ರಕ್ಷಣಾ ಇಲಾಖೆ ನೆರವು
Team Udayavani, Jan 5, 2019, 12:30 AM IST
ಉಡುಪಿ: ನಾಪತ್ತೆಯಾಗಿರುವ “ಸುವರ್ಣ ತ್ರಿಭುಜ’ ಬೋಟಿನಲ್ಲಿದ್ದ ಏಳು ಮಂದಿ ಮೀನುಗಾರರ ಪತ್ತೆ ಕಾರ್ಯ ತೀವ್ರಗೊಂಡಿದ್ದು ಇದೀಗ ಕೇಂದ್ರ ರಕ್ಷಣಾ ಇಲಾಖೆಯಿಂದಲೂ ಪತ್ತೆ ಕಾರ್ಯಕ್ಕೆ ನೆರವು ಲಭಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ ಸಂಸದೆ, ನಾಪತ್ತೆಯಾದ ಮೀನುಗಾರರ ತ್ವರಿತ ಪತ್ತೆ ಹಚ್ಚುವಿಕೆಗೆ ಸಹಕರಿಸುವಂತೆ ಮಾಡಿದ ವಿನಂತಿಗೆ ಸ್ಪಂದಿಸಿರುವ ರಕ್ಷಣಾ ಸಚಿವೆ ತತ್ಕ್ಷಣವೇ ಮಹಾರಾಷ್ಟ್ರ ಸರಕಾರ ಕೋಸ್ಟ್ಗಾರ್ಡ್ಸ್ ಮತ್ತು ಭಾರತೀಯ ನೌಕಾಸೇನೆಗೆ ಸಂಪರ್ಕಿಸಿ, ಕಣ್ಮರೆಯಾಗಿರುವ ಮೀನುಗಾರರ ತ್ವರಿತ ಪತ್ತೆ ಹಚ್ಚುವಿಕೆಗೆ ಕೈ ಜೋಡಿಸುವಂತೆ ನಿರ್ದೇಶನ ನೀಡಿದರು. ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉಪಸ್ಥಿತರಿದ್ದರು.
ಸಹೋದ್ಯೋಗಿಗಳ ನಾಪತ್ತೆಯಿಂದ ಇಡೀ ಮೊಗವೀರ ಸಮುದಾಯವೇ ಆತಂಕದಲ್ಲಿದೆ. ಅವರ ಪತ್ತೆಗಾಗಿ ಶಾಸಕ ರಘುಪತಿ ಭಟ್ ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮೀನುಗಾರರ ಜತೆ ನಾನು ಸದಾ ಇದ್ದೇನೆ. ಅವರಿಗಾಗಿ ಹೊಸದಿಲ್ಲಿಗೆ ಹೋಗಬೇಕಾದರೆ ಹೋಗುವುದಕ್ಕೂ ಸಿದ್ಧನಿದ್ದೇನೆ.
ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಪೇಜಾವರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..