ಕರಾವಳಿ ಬೈಪಾಸ್ನಲ್ಲಿ ಕೆಟ್ಟು ನಿಂತ ಟ್ರಕ್: ಟ್ರಾಫಿಕ್ ಜಾಮ್
Team Udayavani, Nov 8, 2018, 11:12 AM IST
ಉಡುಪಿ: ಕರಾವಳಿ ಬೈಪಾಸ್ನ ಅಂಡರ್ಪಾಸ್ನಲ್ಲಿ ಬುಧವಾರ ಟ್ರಕ್ವೊಂದು ಕೆಟ್ಟು ನಿಂತ ಪರಿಣಾಮ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಸಂಭವಿಸಿತು.
ಬುಧವಾರ ಸಂಜೆ 5.45ರ ಸುಮಾರಿಗೆ ಮಣಿಪಾಲ ಕಡೆಯಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಟ್ರಕ್ ಕರಾವಳಿ ಬೈಪಾಸ್ ಅಂಡರ್ಪಾಸ್ನಡಿ ತಿರುವು ಪಡೆಯುತ್ತಿರುವ ಸಂದರ್ಭ ಟ್ರಕ್ ಕೆಟ್ಟು ನಿಂತಿತು. ಇದು ಸಂಚಾರ ದಟ್ಟಣೆಯ ಸಮಯವಾದ್ದರಿಂದ ಮಲ್ಪೆ ಮತ್ತು ಕುಂದಾಪುರ ಕಡೆಗೆ ತೆರಳುವವರು ಮಲ್ಪೆ ಕಡೆಯಿಂದ ಬರುವವರು ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರು.
ಪರದಾಡಿದ ಕೆಎಸ್ಆರ್ಟಿಸಿ
ಸ್ಥಳಕ್ಕೆ ಬಂದ ಪೊಲೀಸರು ಟ್ರಕ್ ನಡುವೆ ಇದ್ದ ಅಲ್ಪ ಸ್ಥಳದಲ್ಲೇ ಮೊದಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಆದರೆ ಕುಂದಾಪುರ ಕಡೆಗೆ ತೆರಳುವ ಕೆಎಸ್ಆರ್ಟಿಸಿ ಬಸ್ಸೊಂದು ಅಲ್ಲಿ ಸಿಲುಕಿಕೊಂಡಿತು. ಬಳಿಕ ಪೊಲೀಸರು ಸಂಚಾರ ಬದಲಾವಣೆ ಮಾಡಿ ಬಸ್ಗೆ ತೆರಳಲು ಅನುಕೂಲ ಮಾಡಿಕೊಟ್ಟರು.
ಬದಲಿ ವ್ಯವಸ್ಥೆ
ಬಳಿಕ ಉಡುಪಿ ಕಡೆಯಿಂದ ಮಲ್ಪೆ ಮತ್ತು ಕುಂದಾಪುರಕ್ಕೆ ತೆರಳುವವರು ಕರಾವಳಿ ಬೈಪಾಸ್ ಬಳಿ ಎಡಕ್ಕೆ ತಿರುಗಿ ಅಂಬಲಪಾಡಿ ಜಂಕ್ಷನ್ ಮೂಲಕ ಕುಂದಾಪುರ ಮತ್ತು ಮಲ್ಪೆಗೆ ತೆರಳಲು ಅವಕಾಶ ಮಾಡಿಕೊಡಲಾಯಿತು. ಮಲ್ಪೆ ಕಡೆಯಿಂದ ಉಡುಪಿಯತ್ತ ತೆರಳುವವರು ಅಂಡರ್ ಪಾಸ್ನ ಮತ್ತೂಂದು ಭಾಗದಿಂದ ತೆರಳಲು ಅನುಕೂಲ ಮಾಡಿಕೊಡಲಾಯಿತು.
ಕ್ರೇನ್ ಮೂಲಕ ತೆರವು
ಹಾಳಾದ ಟ್ರಕ್ಕನ್ನು ಪೊಲೀಸರು ಕ್ರೇನ್ ತರಿಸಿ ಸುಮಾರು ಅರ್ಧ ಗಂಟೆ ಕಾರ್ಯಾಚರಣೆ ಮಾಡಿ ತೆರವುಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ
Udupi; ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ತಯಾರಿ
ಉಡುಪಿ-ಚಿಕ್ಕಮಗಳೂರು; ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿಯ ಸ್ಪಷ್ಟತೆಯಿದೆ: ಜೆ.ಪಿ.
ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