳುತ್ತದೆ.

ಅಡಿಭಾಗ ಬಿರುಕು…
ಸುಮಾರು 61 ವರ್ಷಗಳ ಹಿಂದಿನ ಸೇತುವೆ ಇದಾಗಿದ್ದು, ಶಿಥಿಲಗೊಳ್ಳುತ್ತಿದೆ. ಸೇತುವೆ ಅಡಿಭಾಗದ ಕೆಲವು ಕಡೆ ಬಿರುಕುಬಿಟ್ಟಿದ್ದು, ಅಪಾಯ ಆಹ್ವಾನಿಸುತ್ತಿದೆ. ಕೆಲವೊಂದು ವಾಹನಗಳು ಸೇತುವೆಗೆ ಢಿಕ್ಕಿ ಹೊಡೆದ ಉದಾಹರಣೆಗಳೂ ಇವೆ.

ಕಾರ್ಕಳ ನಗರದ ಪ್ರತಿಯೊಂದು ಶಾಲೆಯ ವಾಹನಗಳು ಈ ಸೇತುವೆ ಮೂಲಕ ಸಂಚರಿಸುತ್ತಿವೆ. 
ಸಮೀಪದಲ್ಲೇ ಗೇರುಬೀಜ ಕಾರ್ಖಾನೆ, ಕಲ್ಲುಗಣಿಗಾರಿಕೆ ಇರುವುದರಿಂದ ಘನವಾಹನಗಳು ತೆರಳುತ್ತವೆ. ಹಲವು ಬಾರಿ ಅಪಘಾತಗಳೂ ಸಂಭವಿಸಿ ಗಾಯಗೊಂಡಿದ್ದಾರೆ.  ಹೀಗಾಗಿ ಇಲ್ಲಿ ಅಗಲವಾಗಿ ಹೊಸ ಸೇತುವೆ ನಿರ್ಮಾಣ ಆಗಬೇಕು ಎನ್ನುವುದು ಸ್ಥಳೀಯರ ಆಗ್ರಹವಿದೆ.

ಮನವಿ ಮಾಡಲಾಗಿದೆ 
ಪರಪ್ಪು ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಶಾಸಕರಿಗೆ ಪ್ರಸ್ತಾವನೆ ಮಾಡಲಾಗಿದೆ. ಘನ ವಾಹನಗಳು ಸೇರಿದಂತೆ ಪ್ರತೀದಿನ ಸಾವಿರಾರು ವಾಹನಗಳು ಈ ಸೇತುವೆಯನ್ನು ಅವಲಂಭಿಸಿವೆ. ಸೇತುವೆಯ ಸುತ್ತಮುತ್ತಲು ಪೊದೆಗಳು ತುಂಬಿತ್ತು. ಅದನ್ನು ತೆಗೆಯುವ ಕಾರ್ಯ ಮಾಡಲಾಗಿದೆ.
ರಾಜೇಶ್‌ ರಾವ್‌ ಕುಕ್ಕುಂದೂರು ಗ್ರಾ.ಪಂ. ಉಪಾಧ್ಯಕ್ಷ.

 ಸೇತುವೆ ನಿರ್ಮಾಣವಾಗಲಿ
ರಸ್ತೆಗೆ ಸರಿಯಾಗಿ ಅಗಲವಾದ ಸೇತುವೆ ನಿರ್ಮಾಣಗೊಂಡರೆ ಸಾಕಷ್ಟು ರೀತಿಯಲ್ಲಿ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಈ ಭಾಗದಲ್ಲಿ ಪ್ರತಿದಿನ ಅಧಿಕ ಸಂಖ್ಯೆಯಲ್ಲಿ ವಾಹನಗಳು ತೆರಳುತ್ತವೆ. ರಸ್ತೆ ಅಗಲವಾಗಿದ್ದು, ಸೇತುವೆ ಕಿರಿದಾಗಿದೆ. ಹೀಗಾಗಿ ಕೆಲವೊಂದು ಅಪಘಾತಗಳೂ ಕೂಡ ಹೀಗಾಗಲೇ ಸಂಭವಿಸಿದೆ.
 ಸಂದೀಪ್‌ ಪೂಜಾರಿ,  ಪರಪ್ಪು.

ಜಿವೇಂದ್ರ ಶೆಟ್ಟಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.