ಪತ್ತೆಗೆ ವೈಜ್ಞಾನಿಕ, ಧಾರ್ಮಿಕ ಪ್ರಯತ್ನ
Team Udayavani, Jan 13, 2019, 4:07 AM IST
ಮಲ್ಪೆ: ಬೋಟ್ ಮತ್ತು 7 ಮಂದಿ ಮೀನುಗಾರರ ಪತ್ತೆಗಾಗಿ ಉಡುಪಿ ಜಿಲ್ಲಾ ಪೊಲೀಸರ ನೇತೃತ್ವದ
ಪೊಲೀಸರ 2 ತಂಡಗಳು ಮಹಾರಾಷ್ಟ್ರದ ರತ್ನಗಿರಿ, ಸಿಂಧು ದುರ್ಗಾ ಮತ್ತು ಗೋವಾ ನದಿ ತೀರದಲ್ಲಿ ಸ್ಥಳೀಯ ಮೀನುಗಾರರು ಮತ್ತು ಪೊಲೀಸರ ನೆರವಿನೊಂದಿಗೆ ಶೋಧ ನಿರತವಾಗಿವೆ.ಈ ವರೆಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಡಿ. 15ರ ಬೆಳಗ್ಗೆ ಮಹಾರಾಷ್ಟ್ರದ ಸಿಂಧುದುರ್ಗಾ ಮಾಲ್ವಣ್ನಲ್ಲಿ ಶಿಪ್ ಒಂದರಿಂದ ಬೋಟ್ ಏನಾದರೂ ಅವಘಡವಾಗಿದೆಯಾ ಎಂಬ ವಯರ್ಲೆಸ್ ಸಂದೇಶಗಳು ಕೇಳಿ ಬಂದಿರುವುದನ್ನು ಅಲ್ಲಿನ ಮೀನುಗಾರರು ಹೇಳುವ ಪ್ರಕಾರ ಯಾವ ಆಧಾರ ಮೇಲೆ ಸಂದೇಶ ಬಂತು. ಇದಕ್ಕೆ ಕಾರಣವೇನು ಎಂದು ತಿಳಿಯಲು ಆ ಜಲಮಾರ್ಗದಲ್ಲಿ ಸಾಗಿದ ಹಡಗುಗಳ ಮಾಹಿತಿ ಕಲೆ ಹಾಕುವಂತೆ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ಮುಂಬಯಿ ಎಸ್ಪಿ ಅವರನ್ನು ಕೇಳಿದ್ದಾರೆ. ಈ ಬಗ್ಗೆಯೂ ಇನ್ನು ಒಂದೆರಡು ದಿನಗಳಲ್ಲಿ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಾಲ್ತಿ ದ್ವೀಪದಲ್ಲಿ ಪೂಜೆ
ಇತ್ತ ಮೀನುಗಾರರು ಧಾರ್ಮಿಕ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಮೀನುಗಾರರ ಪತ್ತೆಗಾಗಿ ಮಲ್ಪೆ ಬಂದರು ಸಮೀಪ ಇರುವ ಮಾಲ್ತಿ ದ್ವೀಪಕ್ಕೆ ತೆರಳಿ ಮಾಲ್ತಿದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕಡಲಿಗಿಳಿಯುತ್ತಿವೆ ಬೋಟ್ಗಳು
15 ದಿನಗಳಿಂದ ಸಂಪೂರ್ಣ ಸ್ಥಗಿತಗೊಂಡಿರುವ ಆಳಸಮುದ್ರ ಮೀನುಗಾರಿಕೆ ಬೋಟುಗಳು ಹಂತ ಹಂತವಾಗಿ ತೆರಳುತ್ತಿದ್ದು, ಶುಕ್ರವಾರ ರಾತ್ರಿ ಶೇ. 5ರಷ್ಟು ಕಡಲಿಗಿಳಿದಿವೆ. ಶನಿವಾರ ರಾತ್ರಿ ಶೇ. 20 ಬೋಟ್ಗಳು ಮೀನುಗಾರಿಕೆಗೆ ತೆರಳಲಿವೆ. ಮೀನುಗಾರರ ಪತ್ತೆ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳಲು ವಿವಿಧ ಮೀನುಗಾರ ಸಂಘಟನೆಗಳ 26 ಮಂದಿಯನ್ನು ನೇಮಕ ಮಾಡಲಾಗಿದ್ದು ಮೀನುಗಾರರು ಪತ್ತೆಯಾಗುವ ವರೆಗೆ ಕಾರ್ಯ ನಿರ್ವಹಿಸಲಿದ್ದಾರೆ.
ರಾಜ್ಯ ಸರಕಾರವು ಉಪಗ್ರಹದ ಮೂಲಕ ಬೋಟ್ ಪತ್ತೆಗೆ ಇಸ್ರೋವನ್ನು ಸಂಪರ್ಕಿಸದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರಿಗೆ ಕರೆ ಮಾಡಿ ವಿಚಾರಿಸಲಾಗಿದೆ. ಸರಕಾರ ಇಸ್ರೋವನ್ನು ಸಂಪರ್ಕ ಮಾಡಿದೆಯೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಗೃಹಸಚಿವ ಎಂ.ಬಿ. ಪಾಟೀಲ್ ಅವರಲ್ಲಿ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಸತೀಶ್ ಕುಂದರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು