ನದಿಗೆ ಉರುಳಿದ ಬೊಲೆರೋ ಜೀಪ್‌; ಮಹಿಳೆ ಸಾವು


Team Udayavani, Jan 13, 2019, 4:51 AM IST

jeep.jpg

ಬೆಳ್ಮಣ್‌: ಕುಟುಂಬವೊಂದು ಸಾಗುತ್ತಿದ್ದ ಬೊಲೆರೋ ಜೀಪ್‌ ನದಿಗುರುಳಿ ಮಹಿಳೆ ಮೃತಪಟ್ಟ ಘಟನೆ ಶನಿವಾರ ಬೆಳಗ್ಗೆ ಸಂಕಲಕರಿಯದಲ್ಲಿ ಸಂಭವಿಸಿದೆ. ಜೀಪಿನಲ್ಲಿದ್ದ ಇತರ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೋಳದ ಸ್ಟಾನಿ ಮಸ್ಕರೇನಸ್‌ ಅವರ ಪತ್ನಿ ಡಯಾನಾ (45) ನೀರಿನಲ್ಲಿ ಮುಳುಗಿ ಮೃತಪಟ್ಟವರು. ಜೀಪು ಚಲಾಯಿಸುತ್ತಿದ್ದ ಸ್ಟಾನಿ ಮಸ್ಕರೇನಸ್‌ (50) ಹಾಗೂ ಮಕ್ಕಳಾದ ಶಲ್ಟನ್‌ (21), ಶರ್ಮನ್‌ (18) ಅವರು ಅಪಾಯದಿಂದ ಪಾರಾದವರು. ಜೀಪ್‌ ಸಂಕಲಕರಿಯ ಶಾಂಭವಿ ನದಿ ಸೇತುವೆಯ ತಡೆಗೋಡೆಗೆ ಬಡಿದು ನದಿಗೆ ಉರುಳಿತ್ತು.

ಮದುವೆಗೆ ಹೊರಟಿದ್ದರು
ಕಾರ್ಕಳ ತಾಲೂಕಿನ ಬೋಳ ಕೇಂದೊಟ್ಟು ಬರ್ಕೆಯ ಸ್ಟಾನಿ ಅವರು ಪತ್ನಿ, ಮಕ್ಕಳೊಂದಿಗೆ ಮಂಗಳೂರಿನ ಮಿಲಾಗ್ರಿಸ್‌ ಚರ್ಚ್‌ ಹಾಲ್‌ನಲ್ಲಿ ನಡೆಯಲಿದ್ದ ತನ್ನ ಸೊಸೆಯ ಮದುವೆಗೆ ಹೊರಟಿದ್ದರು. ಬೆಳಗ್ಗೆ 8.50ರ ಹೊತ್ತಿಗೆ ಅವರು ಚಲಾಯಿಸುತ್ತಿದ್ದ ಜೀಪ್‌ ಸಂಕಲಕರಿಯ ಶಾಂಭವಿ ನದಿ ಸೇತುವೆಯ ಪಶ್ಚಿಮ ಭಾಗದ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಮಗುಚಿತ್ತು. ಅಣೆಕಟ್ಟು ಹಾಕಿದ್ದರಿಂದ ನದಿ ತುಂಬಿ ತುಳುಕುತ್ತಿತ್ತು. ತತ್‌ಕ್ಷಣ ಸ್ಥಳೀಯರು ಮತ್ತು ಇತರ ವಾಹನಗಳ ಚಾಲಕರು ನೀರಿಗೆ ಧುಮುಕಿ ತಂದೆ-ಮಕ್ಕಳನ್ನು ಜೀಪ್‌ನಿಂದ ಹೊರಗೆಳೆದು ರಕ್ಷಿಸಿದರು.

