ಮೂಳೆ ಬೆಳವಣಿಗೆ ಕುಂಠಿತ  ಮಾಡಬಲ್ಲ ಹೊಸ ರೋಗ ಪತ್ತೆ 


Team Udayavani, Dec 15, 2018, 10:55 AM IST

bone.jpg

ಉಡುಪಿ: ಮಣಿಪಾಲದ ಕೆಎಂಸಿ ಮೆಡಿಕಲ್‌ ಜೆನೆಟಿಕ್ಸ್‌ ವಿಭಾಗದ ವೈದ್ಯಕೀಯ ವಿಜ್ಞಾನಿಗಳ ತಂಡ ಮಕ್ಕಳಲ್ಲಿ ಮೂಳೆ ಬೆಳವಣಿಗೆಯನ್ನು ಕುಂಠಿತ ಮಾಡಬಲ್ಲ ಅಪರೂಪದ ರೋಗ ವೊಂದನ್ನು ಮೊದಲ ಬಾರಿಗೆ ಪತ್ತೆ ಮಾಡಿದ್ದಾರೆ.  

ಈ ಸ್ಥಿತಿಯು ಮೂಳೆಗಳ ಅಸಹಜ ಬೆಳವಣಿಗೆ ಯಿಂದ ವ್ಯಕ್ತಿಗಳಲ್ಲಿ  ಕುಬ್ಜತೆಯನ್ನು ಉಂಟು ಮಾಡುತ್ತದೆ. ಇದರ ಜೆನೆಟಿಕ್‌ ಮೂಲವನ್ನೂ ಸಹ ಪತ್ತೆ ಹಚ್ಚುವುದರಲ್ಲಿ ತಂಡವು ಯಶಸ್ವಿಯಾಗಿದೆ ಎಂದು ತಂಡದ ಮುಖ್ಯಸ್ಥರಾದ ಡಾ| ಗಿರೀಶ್‌ ಕಟ್ಟ ತಿಳಿಸಿದ್ದಾರೆ. ಈ ಸಂಶೋಧನೆಯನ್ನು ಹೆಸರಾಂತ ವೈದ್ಯಕೀಯ ಪತ್ರಿಕೆ “ಹ್ಯೂಮನ್‌ ಮ್ಯೂಟೇಶನ್‌’ನ‌ಲ್ಲಿ ಪ್ರಕಟಿಸಲಾಗಿದೆ.

ಎರಡು ಬೇರೆ ಬೇರೆ ಕುಟುಂಬದ ಮಕ್ಕಳನ್ನು ಪರಿಶೀಲಿಸಿದಾಗ ಅವರ ಬೆಳವಣಿಗೆ ಸಾಮಾನ್ಯ ಮಕ್ಕಳಿಗಿಂತ ತುಂಬಾ ಕುಂಠಿತವಾಗಿರುವುದು ಮತ್ತು ಅವರ ಬೆಳವಣಿಗೆ ಬಹಳ ನಿಧಾನಗತಿಯಲ್ಲಿರುವುದನ್ನು ಮಕ್ಕಳ ತಜ್ಞರು ಗಮನಿಸಿ ಮಣಿಪಾಲದ ಜೆನೆಟಿಕ್ಸ್‌ ವೈದ್ಯರ ಸಲಹೆಗಾಗಿ ಶಿಫಾರಸು ಮಾಡಿದರು.

ಡಾ| ಗಿರೀಶ್‌ ಕಟ್ಟ ಮತ್ತು ಡಾ| ಅಂಜು ಶುಕ್ಲಾ ಅವರು ಇದು ಸಾಮಾನ್ಯವಾಗಿ ಕಂಡುಬರುವ ಸ್ಥಿತಿಯಲ್ಲ ಎಂದು ಅರಿತು ಎಕೊಮ್‌ ಸಿಕ್ವೆನ್ಸಿಂಗ್‌ ಎಂಬ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಯ ಎಲ್ಲ ಆನುವಂಶಿಕ ಧಾತು(ಜೀನ್ಸ್‌)ಗಳನ್ನು ಅಧ್ಯಯನ ನಡೆಸಿದರು. ಈ ವೈದ್ಯಕೀಯ ತಂಡವು ಬಯೋ ಇನ್ಫಮ್ಯಾಟಿಕ್ಸ್‌ ಪರಿಣತರಾದ ಡಾ| ನೀತು ಕೃಷ್ಣ ಕೌಸ್ತುಭಮ್‌ ಮತ್ತು ಡಾ| ಶ್ರೀಲಕ್ಷ್ಮೀ ಭವಾನಿಯವರ ಸಹಾಯದಿಂದ ಈ ರೋಗದ ಕಾರ್ಯವಿಧಾನ ಹಾಗೂ ಲಕ್ಷಣದ ಪರಸ್ಪರ ಸಂಬಂಧವನ್ನು ಪತ್ತೆ ಮಾಡಿತು.

 ಈ ಹೊಸ ಆನುವಂಶಿಕ ಧಾತುವಿನ ಯಶಸ್ವಿ ಆವಿಷ್ಕಾರದ ಅನಂತರ ಜರ್ಮನಿಯ ಡಾ| ಕಸ್ಟಿìನ್‌ ಕುಶೆ ಮತ್ತು ಡಾ| ಲೆಯೊನ್ನಿ ವೊನ್‌ ಎಲ್ಸ°ರ್‌ ವಿಜ್ಞಾನಿಗಳ ಸಹಯೋಗದಲ್ಲಿ ತಂಡವು  ಈ ರೋಗದ ಕುರಿತು ಮತ್ತಿಷ್ಟು ಪ್ರಯೋಗಗಳನ್ನು ನಡೆಸಿತು. ಈ ಸಂಶೋಧನೆಯ ಮೇಲ್ವಿ ಚಾರಣೆಯಲ್ಲಿ ಬೆಲ್ಜಿಯಂನ ಆಂಟೆÌರ್ಪ್‌ ವಿಶ್ವ ವಿದ್ಯಾಲಯದ ಡಾ| ಹರ್ಟ್‌ ಮೊರ್ಟಿಯರ್‌ ಸಹಕರಿಸಿದ್ದರು. ಮಾಹೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿನ ನಮ್ಮ ಬದ್ಧತೆಯನ್ನು ಈ ಕಾರ್ಯವು ವಿವರಿಸುತ್ತಿದೆ ಎಂದು ಸತತ ಮೂರು ವರ್ಷಗಳ  ಯಶಸ್ವಿ ಆವಿಷ್ಕಾರವನ್ನು ಕುಲಪತಿ ಡಾ| ವಿನೋದ್‌ ಭಟ್‌ ಪ್ರಶಂಸಿಸಿದ್ದಾರೆ.

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.