ಉಡುಪಿ-ಮಣಿಪಾಲ ಕಾಮಗಾರಿ: ಮಾರ್ಗ ಬದಲಾವಣೆ
Team Udayavani, Nov 17, 2018, 4:10 AM IST
ಉಡುಪಿ: ಕಡಿಯಾಳಿ- ಮಣಿಪಾಲ ರಾ.ಹೆ.ಯಲ್ಲಿ ಕಾಮಗಾರಿ ನಡೆಯುತ್ತಿರುವ ಕಾರಣ ಸಂಚಾರ ವ್ಯವಸ್ಥೆ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿಯವರು ಅಧಿಸೂಚನೆ ಹೊರಡಿಸಿದ್ದಾರೆ.
– ಉಡುಪಿಯಿಂದ ಮಣಿಪಾಲ, ಕಾರ್ಕಳ, ಶಿವಮೊಗ್ಗ ಮೊದಲಾದೆಡೆ ಹೋಗುವ ಬಸ್ಸುಗಳು ಎಂದಿನಂತೆ ಸರ್ವಿಸ್ ಬಸ್ ನಿಲ್ದಾಣದಿಂದ ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ, ಎಂಜಿಎಂ ಮಾರ್ಗವಾಗಿ ಸಂಚರಿಸಬೇಕು.
– ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲ ಬಸ್ಸುಗಳು ಎಂಜಿಎಂ, ಸುಧೀಂದ್ರತೀರ್ಥ ಮಾರ್ಗದಿಂದ ಬಲ ತಿರುವು ಪಡೆದು ಶಾರದಾ ಮಂಟಪದಿಂದ ಬೀಡಿನಗುಡ್ಡೆ, ಮಿಶನ್ ಕಂಪೌಂಡ್, ಲಯನ್ಸ್ ಸರ್ಕಲ್ ಮೂಲಕ ಬಸ್ ನಿಲ್ದಾಣಕ್ಕೆ ತಲುಪಬೇಕು.
– ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ಮತ್ತು ಮಣಿಪಾಲದಿಂದ ಉಡುಪಿಗೆ ಬರುವ ಇತರ ವಾಹನಗಳು ಏಕಮುಖ ಸಂಚಾರ ಬದಲಿಗೆ ದ್ವಿಮುಖ ಸಂಚಾರ ವ್ಯವಸ್ಥೆಯಲ್ಲಿ ತೆರಳಬೇಕು.
ಈ ಕುರಿತು ಎಸ್ಪಿ ಕಚೇರಿಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು, ಸಿಟಿ ಬಸ್ ಮಾಲಕ/ ಚಾಲಕ ಸಂಘ, ಬಸ್ ಏಜೆಂಟರ ಸಂಘದವರ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತಳೆದಂತೆ ಮಾರ್ಗ ಬದಲಾವಣೆಗೆ ಎಸ್ಪಿಯವರು ಕೋರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್