ಸಾಹಿತ್ಯ ಸಮ್ಮೇಳನದಲ್ಲಿ “ನಾಯಿ ಮರಿ’!
Team Udayavani, Jan 20, 2019, 1:00 AM IST
ಮಗು: ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ನಾಯಿ: ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ಮಗು: ನಾಯಿಮರಿ ನಿನಗೆ ತಿಂಡಿ ಯಾಕೆ ಬೇಕು?
ನಾಯಿ: ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು…
ಈ ಹಾಡಿನಲ್ಲಿ ಮಗು ಮತ್ತು ನಾಯಿ ನಡುವಿನ ಪ್ರಶ್ನೋತ್ತರವು ಶಿಶು ಸಾಹಿತ್ಯ ರಚನೆಯಾಗಿದೆ. ಇಂತಹ ಅನೇಕ ಶಿಶುಗೀತೆಗಳು 1ರಿಂದ 5ನೆಯ ತರಗತಿಯಲ್ಲಿರುತ್ತಿತ್ತು. ಇದನ್ನು ಶಿಕ್ಷಕರು ಮಕ್ಕಳ ಮೂಲಕ ಹಾಡಿಸುತ್ತಿದ್ದರು. ಅಮ್ಮನ ಜೋಗುಳದ ಹಾಡುಗಳಿಂದ ಸಾಹಿತ್ಯ ಸೃಷ್ಟಿಯಾಗುತ್ತಿತ್ತು. ಮಕ್ಕಳು ಹಾಡುತ್ತಾ ಹಾಡುತ್ತಾ ದೊಡ್ಡವರಾದ ಮೇಲೂ ನೆನಪಿನಲ್ಲಿ ಉಳಿಯುತ್ತಿತ್ತು. ಈಗ ಇಂತಹ ಶಿಶುಗೀತೆಗಳ ಸಾಹಿತ್ಯ ಹೊರಬರುತ್ತಿರುವುದೂ ವಿರಳವಾಗಿದೆ, ಕಲಿಸುತ್ತಿರುವುದೂ ಕಡಿಮೆಯಾಗಿದೆ…
ಇದು ಜಾನಪದ ಸಂಪನ್ಮೂಲ ವ್ಯಕ್ತಿ ಕುದಿ ವಸಂತ ಶೆಟ್ಟಿಯವರ ಅನಿಸಿಕೆ. ಸಂದರ್ಭ ಬ್ರಹ್ಮಗಿರಿಯಲ್ಲಿ ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ “ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮತ್ತು ಮುಗ್ಧತೆ ಮರೆಯಾಗಲು ಕಾರಣ ಮತ್ತು ಉಳಿಸುವ ಪರಿ’ ಗೋಷ್ಠಿಯಲ್ಲಿ ವಿಷಯ ಮಂಡನೆ.
ಉಪನ್ಯಾಸಕಿ ಸುಮಾ ಅವರು ಎಳೆಯ ಮಕ್ಕಳಿಗೆ ಸಾಹಿತ್ಯ ಸಿಗುವುದಿಲ್ಲ ಎಂಬ ಮಾತು ಸರಿಯಲ್ಲ. ಆಧುನಿಕ ತಂತ್ರಜ್ಞಾನದಿಂದ ಇದು ಸಿಗುವಂತೆ ಮಾಡಬಹುದು ಎಂದರು. “ಇಂತಹ ಚಿಂತನೆಗಳು ಎರಡು ಮೂರು ದಶಕಗಳ ಹಿಂದೆಯೇ ಬರಬೇಕಿತ್ತು. ಈಗ ತಡವಾಗಿ ಎಚ್ಚರವಾಗಿದೆ’ ಎಂದು ಪ್ರಾಧ್ಯಾಪಕ ಪ್ರಸಾದ್ ರಾವ್ ಹೇಳಿದರು.
ಕನ್ನಡ ಸಾಹಿತ್ಯವನ್ನು ಮಕ್ಕಳಲ್ಲಿ ಉಳಿಸಿ ಬೆಳೆಸಲು ಹೆತ್ತವರು ಮತ್ತು ಶಿಕ್ಷಕರು ಪರಿಣಾಮಕಾರಿ ಪ್ರಯತ್ನಗಳನ್ನು ಜವಾ ಬ್ದಾರಿಯಿಂದ ನಡೆಸಬೇಕಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಾಹಿತಿ, ಮನೋವೈದ್ಯ ಡಾ| ವಿರೂಪಾಕ್ಷ ದೇವರಮನೆ ಅಭಿಪ್ರಾಯ ಪಟ್ಟರು. ಶ್ರೀಧರ ಭಟ್ ಕಲ್ಯಾಣಪುರ ವಂದಿಸಿದರು. ಶ್ರೀನಿವಾಸ ಉಪಾಧ್ಯಾಯ, ಕೆ. ಮುರಳೀಧರ್ ಕಾರ್ಯಕ್ರಮ ನಿರ್ವಹಿಸಿ ದರು. ಸಮ್ಮೇಳನಾಧ್ಯಕ್ಷ ಡಾ| ಗಣನಾಥ ಎಕ್ಕಾರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್