ಯುವಕರ ಕಾರ್ಯಕ್ಕೆ ಶ್ಲಾಘನೆ
ನದಿಗೆ ಧುಮುಕಿ ಮೂವರನ್ನು ರಕ್ಷಿಸಿದ ಸಂಕಲಕರಿಯ, ಪಟ್ಟೆ, ಉಳೆಪಾಡಿ ಹಾಗೂ ಏಳಿಂಜೆ ಪರಿಸರದ ಯುವಕರ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. 50ಕ್ಕೂ ಮಿಕ್ಕಿ ಯುವಕರು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.  ಐಕಳ ಪೊಂಪೈ ಕಾಲೇಜಿನ ಉಪನ್ಯಾಸಕ ಸಂಕಲಕರಿಯದ ವಿಶ್ವಿ‌ತ್ಥ್ ಶೆಟ್ಟಿ ಅವರು ಉಟ್ಟ ಬಟ್ಟೆಯಲ್ಲಿಯೇ ನೀರಿಗೆ ಧುಮುಕಿದ್ದು, ಪಟ್ಟೆ ಕ್ರಾಸ್‌ನ ಗುಣಪಾಲ, ಉಳೆಪಾಡಿಯ ಆಶೋಕ ಮೂವರನ್ನು ರಕ್ಷಿಸಿದ ಪ್ರಮುಖರು. ನವೀನ್‌ ವಾಸ್‌, ಮುಂಡ್ಕೂರು ಗ್ರಾ.ಪಂ. ಸದಸ್ಯ ಸೋಮನಾಥ ಪೂಜಾರಿ, ಐಕಳ ಗ್ರಾ.ಪಂ. ಆಧ್ಯಕ್ಷ ದಿವಾಕರ ಚೌಟ, ಸಂಕಲಕರಿಯದ ಸುರೇಶ್‌ ಭಂಡಾರಿ, ಗಿರೀಶ್‌, ಏಳಿಂಜೆಯ ಅಕ್ಷಿತ್‌ ಮತ್ತಿತರರು ಶ್ರಮಿಸಿದ್ದರು.

ಪೊಲೀಸರ ಗೊಂದಲ
ಸಂಕಲಕರಿಯ ನದಿ ಮಂಗಳೂರು ಮತ್ತು ಕಾರ್ಕಳದ ಗಡಿಭಾಗದಲ್ಲಿದ್ದು ಉಡುಪಿ ಹಾಗೂ ದ.ಕ.ವನ್ನು ಬೇರ್ಪಡಿಸುವ ಸೇತುವೆ ಇದಾಗಿದ್ದರೂ ನದಿಗೆ ಬಿದ್ದ ಜೀಪ್‌ನ ಈ ದೂರು ಯಾರು ಸ್ವೀಕರಿಸುವುದೆಂಬ ಗೊಂದಲ ಸೃಷ್ಟಿಯಾಗಿತ್ತು. ಮೂಲ್ಕಿ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಕಾರ್ಕಳ ಠಾಣೆಯ ನಾಸಿರ್‌ ಹುಸೇನ್‌ ಕಂದಾಯ ಇಲಾಖೆಯ ಮಾಹಿತಿ ಪಡೆದು ಕೊನೆಗೂ ಜೀಪ್‌ ಬಿದ್ದ ಭಾಗ ಕಾರ್ಕಳ ಪೊಲೀಸ್‌ ಠಾಣಾ ವ್ಯಾಪ್ತಿಯದ್ದೆಂಬ ತೀರ್ಮಾನದ ಬಳಿಕ ಕಾರ್ಕಳ ಠಾಣೆಯಲ್ಲಿ ಕೇಸು ದಾಖಲಿಸಲಾಯಿತು.

ಕೃಷಿ ಕುಟುಂಬ
ಬೋಳದ ಕೇಂದೊಟ್ಟುವಿನ ಸ್ಟಾನಿ ಅವರು ಕೃಷಿಕರಾಗಿದ್ದು ಪತ್ನಿ ಡಯಾನಾ ಎಡಪದವು ಪೆರಾರದವರು. ಈ ದಂಪತಿ 4 ಮಕ್ಕಳನ್ನು ಹೊಂದಿದ್ದು ಜೀಪ್‌ನಲ್ಲಿದ್ದ ಶರ್ಮನ್‌, ಶಲ್ಟನ್‌ರನ್ನು ಹೊರತುಪಡಿಸಿ ಶರಲ್‌ (ಹೆಣ್ಣು) ಹಾಗೂ ಶಾನ್‌ (ಗಂಡು) ಎಂಬ ಅವಳಿ ಮಕ್ಕಳನ್ನು ಹೊಂದಿದ್ದಾರೆ.

ಗಾಯಾಳುಗಳು ಆಸ್ಪತ್ರೆಗೆ

ಸ್ಟಾನಿ, ಮಕ್ಕಳಾದ ಶರ್ಮನ್‌ ಹಾಗೂ ಶಲ್ಟನ್‌ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಯಾನಾ ಅವರ ಮರಣೋತ್ತರ ಪ್ರಕ್ರಿಯೆ ಬೆಳ್ಮಣ್‌ ಸರಕಾರಿ ಆಸ್ಪತ್ರೆಯಲ್ಲಿ ನಡೆಯಿತು. ಮಂಗಳೂರಿನಲ್ಲಿ ನಡೆಯಲಿದ್ದ ಮದುವೆಯಲ್ಲಿ ಸ್ಟಾನಿ ದಂಪತಿ ಪ್ರಮುಖ ಜವಾಬ್ದಾರಿಯಲ್ಲಿದ್ದರೂ ಬೇಸರದ ಛಾಯೆಯಲ್ಲಿ ಸಾಂಕೇತಿಕ ವಿಧಿ ವಿದಾನಗಳೊಂದಿಗೆ ಮದುವೆ ನಡೆಯಿತು.

