ಈ ಮನೆ ಮಂದಿ ಕರೆದರೆ ಬರುತ್ತವೆ ರಾಶಿ ರಾಶಿ ಪಕ್ಷಿಗಳು!
Team Udayavani, Nov 21, 2018, 2:50 AM IST
ಉಡುಪಿ: ಪ್ರಾಣಿ-ಪಕ್ಷಿಗಳನ್ನು ಪ್ರೀತಿಸಲು ಎಲ್ಲರಿಗೂ ಬರುವುದಿಲ್ಲ. ಈ ವಿಚಾರದಲ್ಲಿ ಉಡುಪಿ ತೆಂಕಪೇಟೆಯ ಹೊಟೇಲ್ ರಾಮಭವನದ ಮಾಲಕ, ಸಮಾಜ ಸೇವಕ ವಿಶ್ವನಾಥ ಶೆಣೈ, ಅವರ ಪತ್ನಿ ಪ್ರಭಾ ವಿ. ಶೆಣೈ, ಸಹೋದರ ಘನಶ್ಯಾಮ ಶೆಣೈ ಅವರು ಭಿನ್ನ. ನಿತ್ಯ ಮನೆಯ ಮಹಡಿಗೆ ಬರುವ ನೂರಾರು ಪಕ್ಷಿಗಳಿಗೆ ಆಹಾರ ನೀಡುವ ಮೂಲಕ ಪಕ್ಷಿ ಪ್ರೀತಿಗೆ ತೋರಿಸುತ್ತಿದ್ದಾರೆ.
ಬೆಳಗ್ಗೆ 8ಕ್ಕೆ ಹಾಜರು
ಪ್ರತಿದಿನ ಬೆಳಗ್ಗೆ 8ರ ಸುಮಾರಿಗೆ ಸರಿಯಾಗಿ ಅವರ ಮನೆಯ ಮಹಡಿಗೆ 50ರಿಂದ 100 ಪಾರಿವಾಳಗಳು, 10ರಿಂದ 20 ಕಾಗೆಗಳು, ಹತ್ತಾರು ಅಳಿಲುಗಳು ಬಂದು ಆಹಾರವನ್ನು ಸ್ವೀಕರಿಸಿ, ಕೃತಜ್ಞತಾ ಭಾವವೋ ಎಂಬಂತೆ ಅವರ ಕೈ ಮೇಲೆ ಕುಳಿತು ಹಾರಿ ಹೋಗುತ್ತವೆ. ಕಾಗೆ, ಪಾರಿವಾಳಗಳು ಮಹಡಿಯ ಒಂದು ಮೂಲೆಯಲ್ಲಿ ಬಂದರೆ, ಅಳಿಲುಗಳು ಬೇರೆ ಸ್ಥಳದಲ್ಲಿ ಬಂದು ಆಹಾರ ತಿಂದು ಹೋಗುತ್ತವೆ.
ಪಾರಿವಾಳಗಳಿಗೆ ಗೋಧಿ, ಜೋಳ ಹಾಕಿದರೆ, ಕಾಗೆ ಮತ್ತು ಅಳಿಲುಗಳಿಗೆ ಗಳಿಗೆ ಕರಿದ ಆಹಾರ, ಮನೆಯ ನಿತ್ಯದ ಆಹಾರಗಳಾದ ಚಪಾತಿ, ದೋಸೆ, ಇಡ್ಲಿಗಳನ್ನೇ ಹಾಕುತ್ತಾರೆ. 5 ಮಂದಿ ವಾಸವಿರುವ ಮನೆಯಲ್ಲಿ ಬೆಳಗ್ಗೆ ಪಕ್ಷಿಗಳಿಗೆ ದವಸ ಧಾನ್ಯ, ಕಾಳು, ನೀರು, ತಿಂಡಿ ತಿನಿಸುಗಳನ್ನು ನೀಡಿದ ಬಳಿಕವೇ ಅವರು ಉಪಹಾರ ಸೇವಿಸುವುದು ಪರಿಪಾಠ. ಜತೆಗೆ ಪಕ್ಷಿಗಳಿಗೆ ಹಾಕಲು ತುಸು ಹೆಚ್ಚುವರಿ ಆಹಾರ ತಯಾರಿಸುತ್ತಾರೆ. ಪಾರಿವಾಳಗಳಿಗಾಗಿ ಗೋಧಿ, ಜೋಳ ಖರೀದಿಸಿ ತಂದಿಟ್ಟುಕೊಳ್ಳುತ್ತಾರೆ.
ಆಹಾರ ಪೂರೈಸಲು ಪ್ರೇರಣೆ
ಶೆಣೈ ಅವರ ಮನೆಯ ಬಳಿಯ ನಾಗಬನದ ಬಳಿಯಿರುವ ಮರದಲ್ಲಿ ಸಾಕಷ್ಟು ಹಣ್ಣು ಬೆಳೆಯುತ್ತಿತ್ತು. ಅದನ್ನು ತಿನ್ನಲು ಹಿಂದೆ ಈ ನೂರಾರು ಪಕ್ಷಿಗಳು ಸದಾ ಬರುತ್ತಿದ್ದವು. ಮರ ಕಡಿದ ಕಾರಣ ಆಹಾರವಿಲ್ಲದೆ ಪಕ್ಷಿಗಳು ಪಡುವ ಕಷ್ಟ ಗಮನಿಸಿ ತಾವೇ ಆಹಾರ ನೀಡಲು ನಿರ್ಧರಿಸಿದರು. ಪಕ್ಷಿಗಳು ನಿರ್ಭೀತಿಯಿಂದ ಬಂದು ಆಹಾರ ಸ್ವೀಕರಿಸಿ ತೆರಳುತ್ತವೆ. ಮತ್ತೆ ಪುನಃ ಬೆಳಗ್ಗೆ 8ಕ್ಕೆ ಹಾಜರಾಗುತ್ತವೆ. ಮಧ್ಯಾಹ್ನ, ಸಂಜೆಯ ಹೊತ್ತಿಗೂ ಕೆಲವು ಪಕ್ಷಿಗಳು ಮಾತ್ರ ಬರುತ್ತವೆ. ಬೇರೆ ಮಹಡಿಯಲ್ಲಿ ಕುಳಿತು ಮನೆಯವರು ಹೊರಗೆ ಬರುತ್ತಾರೆಯೇ ಪಕ್ಷಿಗಳು ವೀಕ್ಷಿಸುವುದೂ ಉಂಟು ಎಂದು ಶೆಣೈ ಅವರು ಹೇಳುತ್ತಾರೆ.
ಮನಸ್ಸಿಗೆ ತೃಪ್ತಿ
ನಮಗೆ ಹಿಂದಿನಿಂದಲೂ ಪ್ರಾಣಿ, ಪಕ್ಷಿಗಳೆಂದರೆ ಅದೇನೋ ಪ್ರೀತಿ, ವಾತ್ಸಲ್ಯ. ಹಲವಾರು ವರ್ಷಗಳಿಂದ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದೇವೆ. ಆಹಾರ ಸ್ವೀಕರಿಸುವಾಗ, ಸ್ವೀಕರಿಸಿದ ಬಳಿಕ ಪಕ್ಷಿಗಳು ತೋರಿಸುವ ಕೃತಜ್ಞತಾ ಭಾವದಿಂದ ಸಂತೃಪ್ತ ಭಾವನೆ ಮೂಡುತ್ತದೆ.
– ವಿಶ್ವನಾಥ ಶೆಣೈ ಉಡುಪಿ
— ಎಸ್.ಜಿ. ನಾಯ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್
UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