ಕಾರ್ಕಳ: ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಜಾತ್ರೆ ಆರಂಭ
Team Udayavani, Jan 28, 2019, 12:50 AM IST
ಕಾರ್ಕಳ: ಸಂತ ಲಾರೆನ್ಸ್ ಬಸಿಲಿಕ, ಅತ್ತೂರು ಜಾತ್ರೆಗೆ ಜ.27ರಂದು ವಿಧ್ಯುಕ್ತವಾಗಿ ಚಾಲನೆ ದೊರೆತಿದೆ. 5 ದಿನಗಳ ಕಾಲ ನಡೆಯುವ ಸಾಂತ್ ಮಾರಿ ಹಬ್ಬಕ್ಕೆ ದೇಶ, ವಿದೇಶದಿಂದ ಜನ ಜಾತ್ರೆಯೇ ಹರಿದು ಬರುತ್ತಿದೆ. 27ರಂದು ಬೆಳಗ್ಗೆ 7.30ಕ್ಕೆ ಬಸಿಲಿಕದ ನಿರ್ದೇಶಕ, ಧರ್ಮಕೇಂದ್ರದ ಪ್ರಧಾನ ಗುರು ವಂ| ಜಾರ್ಜ್ ಡಿ’ಸೋಜಾ ಧ್ವಜಾರೋಹಣಗೈದರು.
ಅನಂತರ ಫಾ| ಚೇತನ್ ಲೋಬೋ ಪರಮ ಪ್ರಸಾದದ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ದೂಪದಕಟ್ಟೆ ತನಕ ಸಾಗಿ ಅಲ್ಲಿ ಫಾ| ಚೇತನ್ ಲೋಬೋ ಪ್ರವಚನ ನೀಡಿದರು.
ಶಾಂತಿ, ಸಮಾಧಾನ, ಸಂತೋಷದ ಹುಡುಕಾಟದಲ್ಲಿ ಅನೇಕರು ಇಂದು ಪರಿತಪಿಸುತ್ತಿದ್ದು, ಅದಕ್ಕಾಗಿ ನಾನಾ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ದೇವರ ಮೇಲಿನ ಅಚಲ ನಂಬಿಕೆ, ಧ್ಯಾನದ ಮೂಲಕ ನೆಮ್ಮದಿಯನ್ನು ಕಾಣಲು ಸಾಧ್ಯ. ಸಂತ ಲಾರೆನ್ಸ್ ಅವರು ಇತರರ ಹಿತದಲ್ಲಿ ದೇವರನ್ನು ಕಂಡವರು. ಹೀಗೆ ಮನೆಯವರ, ನೆರೆಯವರ ಒಳಿತನ್ನು ಬಯಸಿದಲ್ಲಿ ಇಲ್ಲೇ ಸ್ವರ್ಗವನ್ನು ಕಾಣಬಹುದು ಎಂದರು.
ಏಸು ಅರಮನೆಯ ಚಿನ್ನದ ತೊಟ್ಟಿಲಿನಲ್ಲಿ ಹುಟ್ಟಿದವರಲ್ಲ. ಅವರು ಬಟ್ಟೆಯಲ್ಲಿ ಸುತ್ತಿ ಗೋದಲಿಯಲ್ಲಿ ಹುಟ್ಟಿದವರು ಎಂದು ಅವರು ಯೇಸುವಿನ ಸಂದೇಶ ಸಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್