65 ವರ್ಷಗಳ ಹಳೆಯ ಸೇತುವೆ
ಸಂಕಲಕರಿಯ ಶಾಂಭವಿ ನದಿ ಸೇತುವೆ 65 ವರ್ಷಗಳ ಹಳೆಯದಾಗಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸೂಕ್ತ ತಡೆಗೋಡೆಯೂ ಇಲ್ಲದಿರುವ ಬಗ್ಗೆ ಉದಯವಾಣಿ ಇತ್ತೀಚೆಗೆ ಎರಡು ಬಾರಿ ಸಚಿತ್ರ ವರದಿ ಪ್ರಕಟಿಸಿತ್ತು. ಸೇತುವೆಗೆ ಕಾಯಕಲ್ಪ ಒದಗಿಸಿ ಸೇತುವೆಯ ಇಕ್ಕೆಲಗಳಿಗೆ ಕಬ್ಬಿಣದ ಸಲಾಖೆಗಳಿಂದ ತಡೆಗೋಡೆ ನಿರ್ಮಿಸಬೇಕೆಂದು ಜನ ಆಗ್ರಹಿಸಿದ್ದಾರೆ.ಸೇತುವೆಯ ನಿರ್ಲಕ್ಷದ ಬಗ್ಗೆ ಕೇಮಾರು ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಟಲದಾಸ ಸ್ವಾಮೀಜಿ ಮಾತನಾಡಿ, ಲೋಕೋಪಯೋಗಿ ಇಲಾಖೆ ಇನ್ನಾದರೂ ಎಚ್ಚೆತ್ತು ಸೇತುವೆಗೆ ತಡೆ ಬೇಲಿ ನಿರ್ಮಿಸಲಿ ಎಂದು ಆಗ್ರಹಿಸಿದ್ದಾರೆ.

ಜೀವಕ್ಕೆರವಾದ ಸೀಟ್‌ ಬೆಲ್ಟ್!
ಅಪಘಾತ ಸಂಭವಿಸಿದಾಗ ಪ್ರಯಾಣಿಕರ ಜೀವ ಉಳಿಸುವ ಸೀಟ್‌ ಬೆಲ್ಟ್ ಈ ಪ್ರಕರಣದಲ್ಲಿ ಮಾತ್ರ ಮಹಿಳೆಯ ಜೀವಕ್ಕೆ ಮುಳುವಾಯಿತು. ಜೀಪ್‌ ನೀರಿನೊಳಗೆ ಕವುಚಿಬಿದ್ದಿತ್ತು. ಡಯಾನಾ ಅವರು ಸೀಟ್‌ ಬೆಲ್ಟ್ ಧರಿಸಿದ್ದರಿಂದ ಅವರಿಗೆ ಹೊರ ಬರಲಾಗಲಿಲ್ಲ. ರಕ್ಷಣೆಗಿಳಿದವರಿಗೂ ಅವರನ್ನು ಬಿಡಿಸಿ ತರಲು ಸಾಧ್ಯವಾಗಲಿಲ್ಲ. ಜೀಪ್‌ನ ಗ್ಲಾಸ್‌ ಒಡೆಯಲೂ ಅಸಾಧ್ಯವಾಗಿ ಡಯಾನಾ ಉಸಿರುಗಟ್ಟಿ ಮೃತಪಟ್ಟರು.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

Pernankila Temple:  ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Pernankila Temple: ಪೆರ್ಣಂಕಿಲ ದೇಗುಲ: ಧಾರ್ಮಿಕ ಪ್ರಕ್ರಿಯೆ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Kaup ಸುಗ್ಗಿ ಮಾರಿಪೂಜೆ ಸಂಪನ್ನ: 2 ಲಕ್ಷಕ್ಕೂ ಅಧಿಕ ಭಕ್ತರಿಂದ ಕ್ಷೇತ್ರ ದರ್ಶನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

Vadabandeshwara Temple: ವಡಭಾಂಡೇಶ್ವರ ಬಲರಾಮ ದೇವಸ್ಥಾನ: ವೈಭವದ ಮಹಾ ರಥೋತ್ಸವ ಸಂಪನ್ನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.